ಆ್ಯಪ್ನಗರ

ಮತ್ತೆ ಭಾರಿ ಸದ್ದು, ಕಂಪಿಸಿದ ಭೂಮಿ

ತಾಲೂಕಿನ ಯಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸೋಮವಾರ ತಡರಾತ್ರಿ ಭಾರಿ ಶಬ್ದ ಕೇಳಿಬಂದಿದ್ದು, ಭೂಮಿ ಕಂಪಿಸಿದ ಅನುಭವವಾಗಿದೆ.

Vijaya Karnataka 27 Feb 2019, 5:00 am
ಹೊಸನಗರ (ಶಿವಮೊಗ್ಗ) : ತಾಲೂಕಿನ ಯಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸೋಮವಾರ ತಡರಾತ್ರಿ ಭಾರಿ ಶಬ್ದ ಕೇಳಿಬಂದಿದ್ದು, ಭೂಮಿ ಕಂಪಿಸಿದ ಅನುಭವವಾಗಿದೆ.
Vijaya Karnataka Web again the land weird
ಮತ್ತೆ ಭಾರಿ ಸದ್ದು, ಕಂಪಿಸಿದ ಭೂಮಿ


ರಾತ್ರಿ ಸುಮಾರು 2.30ರ ವೇಳೆಗೆ ಭಾರಿ ಸ್ಫೋಟದ ಶಬ್ದ ಕೇಳಿಬಂದಿದ್ದು, ಒಂದೆರಡು ಸೆಕೆಂಡುಗಳ ಕಾಲ ಭೂಮಿ ಕಂಪಿಸಿದ ಅನುಭವವಾಗಿದೆ. ಭೀತಿಗೊಂಡ ಗ್ರಾಮಸ್ಥರು ಮನೆಯಿಂದ ಹೊರಗೋಡಿ ಬಂದಿದ್ದಾರೆ. ಯಡೂರು, ನಿಡಗೋಡು, ಹೆಬ್ಬಳಬೈಲು, ಪುಟ್ಮನೆ, ಕಾರೆಮನೆ ಗ್ರಾಮಗಳಲ್ಲಿ ಕಂಪನದ ಪರಿಣಾಮ ಮನೆಯ ಹಂಚುಗಳು ಜಾರಿವೆ. ಯಾವುದೇ ಆಸ್ತಿ ಪಾಸ್ತಿ ನಷ್ಟವಾಗಿಲ್ಲ. ವರಾಹಿ ಜಲವಿದ್ಯುದಾಗಾರ ಹಾಗೂ ಮಾನಿ ಜಲಾಶಯದ ಪ್ರದೇಶದಲ್ಲಿ ಫೆ.3 ಮತ್ತು 4ರಂದು ಸ್ಫೋಟ ಹಾಗೂ ಭೂಕಂಪನದ ಅನುಭವ ಉಂಟಾಗಿತ್ತು. ತಿಂಗಳ ಅವಧಿಯಲ್ಲಿ 3ನೇ ಬಾರಿ ಕಂಪನ ಮರುಕಳಿಸಿದ್ದು, ಗ್ರಾಮಸ್ಥರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ವರಾಹಿ ವಿದ್ಯುದಾಗಾರ, ಮಾನಿ ಅಣೆಕಟ್ಟು ವ್ಯಾಪ್ತಿಯ ಈ ಭಾಗ ಸೂಕ್ಷ ್ಮ ಪ್ರದೇಶವಾಗಿದ್ದು, ಸ್ಫೋಟದ ಶಬ್ದ ಹಾಗೂ ಭೂಮಿ ಕಂಪಿಸುವುದರ ಕುರಿತು ವೈಜ್ಞಾನಿಕ ಕಾರಣಗಳನ್ನು ಪತ್ತೆ ಮಾಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ತೀರ್ಥಹಳ್ಳಿ ವರದಿ: ತಾಲೂಕಿನ ವಾರಾಹಿ ಜಲ ವಿದ್ಯುತ್‌ ಹಿನ್ನೀರು ಪ್ರದೇಶದ ಗ್ರಾಮಗಳಲ್ಲಿ ಮಂಗಳವಾರ ಬೆಳಗಿನಜಾವ ಭೂ ಕಂಪಿಸಿದೆ. ಭಾರಿ ಶಬ್ದದೊಂದಿಗೆ ಭೂಮಿ ಸುಮಾರು 3 ಸೆಕೆಂಡ್‌ ಕಂಪಿಸಿದ ಅನುಭವ ಜನರಿಗಾಗಿದೆ. ಗಾರ್ಡರಗದ್ದೆ, ಶುಂಠಿಹಕ್ಕಲು, ಹನಸ, ದೊಡ್ಡಿಮನೆ, ಮೇಗರವಳ್ಳಿ ಭಾಗದಲ್ಲಿ ಮಧ್ಯರಾತ್ರಿ 2.31ರ ಸಮಯದಲ್ಲಿ ಭೂಮಿ ಕಂಪಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ