ಆ್ಯಪ್ನಗರ

ಬದುಕು ಶುದ್ಧಿಗೆ ಶರಣರ ತತ್ವಾಚರಣೆ ಅಗತ್ಯ

ಮನುಷ್ಯನ ಬದುಕನ್ನು ಶುದ್ದೀಕರಿಸಿಕೊಳ್ಳಲು ಶರಣರ ತತ್ವಾಚರಣೆಗಳು ಪ್ರಸ್ತುತವಾಗಿ ಬೇಕಾಗಿದೆ ಎಂದು ಬಿ.ಆರ್‌.ಪ್ರಾಜೆಕ್ಟ್ ರಾಷ್ಟ್ರೀಯ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ಶಿಕ್ಷ ಕ ಡಾ.ಬಿ.ಎನ್‌. ತಂಬೂಳಿ ಹೇಳಿದರು.

Vijaya Karnataka 23 Jan 2019, 5:00 am
ಭದ್ರಾವತಿ: ಮನುಷ್ಯನ ಬದುಕನ್ನು ಶುದ್ದೀಕರಿಸಿಕೊಳ್ಳಲು ಶರಣರ ತತ್ವಾಚರಣೆಗಳು ಪ್ರಸ್ತುತವಾಗಿ ಬೇಕಾಗಿದೆ ಎಂದು ಬಿ.ಆರ್‌.ಪ್ರಾಜೆಕ್ಟ್ ರಾಷ್ಟ್ರೀಯ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ಶಿಕ್ಷ ಕ ಡಾ.ಬಿ.ಎನ್‌. ತಂಬೂಳಿ ಹೇಳಿದರು.
Vijaya Karnataka Web SMR-22BDVT5


ಅವರು ಸೋಮವಾರ ಹಳೇನಗರದ ಗಂಗಾಪರಮೇಶ್ವರಿ ಸಮುದಾಯ ಭವನದಲ್ಲಿ ತಾಲೂಕು ಆಡಳಿತ, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗು ಗಂಗಾಮತಸ್ಥರ ಸಂಘ ಆಶ್ರಯದಲ್ಲಿ ಆಯೋಜಿಸಿದ್ದ ನಿಜ ಶರಣ ಅಂಬಿಗರ ಚೌಡಯ್ಯ ಜಯಂತಿಯಲ್ಲಿ ಉಪನ್ಯಾಸ ನೀಡಿದರು.

ಪ್ರಸ್ತುತ ದಿನಗಳಲ್ಲಿ ಶರಣರ ವಚನಗಳನ್ನು ಓದಿ ಅಥೈರ್‍ಸಿಕೊಂಡು ಮನಸ್ಸಿನ ಕೊಳಕನ್ನು ತೊಳೆದುಕೊಳ್ಳಬೇಕಾಗಿದೆ. ಹಿರಿಯರ ಆದರ್ಶಗಳನ್ನು ನೆನಪು ಮಾಡಿಕೊಳ್ಳುವ ಮೂಲಕ ನಮ್ಮ ನಡೆ, ನುಡಿಗಳನ್ನು ಬದಲಾವಣೆ ಮಾಡಿಕೊಳ್ಳಬೇಕಾಗಿದೆ. ಸಮಾಜದಲ್ಲಿ ವರ್ಗಭೇದ, ವರ್ಣಭೇದ, ಲಿಂಗಭೇದ ಸಂಸ್ಕೃತಿ ಇದ್ದಂತಹ 12ನೇ ಶತಮಾನದಲ್ಲಿ ಬಹುದೊಡ್ಡ ಕ್ರಾಂತಿ ಉಂಟುಮಾಡಿದ್ದ ಭಿನ್ನ ವಚನಕಾರರಾಗಿದ್ದ ನಿಜ ಶರಣ ಅಂಬಿಗರ ಚೌಡಯ್ಯನವರು ನೇರ ನುಡಿಯ ಶರಣರಾಗಿದ್ದರು. ಅವರ ಆದರ್ಶಗಳನ್ನು ಪ್ರತಿಯೊಬ್ಬರು ಪಾಲಿಸಿದರೆ ಸಮಾಜ ಸುಭಿಕ್ಷೆಯಾಗುತ್ತದೆ ಎಂದರು.

ಜಿ.ಪಂ. ಸದಸ್ಯ ಮಣಿಶೇಖರ್‌ ಮಾತನಾಡಿ, ತಾಲೂಕಿನಲ್ಲಿ 22 ಸಾವಿರ ಜನಸಂಖ್ಯೆ ಇರುವ ಗಂಗಾಮತಸ್ಥರು ಕೇವಲ ಬೆರಳೆಣಿಕೆಯಷ್ಟು ಸೇರಿರುವುದು ಸಮಾಜಕ್ಕೆ ಗೌರವ ಸಲ್ಲದು. ಮುಂದಿನ ದಿನಗಳಲ್ಲಿ ಎಲ್ಲರನ್ನೂ ಒಗ್ಗೂಡಿಸುವ ಪ್ರಯತ್ನವನ್ನು ಸಮಾಜದ ಮುಖಂಡರು ಮಾಡಬೇಕು ಎಂದು ಕಿವಿ ಮಾತು ಹೇಳಿದರು.

ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ. ಮೋಹನ್‌ ಕಾರ್ಯಕ್ರಮ ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿದ್ದರು. ತಾ.ಪಂ. ಅಧ್ಯಕ್ಷೆ ಯಶೋದಮ್ಮ, ಸದಸ್ಯೆ ಉಷಾಕಿರಣ, ಕ್ಷೇತ್ರ ಶಿಕ್ಷ ಣಾಧಿಕಾರಿ ಎಂ.ಸಿ.ಆನಂದ್‌, ಸಂಘದ ಅಧ್ಯಕ್ಷ ಎಚ್‌.ಎ.ಪರಮೇಶ್ವರಪ್ಪ, ಬಿ.ಎನ್‌.ನರಸಿಂಹಮೂರ್ತಿ, ಶಿವಬಸಪ್ಪ ಮತ್ತಿತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ