ಆ್ಯಪ್ನಗರ

ಶೂನ್ಯ ಸೃಷ್ಟಿಸಿದ ಅಣ್ಣಪ್ಪನ ನಿಧನ: ಕಾಗೋಡು ಕಣ್ಣೀರು

ರಾಜಕೀಯವಾಗಿ ನಾನು ಸಾಮಾಜಿಕ ನ್ಯಾಯ ಕೊಡಿಸುವಲ್ಲಿ ಕಾಗೋಡು ಅಣ್ಣಪ್ಪನ ಪಾತ್ರ ಬಹಳ ಇದೆ, ಅಣ್ಣಪ್ಪನ ಸಾವು ನನ್ನೊಳಗೆ ಶೂನ್ಯತೆಯ ಭಾವ ಮೂಡಿಸುತ್ತಿದೆ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು.

Vijaya Karnataka 8 Sep 2018, 5:00 am
ಸಾಗರ: ರಾಜಕೀಯವಾಗಿ ನಾನು ಸಾಮಾಜಿಕ ನ್ಯಾಯ ಕೊಡಿಸುವಲ್ಲಿ ಕಾಗೋಡು ಅಣ್ಣಪ್ಪನ ಪಾತ್ರ ಬಹಳ ಇದೆ, ಅಣ್ಣಪ್ಪನ ಸಾವು ನನ್ನೊಳಗೆ ಶೂನ್ಯತೆಯ ಭಾವ ಮೂಡಿಸುತ್ತಿದೆ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು.
Vijaya Karnataka Web SMR-07SGR5


ಇಲ್ಲಿನ ಗಾಂಧಿಮಂದಿರದಲ್ಲಿ ಶುಕ್ರವಾರ ಬ್ಲಾಕ್‌ ಕಾಂಗ್ರೆಸ್‌ ಹಮ್ಮಿಕೊಂಡಿದ್ದ ಜಿ.ಪಂ. ಸದಸ್ಯ ದಿ. ಕಾಗೋಡು ಅಣ್ಣಪ್ಪ ಅವರ ಶ್ರದ್ಧಾಂಜಲಿ ಸಭೆ ಉದ್ದೇಶಿಸಿ ಅವರು ಮಾತನಾಡಿದರು.

ನನ್ನ ಮಕ್ಕಳಿಗಿಂತ ಹೆಚ್ಚು ನನ್ನ ರಾಜಕೀಯ ಜೀವನದಲ್ಲಿ ಬೆನ್ನೆಲುಬಾಗಿ ನಿಂತಿದ್ದ ಕಾಗೋಡು ಅಣ್ಣಪ್ಪ ಇಲ್ಲ ಎನ್ನುವುದನ್ನು ನಂಬಲೂ ಈ ಕ್ಷ ಣದವರೆಗೆ ನನಗೆ ಸಾಧ್ಯವಾಗುತ್ತಿಲ್ಲ . ಹಿಂದಿನಿಂದಲೂ ನಾನು ಶಾಸಕ, ಸಚಿವನಾಗಿ ಹೋರಾಟ ಮತ್ತು ರಾಜಕೀಯ ಸ್ಥಾನಮಾನದ ಮೂಲಕ ಜನರಿಗೆ ಸಾಮಾಜಿಕ ನ್ಯಾಯ ದೊರಕಿಸಿಕೊಡುವ ಕೆಲಸ ಮಾಡುತ್ತಾ ಬಂದಿದ್ದೇನೆ. ಈ ಎಲ್ಲ ಸಂದರ್ಭದಲ್ಲೂ ನನ್ನ ಬೆಂಗಾವಲಾಗಿ ನಿಂತಿದ್ದು ಕಾಗೋಡು ಅಣ್ಣಪ್ಪ ಎನ್ನುವುದು ಸ್ಮರಣಾರ್ಹ. ನಾನು ಅಧಿವೇಶನಗಳಲ್ಲಿ ಮಾತನಾಡಲು ಅಗತ್ಯ ಕ್ಷೇತ್ರ ಕಾರ‍್ಯ ಮಾಡಿ, ನನಗೆ ಎಲ್ಲ ರೀತಿಯಲ್ಲಿ ಸಹ ಅಣ್ಣಪ್ಪ ನೆರವಾಗುತ್ತಿದ್ದ ಎಂದರು.

ಅನೇಕ ಸಂಕಷ್ಟಗಳ ಸಂದರ್ಭ ನನ್ನ ಹಿಂದೆ ನಿಂತು ಜವಾಬ್ದಾರಿಗಳನ್ನು ನಿರ್ವಹಿಸಿದ್ದಾನೆ. ನನಗೆ ಹೆಚ್ಚು ಪ್ರೀತಿಪಾತ್ರನಾಗಿದ್ದ. ನಾಟಕ, ಸಾಂಸ್ಕೃತಿಕ ಗೀಳು ಅಂಟಿಸಿಕೊಂಡಿದ್ದ ಆತನ ಅಕಾಲಿಕ ನಿಧನ ನನಗೆ ಅತೀವ ದುಃಖ ತಂದಿದೆ ಎಂದು ಕಣ್ಣೀರು ಸುರಿಸಿ, ಮುಂದೆ ಮಾತನಾಡಲಾಗದೇ ಸ್ತಬ್ಧರಾದರು.

ಎಪಿಎಂಸಿ ಅಧ್ಯಕ್ಷ ಕೆ.ಹೊಳೆಯಪ್ಪ , ತಾ.ಪಂ. ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ , ಸದಸ್ಯ ಚಂದ್ರಪ್ಪ ಕಲಸೆ ಮತ್ತಿತರರು ಮಾತನಾಡಿದರು.

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಲ್‌.ಟಿ.ತಿಮ್ಮಪ್ಪ, ನಗರ ಬ್ಲಾಕ್‌ ಅಧ್ಯಕ್ಷ ಮಕ್ಬೂಲ್‌ ಅಹ್ಮದ್‌, ಮಾಜಿ ಅಧ್ಯಕ್ಷ ಎನ್‌.ಜಿ.ಪೈ, ಕೆಪಿಸಿಸಿ ಕಾರ್ಯದರ್ಶಿ ಡಾ. ರಾಜನಂದಿನಿ, ನಗರಸಭೆ ಅಧ್ಯಕ್ಷೆ ವೀಣಾ ಪರಮೇಶ್ವರ್‌ ಮತ್ತಿತರರು ಹಾಜರಿದ್ದರು.

ಆರ‍್ಯ ಈಡಿಗ ಯುವ ವೇದಿಕೆ, ಆರ‍್ಯ ಈಡಿಗ ಸಂಘದಲ್ಲಿ ಕಾಗೋಡು ಅಣ್ಣಪ್ಪ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಕೆ.ಹೊಳಿಯಪ್ಪ, ಗಿರೀಶ್‌ ಕೋವಿ, ರವಿ, ಕರುಣಾಕರ ಮತ್ತಿತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ