ಆ್ಯಪ್ನಗರ

ಡೈನಾಮೈಟ್‌ ಸ್ಫೋಟದ ಕಿಡಿ ಆರುವ ಮುನ್ನವೇ ಶಿವಮೊಗ್ಗದಲ್ಲಿ ಮತ್ತೊಂದು ಅಗ್ನಿ ಅವಘಡ!

ಶಿವಮೊಗ್ಗದಲ್ಲಿ ಡೈನಾಮೈಟ್‌ ಸ್ಫೋಟದ ಬೆಂಕಿ ಆರುವ ಮುನ್ನವೇ ಮತ್ತೊಂದು ಅಗ್ನಿ ಅವಘಡವು ನಗರದ ಪ್ರಮುಖ ವ್ಯಾಪಾರ ಕೇಂದ್ರ ಗಾಂಧಿಬಜಾರ್ ನಲ್ಲಿ ನಡೆದಿದೆ. ಸೌಂದರ್ಯ ವರ್ಧಕ ಉತ್ಪನ್ನಗಳ ಅತೀ ದೊಡ್ಡ ವ್ಯಾಪಾರ ಕೇಂದ್ರ ಮಾತಾಶ್ರೀ ನಾವೆಲ್ಟಿಸ್ ನ ಎರಡು ಅಂತಸ್ತಿನ ಕಟ್ಟಡ ಸಂಪೂರ್ಣ ಸುಟ್ಟು ಭಸ್ಮವಾಗಿದೆ.

Vijaya Karnataka Web 24 Jan 2021, 1:16 pm
ಶಿವಮೊಗ್ಗ: ಹುಣಸೋಡು ಸ್ಫೋಟದ ಪ್ರತಿಧ್ವನಿ ಅಡಗುವ ಮುನ್ನವೆ ನಗರದ ಪ್ರಮುಖ ವ್ಯಾಪಾರ ಕೇಂದ್ರ ಗಾಂಧಿಬಜಾರ್ ನಲ್ಲಿ ಶನಿವಾರ ಮಧ್ಯರಾತ್ರಿ ಬೆಂಕಿ ಅವಘಡ ಸಂಭವಿಸಿದೆ.

ಗಾಂಧಿ ಬಜಾರ್ ನ ಕನ್ನಿಕಾ ಪರಮೇಶ್ವರಿ ದೇವಸ್ಥಾನದ ಎದುರು ಇರುವ ಸೌಂದರ್ಯ ವರ್ಧಕ ಉತ್ಪನ್ನಗಳ ಅತೀ ದೊಡ್ಡ ವ್ಯಾಪಾರ ಕೇಂದ್ರ ಮಾತಾಶ್ರೀ ನಾವೆಲ್ಟಿಸ್ ನ ಎರಡು ಅಂತಸ್ತಿನ ಕಟ್ಟಡ ಸಂಪೂರ್ಣ ಸುಟ್ಟು ಭಸ್ಮವಾಗಿದೆ.

ಬೆಂಕಿ ಅವಘಡಕ್ಕೆ ಶಾರ್ಟ್ ಸೆರ್ಕ್ಯೂಟ್ ಕಾರಣ ಎಂದು ಹೇಳಲಾಗುತ್ತಿದೆ. ಮಾತಾಶ್ರೀ ನಾವೆಲ್ಟೀಸ್ ನ್ನು ಇತ್ತೀಚೆಗಷ್ಟೆ ಆಧುನೀಕರಿಸಿದ್ದರು. ಅಗ್ನಿ ಶಾಮಕದಳದ ಸಿಬ್ಬಂದಿ ಅವಿರತ ಶ್ರಮಿಸಿ ಬೆಂಕಿಯನ್ನು ನಂದಿಸಿದರು. ಬೆಂಕಿ ನಂದಿಸಲು ಮೂರು ವಾಹನಗಳು ಆಗಮಿಸಿದ್ದವು.
ಶಿವಮೊಗ್ಗ ಡೈನಾಮೈಟ್‌ ಬ್ಲಾಸ್ಟ್: ಮೂವರು ಅರೆಸ್ಟ್‌, ಸ್ಥಳಕ್ಕೆ ಧಾವಿಸಿದ ಬಾಂಬ್‌ ಸ್ಕ್ವಾಡ್‌!
ಮಧ್ಯರಾತ್ರಿ 12.45ರ ಹೊತ್ತಿಗೆ ಕಾಣಿಸಿಕೊಂಡ ಬೆಂಕಿಯು ಕೇವಲ ಅರ್ಧ ತಾಸಿನಲ್ಲಿ ಇಡೀ ಕಟ್ಟಡವನ್ನು ಆವರಿಸಿಕೊಂಡು ಉರಿಯಲಾರಂಭಿಸಿತು. ಅಕ್ರಮ ಗಣಿಗಾರಿಕೆಗೆ ಆಯಾ ಜಿಲ್ಲಾಧಿಕಾರಗಳನ್ನೇ ಹೊಣೆ ಮಾಡಲಾಗುವುದು: ಸಿಎಂ ಯಡಿಯೂರಪ್ಪ ಖಡಕ್ ಸೂಚನೆ!
ಬೆಂಕಿಯ ಕೆನ್ನಾಲಿಗೆಗೆ ಅಕ್ಕಪಕ್ಕದ ಕಟ್ಟಡಗಳು ಕೂಡಾ ಸುಟ್ಟಿವೆ. ನಷ್ಟದ ಪ್ರಮಾಣ ಇನ್ನೂ ತಿಳಿದು ಬಂದಿಲ್ಲ. ಬೆಂಕಿ ಅವಘಡದಿಂದ ಆತಂಕಿತರಾದ ಗಾಂಧಿ ಬಜಾರ್ ನ ಜನತೆ ರಾತ್ರಿಪೂರ್ತಿ ಜಾಗರಣೆ ಮಾಡಬೇಕಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ