ಆ್ಯಪ್ನಗರ

‘ಅರಣ್ಯ ಹಕ್ಕು’ ಮೇ ಅಂತ್ಯದೊಳಗೆ ಸರ್ವೇ ಮುಗಿಸಿ

ಅರಣ್ಯಹಕ್ಕು ಕಾಯಿದೆಗೆ ಸಂಬಂಧಪಟ್ಟಂತೆ ಈ ತಿಂಗಳ ಅಂತ್ಯದೊಳಗೆ ಸರ್ವೇ ಕಾರ್ಯ ಮುಗಿಸಿ, ದಾಖಲೆಗಳನ್ನು ಉಪವಿಭಾಗಾಧಿಕಾರಿ ನೇತೃತ್ವದ ತಾಲೂಕು ಸಮಿತಿಗೆ ನೀಡಬೇಕು. ಇನ್ನೂ ವಿಳಂಬವಾದರೆ ಪ್ರತಿ ಗ್ರಾಪಂಗೆ ಹೋಗಿ ಜನರನ್ನು ಸೇರಿಸಿ, ಜನರಿಂದ ಛೀಮಾರಿ ಹಾಕಿಸಬೇಕಾಗುತ್ತದೆ ಎಂದು ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಹೇಳಿದರು.

Vijaya Karnataka Web 24 May 2016, 9:00 am

ಸಾಗರ: ಅರಣ್ಯಹಕ್ಕು ಕಾಯಿದೆಗೆ ಸಂಬಂಧಪಟ್ಟಂತೆ ಈ ತಿಂಗಳ ಅಂತ್ಯದೊಳಗೆ ಸರ್ವೇ ಕಾರ್ಯ ಮುಗಿಸಿ, ದಾಖಲೆಗಳನ್ನು ಉಪವಿಭಾಗಾಧಿಕಾರಿ ನೇತೃತ್ವದ ತಾಲೂಕು ಸಮಿತಿಗೆ ನೀಡಬೇಕು. ಇನ್ನೂ ವಿಳಂಬವಾದರೆ ಪ್ರತಿ ಗ್ರಾಪಂಗೆ ಹೋಗಿ ಜನರನ್ನು ಸೇರಿಸಿ, ಜನರಿಂದ ಛೀಮಾರಿ ಹಾಕಿಸಬೇಕಾಗುತ್ತದೆ ಎಂದು ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಹೇಳಿದರು.

ತಾ.ಪಂ. ಸಭಾಂಗಣದಲ್ಲಿ ಸೋಮವಾರ ಅರಣ್ಯಹಕ್ಕು ಕಾಯ್ದೆ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷ ತೆ ವಹಿಸಿ ಮಾತನಾಡಿದ ಅವರು, ಅರಣ್ಯ ಹಕ್ಕು ಸಮಿತಿಗೆ ತಾಲೂಕಲ್ಲಿ 16000 ಅರ್ಜಿಗಳು ಬಂದಿವೆ. ಇಲ್ಲಿವರೆಗೆ 200ಜನರಿಗೆ ಮಾತ್ರ ಹಕ್ಕುಪತ್ರ ನೀಡಲಾಗಿದೆ. ಸಮಿತಿಯವರು, ಅಧಿಕಾರಿಗಳು ಕುಂಟು ನೆಪ ಹೇಳಿ ವಿಳಂಬಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದರು.

ರಾಜ್ಯದಲ್ಲೇ ಮಾದರಿಯಾಗುವ ರೀತಿ ಅರಣ್ಯಹಕ್ಕು ಕಾಯ್ದೆ ಅನುಷ್ಠಾನಕ್ಕೆ ತರಬೇಕೆಂಬುದು ತಮ್ಮ ಉದ್ದೇಶ. ಈ ಬಗ್ಗೆ ಸಿಎಂಗೂ ಪತ್ರ ಬರೆದು ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಶಿವಮೊಗ್ಗ ಜಿಲ್ಲೆಯ ಮಾದರಿಯಲ್ಲೇ ಕಾಯ್ದೆ ಅನುಷ್ಠಾನಕ್ಕೆ ಸೂಚನೆ ನೀಡುವಂತೆ ತಿಳಿಸಿದ್ದೇನೆ. ಅದಕ್ಕೆ ಸಿಎಂ ಸಹ ಸ್ಪಂದಿಸಿದ್ದಾರೆ. ಆದರೆ ಕೆಳಹಂತದ ಅಧಿಕಾರಿಗಳು ಸೂಕ್ತವಾಗಿ ಕಾಯ್ದೆ ಅನುಷ್ಠಾನಕ್ಕೆ ಸಹಕಾರ ನೀಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಉಪವಿಭಾಗಾಧಿಕಾರಿ ಡಿ.ಎಂ.ಸತೀಶ್‌ಕುಮಾರ್‌ ಮಾತನಾಡಿ, ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ರ ಪಾತ್ರ ಪ್ರಮುಖವಾಗಿದೆ. ಆದರೆ ಸಮನ್ವಯ ಕೊರತೆ ಎದ್ದು ಕಾಣುತ್ತಿದೆ. ಸರ್ವೇ, ನಕಾಶೆ ಸಿದ್ಧತೆ, ಸಿದ್ಧವಾದ ಅರ್ಜಿಗಳ ಮಂಡನೆ ಮುಂತಾದವುಗಳ ಕುರಿತು ಸಮಸ್ಯೆ ಇದ್ದರೆ ತಿಳಿಸಬೇಕು. ಕಂದಾಯ ಜಮೀನು ಎಂಬ ಕಾರಣಕ್ಕಾಗಿ ತಿರಸ್ಕೃತವಾಗಿದ್ದರೆ ನಮೂದಿಸಬೇಕೆಂದರು.

ಸರ್ವೇಯರ್‌ ಕೊರತೆ, ನಿಗದಿ ವೇಳಾಪಟ್ಟಿಯಂತೆ ಅಧಿಕಾರಿಗಳು ಕೆಲಸ ಮಾಡದಿರುವುದು, ಸಮಿತಿ ಪದಾಧಿಕಾರಿಗಳು ಸಹಕರಿಸದಿರುವುದು ಮುಂತಾದ ಸಮಸ್ಯೆ ಕುರಿತು ಮೇಗಾನೆ ಸಮಿತಿಯ ಕೇಶವ, ಹಿರಿಯರ ಸಮಿತಿ ಕಾರ‍್ಯದರ್ಶಿ ಎಚ್‌.ಎನ್‌.ಚಂದ್ರ, ಎಸ್‌ಎಸ್‌ಭೋಗ್‌ನ ಸುಬ್ರಮಣ್ಯ ಭಟ್‌ ಮತ್ತಿತರರು ಪ್ರಸ್ತಾಪಿಸಿದರು.

ತಾ.ಪಂ.ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ, ಉಪ ಅರಣ್ಯ ಸಂರಕ್ಷ ಣಾಧಿಕಾರಿ ಮೋಹನ್‌ ಗಂಗೊಳ್ಳಿ, ತಾಪಂ ಇಒ ಸಿದ್ದಲಿಂಗಯ್ಯ, ಸಮಾಜಕಲ್ಯಾಣ ಇಲಾಖೆಯ ಗಣಪತಿ ಹಾಜರಿದ್ದರು. ಎನ್‌.ಟಿ.ಧರ್ಮೋಜಿರಾವ್‌ ವಂದಿಸಿದರು.

-------------

Vijaya Karnataka Web amp39 amp39
‘ಅರಣ್ಯ ಹಕ್ಕು’ ಮೇ ಅಂತ್ಯದೊಳಗೆ ಸರ್ವೇ ಮುಗಿಸಿ

ಗ್ರಾಮ ಅರಣ್ಯ ಸಮಿತಿ ಸರಿಯಾಗಿ ಕೆಲಸ ಮಾಡದಿದ್ದರೆ ತಹಸೀಲ್ದಾರ್‌ ನೋಟೀಸ್‌ ನೀಡಬೇಕು. ಸೊಪ್ಪಿನ ಬೆಟ್ಟ , ಕಾನು ಇದ್ದರೆ ಸದ್ಯಕ್ಕೆ ಯಾವುದೇ ತೀರ್ಮಾನ ಬೇಡ. ಸರ್ವೇಯರ್‌ ಅಥವಾ ಅರಣ್ಯ ಇಲಾಖೆಯ ಸಿಬ್ಬಂದಿ ಸಹಕಾರ ನೀಡದಿದ್ದರೆ ತಹಸೀಲ್ದಾರ್‌ಗೆ ಲಿಖಿತವಾಗಿ ದೂರು ನೀಡಬೇಕು. ಸಮಿತಿಯವರು ಸಭಾ ನಡವಳಿಕೆ ನೀಡದಿದ್ದರೂ ತಾಲೂಕು ಮಟ್ಟದ ಅಧಿಕಾರಿಗಳಿಗೆ ತಿಳಿಸಬೇಕು. ಸರ್ವೇಯಾಗಿ, ನಕಾಶೆ ಸಿದ್ಧವಾದ ತಕ್ಷ ಣ ತಾಲೂಕು ಸಮಿತಿಗೆ ಒಪ್ಪಿಸಬೇಕು.

*ಕಾಗೋಡುತಿಮ್ಮಪ್ಪ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ