ತೀರ್ಥಹಳ್ಳಿ : ರಾಷ್ಟ್ರೀಯ ಹೆದ್ದಾರಿ 169(ಎ) ಮಾರ್ಗದ ಆಗುಂಬೆ ಘಾಟಿ ರಸ್ತೆ ದುರಸ್ತಿ ಕಾಮಗಾರಿಯ ಪ್ರಗತಿಯನ್ನು ಶಾಸಕ ಆರಗ ಜ್ಞಾನೇಂದ್ರ ಅವರು ಅಧಿಕಾರಿಗಳ ತಂಡದೊಂದಿಗೆ ಮಂಗಳವಾರ ಪರಿಶೀಲಿಸಿದರು.
ಕಳೆದ ವರ್ಷ ತಡೆಗೋಡೆ ಕುಸಿತದಿಂದ ರಸ್ತೆ ಮಾರ್ಗ ದೀರ್ಘ ಅವಧಿ ಸ್ಥಗಿತಗೊಳಿಸುವ ಸಂದರ್ಭ ಎದುರಾಗಿತ್ತು. ಮಳೆ ಅವಧಿಯಲ್ಲಿ ಘಾಟಿ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ಯಾವುದೇ ರೀತಿಯಲ್ಲೂ ಅಡೆತಡೆ ಉಂಟಾಗದಂತೆ ಮುನ್ನೆಚ್ಚೆರಿಕೆಯ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಆರಗ ಜ್ಞಾನೇಂದ್ರ ಅವರು ಅಧಿಕಾರಿಗಳಿಗೆ ಸೂಚಿಸಿದರು.
ದುರಸ್ತಿ ಕಾಮಗಾರಿ ಅನುಷ್ಠಾನ ಮಾಡದಂತೆ ಸೋಮೇಶ್ವರ ವನ್ಯಜೀವಿ ಅಭಯಾರಣ್ಯ ವಿಭಾಗ ತಡೆ ಒಡ್ಡಿದಾಗ ಬೆಂಗಳೂರಿನಲ್ಲಿ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿ ಕಾಮಗಾರಿಗೆ ಒಪ್ಪಿಗೆ ಪಡೆಯುವಂತಹ ಸನ್ನಿವೇಶ ಉದ್ಭವಿಸಿತ್ತು. ತುರ್ತು ಸಂದರ್ಭ ಹೊರತಾಗಿ ಕಾನೂನು ಭಾಗದಲ್ಲಿ ಯಾವುದೇ ರೀತಿಯ ತೊಂದರೆ ಆಗದಂತೆ ಸೂಕ್ತ ಪ್ರಸ್ತಾವನೆ ಕ್ರಮವನ್ನು ಆರಂಭದಲ್ಲಿ ಕೈಗೊಳ್ಳುವುದು ಸೂಕ್ತ ಎಂದು ಆರಗ ಜ್ಞಾನೇಂದ್ರ ಸಲಹೆ ನೀಡಿದರು.
ಒಂದೂವರೆ ತಿಂಗಳು ಘಾಟಿ ರಸ್ತೆ ಮಾರ್ಗದಲ್ಲಿ ವಾಹನ ಸಂಚಾರ ನಿಷೇಧಗೊಂಡಾಗ ಪ್ರಯಾಣಿಕರಿಗೆ ಹೆಚ್ಚು ಪ್ರಮಾಣದಲ್ಲಿ ತೊಂದರೆ ಆಗಿದೆ. ಪ್ರಯಾಣ ಅವಧಿ ಹೆಚ್ಚಾಗಿ ಆರ್ಥಿಕ ಹೊರೆ ಅನುಭವಿಸಿದ್ದಾರೆ. ಅತೀ ಅವಶ್ಯಕವಾದ ಹತ್ತಿರ ಮಾರ್ಗದ ಘಾಟಿ ರಸ್ತೆಯನ್ನು ಸುಸ್ಥಿತಿಯಲ್ಲಿಡುವುದು ಎಲ್ಲರ ಜವಾಬ್ದಾರಿ ಆಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಘಾಟಿ ಮಾರ್ಗದ ರಸ್ತೆ ನಿರ್ವಹಣೆಗೆ ಹೆಚ್ಚಿನ ನಿಗಾವಹಿಸಬೇಕು ಎಂದು ಆರಗ ಜ್ಞಾನೇಂದ್ರ ಸೂಚಿಸಿದರು.
ಈ ಸಂದರ್ಭ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ವಿಭಾಗದ ಎಂಜಿನಿಯರ್ ಶಶಿಧರ್ ಜೋಯ್ಸ್, ಬಿಜೆಪಿ ಮುಖಂಡ ಎಸಿಸಿ ಕೃಷ್ಣಮೂರ್ತಿ ಮತ್ತಿತರರು ಇದ್ದರು.
ಕಳೆದ ವರ್ಷ ತಡೆಗೋಡೆ ಕುಸಿತದಿಂದ ರಸ್ತೆ ಮಾರ್ಗ ದೀರ್ಘ ಅವಧಿ ಸ್ಥಗಿತಗೊಳಿಸುವ ಸಂದರ್ಭ ಎದುರಾಗಿತ್ತು. ಮಳೆ ಅವಧಿಯಲ್ಲಿ ಘಾಟಿ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ಯಾವುದೇ ರೀತಿಯಲ್ಲೂ ಅಡೆತಡೆ ಉಂಟಾಗದಂತೆ ಮುನ್ನೆಚ್ಚೆರಿಕೆಯ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಆರಗ ಜ್ಞಾನೇಂದ್ರ ಅವರು ಅಧಿಕಾರಿಗಳಿಗೆ ಸೂಚಿಸಿದರು.
ದುರಸ್ತಿ ಕಾಮಗಾರಿ ಅನುಷ್ಠಾನ ಮಾಡದಂತೆ ಸೋಮೇಶ್ವರ ವನ್ಯಜೀವಿ ಅಭಯಾರಣ್ಯ ವಿಭಾಗ ತಡೆ ಒಡ್ಡಿದಾಗ ಬೆಂಗಳೂರಿನಲ್ಲಿ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿ ಕಾಮಗಾರಿಗೆ ಒಪ್ಪಿಗೆ ಪಡೆಯುವಂತಹ ಸನ್ನಿವೇಶ ಉದ್ಭವಿಸಿತ್ತು. ತುರ್ತು ಸಂದರ್ಭ ಹೊರತಾಗಿ ಕಾನೂನು ಭಾಗದಲ್ಲಿ ಯಾವುದೇ ರೀತಿಯ ತೊಂದರೆ ಆಗದಂತೆ ಸೂಕ್ತ ಪ್ರಸ್ತಾವನೆ ಕ್ರಮವನ್ನು ಆರಂಭದಲ್ಲಿ ಕೈಗೊಳ್ಳುವುದು ಸೂಕ್ತ ಎಂದು ಆರಗ ಜ್ಞಾನೇಂದ್ರ ಸಲಹೆ ನೀಡಿದರು.
ಒಂದೂವರೆ ತಿಂಗಳು ಘಾಟಿ ರಸ್ತೆ ಮಾರ್ಗದಲ್ಲಿ ವಾಹನ ಸಂಚಾರ ನಿಷೇಧಗೊಂಡಾಗ ಪ್ರಯಾಣಿಕರಿಗೆ ಹೆಚ್ಚು ಪ್ರಮಾಣದಲ್ಲಿ ತೊಂದರೆ ಆಗಿದೆ. ಪ್ರಯಾಣ ಅವಧಿ ಹೆಚ್ಚಾಗಿ ಆರ್ಥಿಕ ಹೊರೆ ಅನುಭವಿಸಿದ್ದಾರೆ. ಅತೀ ಅವಶ್ಯಕವಾದ ಹತ್ತಿರ ಮಾರ್ಗದ ಘಾಟಿ ರಸ್ತೆಯನ್ನು ಸುಸ್ಥಿತಿಯಲ್ಲಿಡುವುದು ಎಲ್ಲರ ಜವಾಬ್ದಾರಿ ಆಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಘಾಟಿ ಮಾರ್ಗದ ರಸ್ತೆ ನಿರ್ವಹಣೆಗೆ ಹೆಚ್ಚಿನ ನಿಗಾವಹಿಸಬೇಕು ಎಂದು ಆರಗ ಜ್ಞಾನೇಂದ್ರ ಸೂಚಿಸಿದರು.
ಈ ಸಂದರ್ಭ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ವಿಭಾಗದ ಎಂಜಿನಿಯರ್ ಶಶಿಧರ್ ಜೋಯ್ಸ್, ಬಿಜೆಪಿ ಮುಖಂಡ ಎಸಿಸಿ ಕೃಷ್ಣಮೂರ್ತಿ ಮತ್ತಿತರರು ಇದ್ದರು.