ಆ್ಯಪ್ನಗರ

ಪಿ.ಲಂಕೇಶ್‌ ಲೋಕದ ಡೊಂಕನ್ನು ಅರ್ಥೈಸಿದ ವಿಶ್ಲೇಷಕ

ಮನುಷ್ಯನ ಸಹಜ ಸಣ್ಣತನವನ್ನು ಮೀರಿ ಹೆಮ್ಮರವಾಗಿ ಬೆಳೆದಿದ್ದ ಪಿ.ಲಂಕೇಶ್‌ ಈ ನೆಲದ ಭಾವನೆಗಳಿಗೆ ಹಾಗೂ ಸಂದರ್ಭಗಳಿಗೆ ಸೂಕ್ತವೆನಿಸುವ ಸಾಹಿತ್ಯ ಸೃಷ್ಟಿಗೆ ಕಾರಣಕರ್ತರಾದರು ಎಂದು ಕುವೆಂಪು ವಿವಿ ಕುಲಪತಿ ಪ್ರೊ.ಜೋಗನ್‌ ಶಂಕರ್‌ ಹೇಳಿದರು.

Vijaya Karnataka 28 Mar 2019, 5:00 am
ಶಿವಮೊಗ್ಗ: ಮನುಷ್ಯನ ಸಹಜ ಸಣ್ಣತನವನ್ನು ಮೀರಿ ಹೆಮ್ಮರವಾಗಿ ಬೆಳೆದಿದ್ದ ಪಿ.ಲಂಕೇಶ್‌ ಈ ನೆಲದ ಭಾವನೆಗಳಿಗೆ ಹಾಗೂ ಸಂದರ್ಭಗಳಿಗೆ ಸೂಕ್ತವೆನಿಸುವ ಸಾಹಿತ್ಯ ಸೃಷ್ಟಿಗೆ ಕಾರಣಕರ್ತರಾದರು ಎಂದು ಕುವೆಂಪು ವಿವಿ ಕುಲಪತಿ ಪ್ರೊ.ಜೋಗನ್‌ ಶಂಕರ್‌ ಹೇಳಿದರು.
Vijaya Karnataka Web 27ganesh8


ವಿಶ್ವ ರಂಗಭೂಮಿ ದಿನಾಚರಣೆ ಅಂಗವಾಗಿ ನಗರದ ರಂಗಾಯಣದಲ್ಲಿ ಬುಧವಾರ ಏರ್ಪಡಿಸಿದ್ದ ರಂಗಾಯಣದ ರಂಗೋತ್ಸವ ಹಾಗೂ ಪಿ.ಲಂಕೇಶರಿಗೆ ರಂಗ ನಮನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಧರ್ಮ, ಜಾತಿ, ಲೈಂಗಿಕತೆಯ ಬಗೆಗಿನ ತಪ್ಪು ಗ್ರಹಿಕೆಯನ್ನು ನಾವು ಹೇಗೆ ರೂಢಿಸಿಕೊಂಡು ಬಂದಿದ್ದೇವೆ, ಅವುಗಳನ್ನು ಮೀರುವ ಬಗೆಗಳು ಯಾವುದು ಎನ್ನುವುದನ್ನು ಲಂಕೇಶ್‌ ಅವರು ತಮ್ಮ ಸಾಹಿತ್ಯದ ಮೂಲಕ ನಿರೂಪಿಸಿದ್ದಾರೆ. ನಾಟಕ ಹಾಗೂ ಬರಹದ ಮೂಲಕ ಲೋಕದ ಡೊಂಕನ್ನು ಅರ್ಥೈಸುವ, ವಿಶ್ಲೇಷಿಸುವ ಕೆಲಸ ಮಾಡಿದ್ದಾರೆ ಎಂದರು.

ಜಾತಿ ವಿನಾಶದ ನಡೆಗಳನ್ನು ಅತ್ಯಂತ ತಾತ್ವಿಕವಾಗಿ ಹಾಗೂ ಪ್ರಾಯೋಗಿಕವಾಗಿ ತಮ್ಮ ಒಟ್ಟು ಬರಹಗಳಲ್ಲಿ ಅವರು ಕಂಡರಿಸಿದ್ದಾರೆ. ಕಲೆಗಾಗಿ ಕಲೆಯಲ್ಲ ಅದು ಬದುಕಿನ ಅರಿವಿಗಾಗಿ ಎಂಬ ವಾಸ್ತವವನ್ನು ಲಂಕೇಶ್‌ ಅವರು ಬಲವಾಗಿ ನಂಬಿದ್ದರು. ತಮ್ಮ ಬರಹದ ಮೂಲಕವೇ ಸಮಾಜದಲ್ಲಿ ಚಾಲ್ತಿಯಲ್ಲಿರುವ ಅನ್ಯಾಯ, ದೌರ್ಜನ್ಯ, ಶೋಷಣೆಯಂತಹ ಅನಿಷ್ಟ ಪದ್ಧತಿಗಳನ್ನು ಕಟುವಾಗಿ ವಿರೋಧಿಸಿ ಅನೇಕ ಸವಾಲುಗಳನ್ನು ಎದುರಿಸಿದ ದಿಗ್ಗಜ ಸಾಹಿತಿ ಲಂಕೇಶ್‌ ಎಂದು ಬಣ್ಣಿಸಿದರು.

ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅರವಿಂದ ಮಾಲಗತ್ತಿ, ರಂಗನಿರ್ದೇಶಕ ಶ್ರೀಪಾದ ಭಟ್‌, ಕುವೆಂಪು ವಿಶ್ವವಿದ್ಯಾಲಯದ ವಿಶ್ರಾಂತ ಕುಲಸಚಿವ ಪ್ರೊ.ಶ್ರೀಕಂಠ ಕೂಡಿಗೆ, ಚಂದ್ರಶೇಖರ್‌ ಹಿರೇಗೋಣಿಗೆರೆ, ರಂಗಾಯಣದ ನಿರ್ದೇಶಕ ಎಂ.ಗಣೇಶ್‌, ಕಾಂತೇಶ ಕದರಮಂಡಲಗಿ, ರಂಗಾಯಣ ಆಡಳಿತ ಅಧಿಕಾರಿ ಶಫಿ ಸಾದುದ್ದೀನ್‌ ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ