ಐದು ದಿನದ ಬಳಿಕ ತಗ್ಗಿದ ಮಳೆ
ಜಿಲ್ಲೆಯಲ್ಲಿ ನಾಲ್ಕೈದು ದಿನಗಳಿಂದ ಸುರಿದ ಜೋರು ಮಳೆ ಶುಕ್ರವಾರ ಸ್ವಲ್ಪ ಕಡಿಮೆಯಾಗಿದೆ.
Vijaya Karnataka 14 Jul 2018, 5:00 am
ಶಿವಮೊಗ್ಗ : ಜಿಲ್ಲೆಯಲ್ಲಿ ನಾಲ್ಕೈದು ದಿನಗಳಿಂದ ಸುರಿದ ಜೋರು ಮಳೆ ಶುಕ್ರವಾರ ಸ್ವಲ್ಪ ಕಡಿಮೆಯಾಗಿದೆ.
ಶುಕ್ರವಾರ ಬೆಳಗ್ಗೆ 9ಗಂಟೆಗೆ ಬಳಿಕ ಸೂರ್ಯನ ದರ್ಶನವಾಗಿ ಬಿಸಿಲು ಕಾಣಿಸಿಕೊಂಡಿತು. ನಾಲ್ಕೈದು ದಿನಗಳಿಂದ ಮಳೆಯಿಂದಾಗಿ ಥಂಡಿ ಆವರಿಸಿತ್ತು. ಮಲೆನಾಡು ಪ್ರದೇಶದಲ್ಲಿ ಮಕ್ಕಳು ರಚ್ಚೆ ಹಿಡಿದಂತೆ ಒಂದೇ ಸಮನೆ ಮಳೆ ಸುರಿದಿತ್ತು. ಇದರಿಂದಾಗಿ ಹಳ್ಳ, ನದಿಗಳು ಅಪಾಯ ಮಟ್ಟ ಮೀರಿ ಹರಿದವು. ಶಾಲೆ ಕಾಲೇಜುಗಳಿಗೆ ಸಹ ರಜೆ ನೀಡಲಾಗಿದೆ.
ಮಳೆ ಕಡಿಮೆಯಾದರೂ ನದಿಗಳ ನೀರಿನ ಮಟ್ಟ ಯಥಾಸ್ಥಿತಿಯಲ್ಲಿದೆ. ತುಂಗಾ, ಭದ್ರಾ, ಶರಾವತಿ, ಮಾಲತಿ, ವರದಾ, ಕುಮದ್ವತಿ ನದಿಗಳು ಅಪಾಯ ಮಟ್ಟದಲ್ಲೇ ಹರಿಯುತ್ತಿವೆ. ಭದ್ರಾ ಮತ್ತು ಲಿಂಗನಮಕ್ಕಿ ಜಲಾಶಯಕ್ಕೆ ತಲಾ 2 ಅಡಿ ನೀರು ಬಂದಿದೆ. ತುಂಗಾ ನದಿಯಲ್ಲಿ 65 ಸಾವಿರ ಕ್ಯೂಸೆಕ್ ನೀರು ಹರಿಯುತ್ತಿದೆ.
ಆಗುಂಬೆಯಲ್ಲಿ ಅತಿಹೆಚ್ಚು 181 ಮಿ.ಮೀ. ಮಳೆಯಾಗಿದೆ. ಯಡೂರಲ್ಲಿ 173 ಮಿ.ಮೀ., ಹುಲಿಕಲ್ನಲ್ಲಿ 121, ಮಾಣಿಯಲ್ಲಿ 120, ಲಿಂಗನಮಕ್ಕಿಯಲ್ಲಿ 79.6, ತೀರ್ಥಹಳ್ಳಿಯಲ್ಲಿ 70.3, ಸಾಗರದಲ್ಲಿ 56.3, ಹೊಸನಗರದಲ್ಲಿ 50, ಸೊರಬದಲ್ಲಿ 23.3, ಬಿಆರ್ಪಿಯಲ್ಲಿ 20.6, ಭದ್ರಾವತಿಯಲ್ಲಿ 13.3, ಶಿವಮೊಗ್ಗದಲ್ಲಿ 7.9 ಮಿ.ಮೀ. ಮಳೆಯಾಗಿದೆ.
ಶುಕ್ರವಾರ ಬೆಳಗ್ಗೆ 9ಗಂಟೆಗೆ ಬಳಿಕ ಸೂರ್ಯನ ದರ್ಶನವಾಗಿ ಬಿಸಿಲು ಕಾಣಿಸಿಕೊಂಡಿತು. ನಾಲ್ಕೈದು ದಿನಗಳಿಂದ ಮಳೆಯಿಂದಾಗಿ ಥಂಡಿ ಆವರಿಸಿತ್ತು. ಮಲೆನಾಡು ಪ್ರದೇಶದಲ್ಲಿ ಮಕ್ಕಳು ರಚ್ಚೆ ಹಿಡಿದಂತೆ ಒಂದೇ ಸಮನೆ ಮಳೆ ಸುರಿದಿತ್ತು. ಇದರಿಂದಾಗಿ ಹಳ್ಳ, ನದಿಗಳು ಅಪಾಯ ಮಟ್ಟ ಮೀರಿ ಹರಿದವು. ಶಾಲೆ ಕಾಲೇಜುಗಳಿಗೆ ಸಹ ರಜೆ ನೀಡಲಾಗಿದೆ.
ಮಳೆ ಕಡಿಮೆಯಾದರೂ ನದಿಗಳ ನೀರಿನ ಮಟ್ಟ ಯಥಾಸ್ಥಿತಿಯಲ್ಲಿದೆ. ತುಂಗಾ, ಭದ್ರಾ, ಶರಾವತಿ, ಮಾಲತಿ, ವರದಾ, ಕುಮದ್ವತಿ ನದಿಗಳು ಅಪಾಯ ಮಟ್ಟದಲ್ಲೇ ಹರಿಯುತ್ತಿವೆ. ಭದ್ರಾ ಮತ್ತು ಲಿಂಗನಮಕ್ಕಿ ಜಲಾಶಯಕ್ಕೆ ತಲಾ 2 ಅಡಿ ನೀರು ಬಂದಿದೆ. ತುಂಗಾ ನದಿಯಲ್ಲಿ 65 ಸಾವಿರ ಕ್ಯೂಸೆಕ್ ನೀರು ಹರಿಯುತ್ತಿದೆ.
ಆಗುಂಬೆಯಲ್ಲಿ ಅತಿಹೆಚ್ಚು 181 ಮಿ.ಮೀ. ಮಳೆಯಾಗಿದೆ. ಯಡೂರಲ್ಲಿ 173 ಮಿ.ಮೀ., ಹುಲಿಕಲ್ನಲ್ಲಿ 121, ಮಾಣಿಯಲ್ಲಿ 120, ಲಿಂಗನಮಕ್ಕಿಯಲ್ಲಿ 79.6, ತೀರ್ಥಹಳ್ಳಿಯಲ್ಲಿ 70.3, ಸಾಗರದಲ್ಲಿ 56.3, ಹೊಸನಗರದಲ್ಲಿ 50, ಸೊರಬದಲ್ಲಿ 23.3, ಬಿಆರ್ಪಿಯಲ್ಲಿ 20.6, ಭದ್ರಾವತಿಯಲ್ಲಿ 13.3, ಶಿವಮೊಗ್ಗದಲ್ಲಿ 7.9 ಮಿ.ಮೀ. ಮಳೆಯಾಗಿದೆ.