ಆ್ಯಪ್ನಗರ

ಮತ್ತೊಬ್ಬನ ಬಲಿ ಪಡೆದ ಮಂಗನ ಕಾಯಿಲೆ

ತಾಲೂಕಿನಲ್ಲಿ ಕಳೆದ ಎರಡು ವಾರಗಳಿಂದ ಸ್ವಲ್ಪ ನಿಯಂತ್ರಣಕ್ಕೆ ಬಂದಿದ್ದ ಮಂಗನ ಕಾಯಿಲೆಗೆ ಶುಕ್ರವಾರ ಮತ್ತೊಬ್ಬ ವ್ಯಕ್ತಿ ಬಲಿಯಾಗಿದ್ದಾರೆ.

Vijaya Karnataka 2 Mar 2019, 5:00 am
ಸಾಗರ (ಶಿವಮೊಗ್ಗ) : ತಾಲೂಕಿನಲ್ಲಿ ಕಳೆದ ಎರಡು ವಾರಗಳಿಂದ ಸ್ವಲ್ಪ ನಿಯಂತ್ರಣಕ್ಕೆ ಬಂದಿದ್ದ ಮಂಗನ ಕಾಯಿಲೆಗೆ ಶುಕ್ರವಾರ ಮತ್ತೊಬ್ಬ ವ್ಯಕ್ತಿ ಬಲಿಯಾಗಿದ್ದಾರೆ.
Vijaya Karnataka Web again one victim for monkey fever
ಮತ್ತೊಬ್ಬನ ಬಲಿ ಪಡೆದ ಮಂಗನ ಕಾಯಿಲೆ


ಕಾರ್ಗಲ್‌ ಸಮೀಪದ ಕಾಳಮಂಜಿ ಗ್ರಾಮದ ನಿವಾಸಿ ಪಾಶ್ರ್ವನಾಥ್‌ ಜೈನ್‌(68) ಮಂಗನ ಕಾಯಿಲೆಯಿಂದ ಬಳಲಿ ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಇದೂ ಸೇರಿದಂತೆ ತಾಲೂಕಿನ ಅರಳಗೋಡು ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ 11 ಜನ ಕ್ಯಾಸನೂರು ಅರಣ್ಯ ಕಾಯಿಲೆಯಿಂದ ಜೀವ ಕಳೆದುಕೊಂಡಂತಾಗಿದೆ.

ಫೆ.12ರಂದು ತೀವ್ರ ವಾಂತಿಭೇದಿಯಿಂದ ಬಳಲಿದ್ದ ಪಾಶ್ರ್ವನಾಥ್‌ ಜೈನ್‌ ಅವರಿಗೆ ಸಾಗರದ ಉಪವಿಭಾಗೀಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಮರುದಿನ ಮಣಿಪಾಲ ಆಸ್ಪತ್ರೆಗೆ ಕಳಿಸಲಾಗಿತ್ತು. ಪರೀಕ್ಷೆ ಬಳಿಕ ಅವರಿಗೆ ಕೆಎಫ್‌ಡಿ ವೈರಸ್‌ ತಗುಲಿರುವುದು ದೃಢಪಟ್ಟಿತ್ತು.

ಮಣಿಪಾಲ ಆಸ್ಪತ್ರೆಯಲ್ಲಿ ಈಗಲೂ 10 ಜನ ಶಂಕಿತ ಕೆಎಫ್‌ಡಿ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಲ್ಲಿ ಇಬ್ಬರು ಐಸಿಯುನಲ್ಲಿದ್ದು, ಅವರಲ್ಲಿ ಒಬ್ಬರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎನ್ನಲಾಗುತ್ತಿದೆ.

ಮುಂದುವರಿದ ಮಂಗಗಳ ಸಾವು:

ತಾಲೂಕಿನಾದ್ಯಂತ ಮಂಗಗಳ ಸಾವಿನ ಪ್ರಕರಣ ಮುಂದುವರಿದಿದೆ. ಎಡಜಿಗಳೇಮನೆ ಗ್ರಾಮ ಪಂಚಾಯಿತಿಯ ಶಾರದಾಪುರದಲ್ಲಿ ಶುಕ್ರವಾರ ಮಂಗವೊಂದು ಮೃತಪಟ್ಟಿದೆ. ಸಿರಿವಂತೆ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಕೆಎಫ್‌ಡಿ ಈಗಾಗಲೇ ದೃಢಪಟ್ಟಿರುವ ಹಿನ್ನೆಲೆಯಲ್ಲಿ ಮೃತ ಮಂಗನ ಶವವನ್ನು ಪರೀಕ್ಷಿಸದೇ ದಹನ ಮಾಡಲಾಯಿತು.

ಇದೇ ಗ್ರಾಮದಲ್ಲಿ ಎರಡು ದಿನಗಳ ಹಿಂದೆ ನಿವೃತ್ತ ಶಿಕ್ಷ ಕ ಎಸ್‌.ಆರ್‌.ಭಟ್‌ ಬಡ್ತಿ ಅವರ ಮನೆ ಹಿತ್ತಲಿನಲ್ಲಿ ಕೊಳೆತ ಸ್ಥಿತಿಯಲ್ಲಿ ಮಂಗದ ಕಳೇಬರ ಪತ್ತೆಯಾಗಿತ್ತು. ನಗರ ಸಮೀಪದ ಶಿರವಾಳದಲ್ಲಿ ಗುರುವಾರ ಪತ್ತೆಯಾದ ಮಂಗನ ಶವದ ಪರೀಕ್ಷೆ ನಡೆಸಲಾಯಿತು.


ಸಾಗರ ತಾಲೂಕಿನಲ್ಲಿ ಮಂಗನ ಕಾಯಿಲೆಯು ನಿಯಂತ್ರಣಕ್ಕೆ ಬರುತ್ತಿರುವ ಸಮಯದಲ್ಲಿ ವ್ಯಕ್ತಿಯೊಬ್ಬರು ಮೃತರಾಗಿರುವುದು ಮತ್ತೆ ಎಚ್ಚರಿಕೆಯ ಗಂಟೆಯಾಗಿದೆ. ಆರೋಗ್ಯ ಇಲಾಖೆ ಅಧಿಕಾರಿಗಳು ಮಂಗನ ಕಾಯಿಲೆ ದೃಢಪಟ್ಟ ಗ್ರಾಮಗಳಿಗೆ ಕೂಡಲೇ ಡಿಎಂಪಿ ಆಯಿಲ್‌, ಲಸಿಕೆ ನೀಡುವ ಕೆಲಸ ಮಾಡಬೇಕು. ಸಾರ್ವಜನಿಕರು ನಿರ್ಲಕ್ಷ ್ಯ ತೋರದೆ ಲಸಿಕೆ ಹಾಕಿಸಿಕೊಳ್ಳಬೇಕು.

- ಎಚ್‌.ಹಾಲಪ್ಪ, ಶಾಸಕ




ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ