ಆ್ಯಪ್ನಗರ

ಮದ್ಯವ್ಯಸನಿ ಸ್ನೇಹಿತರಿಬ್ಬರ ಆತ್ಮಹತ್ಯೆ

ಅತಿಯಾದ ಮದ್ಯಪಾನದ ದುಶ್ಚಟ ಅಂಟಿಸಿಕೊಂಡಿದ್ದ ಸ್ನೇಹಿತರಿಬ್ಬರು ಜೀವನದಲ್ಲಿ ಜುಗುಪ್ಸೆ ಹೊಂದಿ ಬುಧವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Vijaya Karnataka 22 Mar 2019, 5:00 am
ಹೊಸನಗರ: ಅತಿಯಾದ ಮದ್ಯಪಾನದ ದುಶ್ಚಟ ಅಂಟಿಸಿಕೊಂಡಿದ್ದ ಸ್ನೇಹಿತರಿಬ್ಬರು ಜೀವನದಲ್ಲಿ ಜುಗುಪ್ಸೆ ಹೊಂದಿ ಬುಧವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Vijaya Karnataka Web alcoholist friends commit suicide
ಮದ್ಯವ್ಯಸನಿ ಸ್ನೇಹಿತರಿಬ್ಬರ ಆತ್ಮಹತ್ಯೆ


ಪಟ್ಟಣಕ್ಕೆ ಸಮೀಪದ ಗಂಗನಕೊಪ್ಪದ ಪ್ರಕಾಶ(30) ಮತ್ತು ಆರ್‌ಕೆ ರಸ್ತೆ ನಿವಾಸಿ ಶ್ರೀಕಾಂತ(28) ಮೃತಪಟ್ಟವರು.

ಕೆಲ ದಿನಗಳಿಂದ ವಿಪರೀತ ಮದ್ಯಪಾನ ಮಾಡುವ ಅಭ್ಯಾಸ ಮಾಡಿಕೊಂಡಿದ್ದು, ರಾತ್ರಿ ಮನೆಗೆ ಸರಿಯಾಗಿ ಮರಳುತ್ತಿರಲಿಲ್ಲ. ಆರೋಗ್ಯದಲ್ಲಿ ಸಹಾ ಏರುಪೇರಾಗಿತ್ತು. ಕೆಲಸ ಕಾರ‍್ಯ ನಡೆಸಲು ಅಶಕ್ತರಾಗಿದ್ದರು. ಕುಟುಂಬಸ್ಥರು ಹೇಳುತ್ತಿದ್ದ ಬುದ್ಧಿವಾದ ಹಾಗೂ ಮದ್ಯಪಾನ ಮಾಡಲು ಹಣ ಸಿಗದೇ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಇದರಿಂದ ಬೇಸತ್ತ ಸ್ನೇಹಿತರು ಇಲ್ಲಿನ ಮಾರಿಗುಡ್ಡದಲ್ಲಿ ಒಂದೇ ಮರದ ಟೊಂಗೆಗಳಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೊಸನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ