ಆ್ಯಪ್ನಗರ

ವಾರದ ಬಳಿಕ ಕಾಣಿಸಿಕೊಂಡ ಬಿಸಿಲು

ಜಿಲ್ಲೆಯಲ್ಲಿ ಒಂದು ವಾರ ಸತತ ಸುರಿದ ಮಳೆಯು ಮತ್ತಷ್ಟು ಕಡಿಮೆಯಾಗಿದ್ದು ವಾರದ ಬಳಿಕ ಶುಕ್ರವಾರ ಬಿಸಿಲು ಕಾಣಿಸಿಕೊಂಡಿತು.

Vijaya Karnataka 18 Aug 2018, 5:00 am
ಶಿವಮೊಗ್ಗ: ಜಿಲ್ಲೆಯಲ್ಲಿ ಒಂದು ವಾರ ಸತತ ಸುರಿದ ಮಳೆಯು ಮತ್ತಷ್ಟು ಕಡಿಮೆಯಾಗಿದ್ದು ವಾರದ ಬಳಿಕ ಶುಕ್ರವಾರ ಬಿಸಿಲು ಕಾಣಿಸಿಕೊಂಡಿತು.
Vijaya Karnataka Web after week sun appear
ವಾರದ ಬಳಿಕ ಕಾಣಿಸಿಕೊಂಡ ಬಿಸಿಲು


ಬಿಸಿಲು ನಡುವೆ ಆಗಾಗ್ಗೆ ಮೋಡ ಕವಿದು ಮಳೆ ಸಹ ಸುರಿಯುತ್ತಿದೆ. ಘಟ್ಟ ಪ್ರದೇಶವಾದ ತೀರ್ಥಹಳ್ಳಿ, ಹೊಸನಗರ, ಸಾಗರ ತಾಲೂಕಿನಲ್ಲಿ ಮಾತ್ರ ಮಳೆ ಬಿಟ್ಟು ಬಿಟ್ಟು ಸುರಿಯುತ್ತಲೇ ಇದೆ. ಹೀಗಾಗಿ ತುಂಗಾ, ಭದ್ರಾ, ಶರಾವತಿ, ಮಾಲತಿ, ವರದಾ, ಕುಮದ್ವತಿ ನದಿಗಳು ಈಗಲೂ ಮೈದುಂಬಿ ಹರಿಯುತ್ತಿವೆ.

ಲಿಂಗನಮಕ್ಕಿಗೆ 50 ಸಾವಿರ ಕ್ಯೂಸೆಕ್‌, ಭದ್ರಾಕ್ಕೆ 47ಸಾವಿರ, ತುಂಗಾಕ್ಕೆ 51ಸಾವಿರ ಕ್ಯೂಸೆಕ್‌ ನೀರು ಬರುತ್ತಿದ್ದು ಅಷ್ಟೇ ಪ್ರಮಾಣದ ನೀರನ್ನು ಹೊರಬಿಡಲಾಗುತ್ತಿದೆ. ಮಾಣಿ ಜಲಾಶಯದ ನೀರಿನ ಮಟ್ಟ 593.26 ಮೀ.ಗೆ ಏರಿಕೆಯಾಗಿದೆ. ಭರ್ತಿಗೆ ಒಂದು ಮೀಟರ್‌ ಬಾಕಿ ಇದ್ದು ಭಾನುವಾರ ಅಥವಾ ಸೋಮವಾರ ಪೂರ್ಣಮಟ್ಟ ತಲುಪುವ ಸಾಧ್ಯತೆ ಇದೆ. ಜಲಾಶಯಕ್ಕೆ 7,844 ಕ್ಯೂಸೆಕ್‌ ಒಳಹರಿವು ಇದೆ.

ಜಿಲ್ಲೆಯಲ್ಲಿ ಅತಿಹೆಚ್ಚು ಹೊಸನಗರ ತಾಲೂಕು ಹುಲಿಕಲ್‌ನಲ್ಲಿ 186 ಮಿ.ಮೀ. ಮಳೆಯಾಗಿದೆ. ಮಾಣಿಯಲ್ಲಿ 142 ಮಿ.ಮೀ., ಆಗುಂಬೆಯಲ್ಲಿ 131, ಲಿಂಗನಮಕ್ಕಿ 89.4, ಸಾಗರದಲ್ಲಿ 44.9, ತೀರ್ಥಹಳ್ಳಿಯಲ್ಲಿ 44.5, ಹೊಸನಗರದಲ್ಲಿ 35.5, ಸೊರಬದಲ್ಲಿ 13.1, ಶಿವಮೊಗ್ಗದಲ್ಲಿ 9, ಶಿಕಾರಿಪುರದಲ್ಲಿ 6.7 ಮತ್ತು ಭದ್ರಾವತಿಯಲ್ಲಿ 4.8 ಮಿ.ಮೀ. ಮಳೆಯಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ