ಆ್ಯಪ್ನಗರ

‘ಉನ್ನತ ಶಿಕ್ಷ ಣದಿಂದ ಅತ್ಯುತ್ತಮ ಉದ್ಯೋಗ’

ವಿದ್ಯಾರ್ಥಿಗಳು ಉನ್ನತ ಶಿಕ್ಷ ಣ ಪಡೆಯುವುದರಿಂದ ಅತ್ಯುತ್ತಮ ಉದ್ಯೋಗ ಪಡೆಯಬಹುದೆಂದು ಶಿವಮೊಗ್ಗ ಪೆಸಿಟ್‌ ಕಾಲೇಜಿನ ಎಂಬಿಎ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಿ.ಎಂ.ಅರವಿಂದ್‌ ಮಲ್ಲಿಕ್‌ ಹೇಳಿದರು.

ವಿಕ ಸುದ್ದಿಲೋಕ 16 Sep 2016, 9:00 am

ಭದ್ರಾವತಿ: ವಿದ್ಯಾರ್ಥಿಗಳು ಉನ್ನತ ಶಿಕ್ಷ ಣ ಪಡೆಯುವುದರಿಂದ ಅತ್ಯುತ್ತಮ ಉದ್ಯೋಗ ಪಡೆಯಬಹುದೆಂದು ಶಿವಮೊಗ್ಗ ಪೆಸಿಟ್‌ ಕಾಲೇಜಿನ ಎಂಬಿಎ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಿ.ಎಂ.ಅರವಿಂದ್‌ ಮಲ್ಲಿಕ್‌ ಹೇಳಿದರು.

ಅವರು ನ್ಯೂಟೌನ್‌ ಸರಕಾರಿ ವಿಐಎಸ್‌ಎಸ್‌ಜೆ ಪಾಲಿಟೆಕ್ನಿಕ್‌ ಆವರಣದಲ್ಲಿ ವಿದ್ಯಾರ್ಥಿ ಸಂಘ, ಕ್ರೀಡಾ ಸಂಘಗಳ ಉದ್ಘಾಟನೆ, ಶಿಕ್ಷ ಕರು ಹಾಗೂ ಅಭಿಯಂತರ ದಿನಾಚರಣೆ ಸಮಾರಂಭದಲ್ಲಿ ಗುರುವಾರ ಮಾತನಾಡಿದರು.

ಉನ್ನತ ಶಿಕ್ಷ ಣ ಪಡೆದವರು ಯಾವುದೇ ದೇಶದಲ್ಲಿ ಕಾರ‍್ಯನಿರ್ವಹಿಸುತ್ತಿದ್ದರೂ ತಾಯ್ನಾಡಿನ ಬಗ್ಗೆ ಅಭಿಮಾನ, ಕೀರ್ತಿ ತರಬೇಕು. ತಾಂತ್ರಿಕ ಹಾಗೂ ಉನ್ನತ ಶಿಕ್ಷ ಣದಿಂದ ವ್ಯಕ್ತಿಗಳ ಘನತೆ ಹೆಚ್ಚಾಗುತ್ತದೆ ಎಂದರು.

ಆಕಾಶವಾಣಿಯ ಸಹಾಯಕ ನಿರ್ದೇಶಕ ಜಿ.ಕೆ.ರವೀಂದ್ರಕುಮಾರ್‌ ಮಾತನಾಡಿ, ದೇಶದ ಶಿಕ್ಷ ಣ ಕ್ಷೇತ್ರದಲ್ಲಿ ಮಾಜಿ ರಾಷ್ಟ್ರಪತಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್‌ ಹಾಗೂ ಎಂಜಿನಿಯರ್‌ ಕ್ಷೇತ್ರದಲ್ಲಿ ವಿಶಿಷ್ಟ ಕೆಲಸ ಮಾಡಿದವರು ಸರ್‌.ಎಂ.ವಿಶ್ವೇಶ್ವರಾಯರು. ಭಾಷೆಯು ಲಾಭ ಗಳಿಕೆಯ ಸ್ವತ್ತಾಗದೆ ನಿರ್ವಹಿಸುವ ಕೆಲಸವನ್ನು ವಿವರಿಸುವಂತಾಗಬೇಕೆಂದರು.

ಕಾಲೇಜು ಪ್ರಾಂಶುಪಾಲ ಎಸ್‌.ಎಂ.ಧನಂಜಯ ಅಧ್ಯಕ್ಷ ತೆ ವಹಿಸಿದ್ದರು. ಕ್ರೀಡಾ ಸಲಹೆಗಾರ ಡಾ.ಎಲ್‌.ಎಸ್‌.ಮಂಜುನಾಥ್‌, ವಿದ್ಯಾರ್ಥಿ ಕ್ಷೇಮಾಧಿಕಾರಿ ಎಂ.ಎಚ್‌.ವೆಂಕಟೇಶ್‌ನಾಯಕ್‌, ವಿದ್ಯಾರ್ಥಿ ಮುಖಂಡರಾದ ಪೂರ್ವಜ್‌ ಎಸ್‌. ರಾವ್‌, ವಿ.ಬಿ.ವಿನಯ್‌, ಸ್ಟಾನ್ಲಿ ಜೇಮ್ಸ್‌, ಅಂತೋಣಿ ವಿಲ್ಸನ್‌ ಇತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ