ಆ್ಯಪ್ನಗರ

ಅಂಬ್ಲಿಗೊಳ ಜಲಾಶಯ ಭರ್ತಿ

ಆಶ್ಲೇಷ ಮಳೆ ಎಲ್ಲೆಲ್ಲೂ ನೀರಿನ ಪ್ರವಾಹ ಸೃಷ್ಟಿಸಿದೆ. ಗೌತಮಪುರ ಗ್ರಾ.ಪಂ.ವ್ಯಾಪ್ತಿಯ ಗಡಿ ಪ್ರದೇಶದಲ್ಲಿರುವ ಅಂಬ್ಲಿಗೊಳ ಜಲಾಶಯ ಗುರುವಾರ ಭರ್ತಿಯಾಗಿದ್ದು, ಎಡಭಾಗದ ನಾಲೆಯಲ್ಲಿ ಉಕ್ಕಿ ಹರಿಯುತ್ತಿದೆ.

Vijaya Karnataka 11 Aug 2019, 5:00 am
ಆನಂದಪುರಂ: ಆಶ್ಲೇಷ ಮಳೆ ಎಲ್ಲೆಲ್ಲೂ ನೀರಿನ ಪ್ರವಾಹ ಸೃಷ್ಟಿಸಿದೆ. ಗೌತಮಪುರ ಗ್ರಾ.ಪಂ.ವ್ಯಾಪ್ತಿಯ ಗಡಿ ಪ್ರದೇಶದಲ್ಲಿರುವ ಅಂಬ್ಲಿಗೊಳ ಜಲಾಶಯ ಗುರುವಾರ ಭರ್ತಿಯಾಗಿದ್ದು, ಎಡಭಾಗದ ನಾಲೆಯಲ್ಲಿ ಉಕ್ಕಿ ಹರಿಯುತ್ತಿದೆ.
Vijaya Karnataka Web SMR-9ANPP7 AMBLIGOLA


ಮಳೆ ಕೊರತೆ ಕಾರಣ ಕಳೆದ ವಾರದವರೆಗೂ ನೀರು ಜಲಾಶಯದ ತಳಮಟ್ಟದಲ್ಲೇ ಇತ್ತು. ಈಗ ಅತ್ಯಧಿಕ ನೀರಿನಿಂದ ಕಂಗೊಳಿಸುತ್ತಿದೆ. ಆನಂದಪುರಂ-ಶಿಕಾರಿಪುರ ಮಾರ್ಗದ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿ.ಹೊಸೂರು ಗ್ರಾಮದಲ್ಲಿ ಈ ಜಲಾಶಯವಿದೆ. ಜಲಾಶಯದ ಎಡಗಡೆ ಭರ್ತಿಯಾದ ನೀರು ಹೊರ ಸಾಗಲು ಕೋಡಿ, ಕಾಲುವೆ ವ್ಯವಸ್ಥೆ ಮಾಡಲಾಗಿದ್ದು ಇಲ್ಲಿನ ನೋಟ ರಮಣೀಯವಾಗಿದೆ. ಜಲಾಶಯ ಭರ್ತಿಯಾದ ಕಾರಣ ಇಲ್ಲಿನ ಹೆದ್ದಾರಿ ಮೂಲಕ ಸಾಗುವ ಪ್ರವಾಸಿಗರು, ಸ್ಥಳೀಯ ಪ್ರಯಾಣಿಕರು ಸ್ಥಳಕ್ಕೆ ಭೇಟಿ ನೀಡಿ ಕಣ್ಮನ ತಣಿಸಿಕೊಳ್ಳುತ್ತಿದ್ದಾರೆ. ಜಲಾಶಯದ ಎಡಗಡೆ ಹೆಚ್ಚುವರಿ ನೀರು ಹರಿಯಲು ಚಾನೆಲ್‌ ಇದೆ. ಈ ಸ್ಥಳದಲ್ಲಿ ಚೆಕ್‌ ಡ್ಯಾಂ ಕಟ್ಟಲಾಗಿದ್ದು ಇದರಲ್ಲಿ ನೀರು ಉಕ್ಕುತ್ತದೆ. ಸುಮಾರು 15 ಅಡಿ ಎತ್ತರದಿಂದ ಉಕ್ಕಿ ಹರಿಯುವ ನೀರು ರಮಣೀಯ ದೃಶ್ಯ ಸೃಷ್ಟಿಸುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ