ಆ್ಯಪ್ನಗರ

ಮಳೆಗಾಗಿ ಸಿದ್ದಿವಿನಾಯಕನಿಗೆ ಎಳನೀರು ಅಭಿಷೇಕ

ಪಟ್ಟಣದ ಪುರಾಣ ಪ್ರಸಿದ್ಧ ಶ್ರೀವರಸಿದ್ದಿವಿನಾಯಕ ಸ್ವಾಮಿ ದೇವಸ್ಥಾನದಲ್ಲಿ ಶುಕ್ರವಾರ ಮಳೆಗಾಗಿ ಪ್ರಾರ್ಥಿಸಿ 108 ಎಳನೀರಿನ ಅಭಿಷೇಕ ಮತ್ತು ವಿಶೇಷ ಅಲಂಕಾರ ಪೂಜೆ ನಡೆಸಲಾಯಿತು.

Vijaya Karnataka 11 Jun 2019, 5:00 am
ರಿಪ್ಪನ್‌ಪೇಟೆ: ಪಟ್ಟಣದ ಪುರಾಣ ಪ್ರಸಿದ್ಧ ಶ್ರೀವರಸಿದ್ದಿವಿನಾಯಕ ಸ್ವಾಮಿ ದೇವಸ್ಥಾನದಲ್ಲಿ ಶುಕ್ರವಾರ ಮಳೆಗಾಗಿ ಪ್ರಾರ್ಥಿಸಿ 108 ಎಳನೀರಿನ ಅಭಿಷೇಕ ಮತ್ತು ವಿಶೇಷ ಅಲಂಕಾರ ಪೂಜೆ ನಡೆಸಲಾಯಿತು.
Vijaya Karnataka Web anointing the coconut water for rain to god siddivinayaka
ಮಳೆಗಾಗಿ ಸಿದ್ದಿವಿನಾಯಕನಿಗೆ ಎಳನೀರು ಅಭಿಷೇಕ


ನಾಡಿನಲ್ಲಿ ಬರಗಾಲ ದೂರಾಗಿ ಉತ್ತಮ ಮಳೆಯಾಗಬೇಕು. ಮಳೆಯಾಗುವ ಮೂಲಕ ಸುತ್ತಮುತ್ತಲಿನ ಕೆರೆಕಟ್ಟೆ ತುಂಬಬೇಕು. ಕುಡಿಯಲು ನೀರು ಮತ್ತು ರೈತರ ಹೊಲ ಗದ್ದೆಯ ಬೆಳೆಗಳಿಗೆ ನೀರೊದಗಿ ರೈತಾಪಿ ಬದುಕು ಸಮೃದ್ಧಿಗೊಳ್ಳಬೇಕೆಂದು ದೇವಸ್ಥಾನದ ಪ್ರಧಾನ ಅರ್ಚಕ ಚಂದ್ರಶೇಖರ್‌ ಭಟ್‌ ಮತ್ತು ಅರಸಾಳು ಗುರುರಾಜ್‌ ಭಟ್‌ ನೇತೃತ್ವದಲ್ಲಿ ಎಳನೀರು ಅಭಿಷೇಕ ಪೂಜೆ ನಡೆಯಿತು. ಈ ಸಂದರ್ಭ ದೇವಸ್ಥಾನ ಧರ್ಮದರ್ಶಿ ಸಮಿತಿ ಅಧ್ಯಕ್ಷ ಗಣೇಶ್‌ ಕಾಮತ್‌, ಎಂ.ಡಿ.ಇಂದ್ರಮ್ಮ, ಎನ್‌.ಸತೀಶ್‌, ಶೋಭ ಶಶಿಧರ ಪೈ, ಮಧುಸೂಧನ್‌, ಆರ್‌.ಈ.ಈಶ್ವರ, ಎಚ್‌.ಎನ್‌.ಉಮೇಶ್‌, ವೈ.ಜೆ.ಕೃಷ್ಣ, ರಾಜೇಶ್‌, ಎನ್‌.ಸತೀಶ್‌, ಅರವಿಂದ, ಸುಧೀಂದ್ರಹೆಬ್ಬಾರ್‌ ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ