ಆ್ಯಪ್ನಗರ

ಅಡಕೆ ಬೆಳೆಗಾರರ ಬಗ್ಗೆ ಅಫ್ಸ್‌ಕೋಸ್‌ ಕಾಳಜಿ

ಆಫ್ಸ್‌ ಕೋಸ್‌ ಸಂಸ್ಥೆಯು ಸದಸ್ಯ ಬೆಳೆಗಾರರ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದು , ಪಾರದರ್ಶಕ ಮತ್ತು ದಕ್ಷ ಸೇವೆಗೆ ಬದ್ಧವಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಬಿ.ಎ.ಇಂದೂಧರ ಬೇಸೂರು ಹೇಳಿದರು.

Vijaya Karnataka 17 Sep 2019, 5:00 am
ನಿಟ್ಟೂರು: ಆಫ್ಸ್‌ ಕೋಸ್‌ ಸಂಸ್ಥೆಯು ಸದಸ್ಯ ಬೆಳೆಗಾರರ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದು , ಪಾರದರ್ಶಕ ಮತ್ತು ದಕ್ಷ ಸೇವೆಗೆ ಬದ್ಧವಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಬಿ.ಎ.ಇಂದೂಧರ ಬೇಸೂರು ಹೇಳಿದರು.
Vijaya Karnataka Web NITTUR090447


ಹೊಸನಗರ ತಾಲೂಕು ನಿಟ್ಟೂರಿನ ಆಫ್ಸ್‌ಕೋಸ್‌ ಶಾಖೆಯಲ್ಲಿನಡೆದ ಸದಸ್ಯ ಬೆಳೆಗಾರರ ಸಭೆಯಲ್ಲಿಅವರು ಮಾತನಾಡಿ, ಅಡಕೆ ಪರಿಷ್ಕರಣ ಮತ್ತು ಮಾರಾಟ ಸಹಕಾರ ಸಂಘವು ಬೆಳೆಗಾರರ ಸಹಕಾರದಿಂದ ತನ್ನ ವ್ಯವಹಾರವನ್ನು ಪ್ರತಿವರ್ಷವೂ ಹೆಚ್ಚಿಸಿಕೊಳ್ಳುತ್ತಿದೆ. 2018-19ನೇ ಸಾಲಿನಲ್ಲಿದಾಖಲೆಯ ವ್ಯವಹಾರ ನಡೆಸಿದ್ದು, ನಿಟ್ಟೂರು ಶಾಖೆಯಲ್ಲಿಅಡಕೆ ಹಾಗು ಗೋವಿನ ಹಿಂಡಿಯ ವ್ಯಾಪಾರ ಗಣನೀಯವಾಗಿದೆ ಎಂದರು.

ಪ್ರಸ್ತುತ ಸದಸ್ಯ ರೈತರು ವಿಪರೀತ ಮಳೆಯಿಂದಾಗಿ ನೆರೆ ಉಂಟಾಗಿ ಬೆಳೆ ನಾಶವಾಗಿ ತೀವ್ರ ಸಂಕಷ್ಟದಲ್ಲಿದ್ದಾರೆ. ಆಫ್ಸ್‌ಕೋಸ್‌ ಸಂಸ್ಥೆಯು ಸದಸ್ಯರ ಸಂಕಷ್ಟಕ್ಕೆ ಸ್ಪಂದಿಸಲು ಸಿದ್ಧವಿದ್ದು, ಪರಿಹಾರ ನೀಡುವ ವಿಚಾರದಲ್ಲಿಚರ್ಚೆ ನಡೆಯುತ್ತಿದೆ ಎಂದರು.

ಸಭೆಯಲ್ಲಿಆಫ್ಸ್‌ ಕೋಸ್‌ ಆಡಳಿತ ಮಂಡಳಿ ಉಪಾಧ್ಯಕ್ಷ ಎ.ಒ.ರಾಮಚಂದ್ರ ಅಮ್ಲಾಡಿ ಹಾಗು ಸಂಸ್ಥೆ ನಿರ್ದೇಶಕರಾದ

ಕೆ.ಎಂ.ಸೂರ್ಯನಾರಾಯಣ ಖಂಡಿಕ, ಎಚ್‌.ಬಿ.ಕಲ್ಯಾಣಪ್ಪ ಗೌಡ, ಓಂಕೇಶ್‌ ಹರತಾಳು, ಸೀತಾರಾಮಯ್ಯ ಕಟ್ಟಿನಕೆರೆ, ಬಿ.ಗುರುಪಾದ ಭೀಮನಕೋಣೆ, ನಿಟ್ಟೂರು ಆಫ್ಸ್‌ ಕೋಸ್‌ ಶಾಖೆ ಸಲಹಾಸಮಿತಿ ಸದಸ್ಯರು ಹಾಗು ಶಾಖಾ ಸಿಬ್ಬಂದಿ ಮತ್ತು ಸದಸ್ಯ ಬೆಳೆಗಾರರು ಹಾಜರಿದ್ದರು. ಪಿ.ಆರ್‌.ನಾಗರಾಜ್‌ ನಿರೂಪಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ