ಆ್ಯಪ್ನಗರ

ವಿಐಎಸ್‌ಎಲ್‌ ಬಗ್ಗೆ ಮತದಾರರಿಗೆ ಉತ್ತರಿಸಿ

ಚುನಾವಣೆ ಪೂರ್ವದಲ್ಲಿ ಬಿಜೆಪಿ ನೀಡಿದ್ದ ಹಲವು ಆಶ್ವಾಸನೆಗಳಿಗೆ ತದ್ವಿರುದ್ಧವಾಗಿ ಕೇಂದ್ರ ಸರಕಾರ ನಡೆದುಕೊಳ್ಳುತ್ತಿದೆ. ವಿಐಎಸ್‌ಎಲ್‌ ಕಾರ್ಖಾನೆ ಖಾಸಗೀಕರಣಕ್ಕೆ ಮುಂದಾಗಿರುವುದು ಶೋಚನೀಯ. ಈ ಬಗ್ಗೆ ಸಂಸದರಿಗೆ ಮತದಾರರೇ ಪ್ರಶ್ನಿಸಬೇಕು ಎಂದು ಮಾಜಿ ಶಾಸಕ ಮಧು ಬಂಗಾರಪ್ಪ ಹೇಳಿದರು.

Vijaya Karnataka 22 Jun 2019, 5:00 am
ಶಿವಮೊಗ್ಗ : ಚುನಾವಣೆ ಪೂರ್ವದಲ್ಲಿ ಬಿಜೆಪಿ ನೀಡಿದ್ದ ಹಲವು ಆಶ್ವಾಸನೆಗಳಿಗೆ ತದ್ವಿರುದ್ಧವಾಗಿ ಕೇಂದ್ರ ಸರಕಾರ ನಡೆದುಕೊಳ್ಳುತ್ತಿದೆ. ವಿಐಎಸ್‌ಎಲ್‌ ಕಾರ್ಖಾನೆ ಖಾಸಗೀಕರಣಕ್ಕೆ ಮುಂದಾಗಿರುವುದು ಶೋಚನೀಯ. ಈ ಬಗ್ಗೆ ಸಂಸದರಿಗೆ ಮತದಾರರೇ ಪ್ರಶ್ನಿಸಬೇಕು ಎಂದು ಮಾಜಿ ಶಾಸಕ ಮಧು ಬಂಗಾರಪ್ಪ ಹೇಳಿದರು.
Vijaya Karnataka Web SMG-2106-2-15-21SMG3


ನಗರದ ಲಗನ ಕಲ್ಯಾಣ ಮಂದಿರದಲ್ಲಿ ಶುಕ್ರವಾರ ಸಂಜೆ ಹಮ್ಮಿಕೊಂಡಿದ್ದ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಜಂಟಿ ಕೃತಜ್ಞತಾ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಪ್ರಮುಖ ಸವಾಲುಗಳಾದ ಬಗರ್‌ ಹುಕುಂ, ಅರಣ್ಯ ಭೂಮಿ ಹಕ್ಕು ಹಾಗೂ ವಿಎಸ್‌ಐಎಲ್‌ ಇವುಗಳ ಬಗ್ಗೆ ಸಂಸದ ರಾಘವೇಂದ್ರ ಅವರು ಯಾವ ಕ್ರಮಕೈಗೊಳ್ಳಲಿದ್ದಾರೋ ನನಗೆ ಗೊತ್ತಿಲ್ಲ. ಆದರೆ, ಜನರಿಗೆ ಅನ್ಯಾಯವಾದಲ್ಲಿ ನಾನು ಜನಪರ ಹೋರಾಟಕ್ಕಿಳಿಯುತ್ತೇನೆ ಎಂದರು.

ದೇವೇಗೌಡ, ಖರ್ಗೆ ಸೋಲಬಾರದಿತ್ತು :
ಚುನಾವಣೆಯಲ್ಲಿ ಸೋಲುಂಟಾದರೂ ಹೆದರುವ ವ್ಯಕ್ತಿ ನಾನಲ್ಲ. ಸೋಲಿನ ಬಗ್ಗೆ ಚೆರ್ಚೆಯನ್ನೂ ಮಾಡುವುದಿಲ್ಲ. ಕ್ಷೇತ್ರದ ಜನರೊಂದಿಗೆ ಶಾಶ್ವತವಾಗಿದ್ದು ಕೆಲಸಗಳನ್ನು ಮಾಡುವೆ. ಜನರ ಕಷ್ಟಗಳಿಗೆ ಸ್ಪಂದಿಸುತ್ತೇನೆ ಎಂದು ಹೇಳಿದರು.

ಹಿರಿಯರಾದ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಹಾಗೂ ಮಾಜಿ ಸಂಸದ ಮಲ್ಲಿಕಾರ್ಜುನ ಖರ್ಗೆ ಅವರು ಸೋಲಬಾರದಿತ್ತು. ಇಡಿ ರಾಜ್ಯದಲ್ಲಿ ಎರಡು ಪಕ್ಷ ಗಳು ಒಗ್ಗಟ್ಟು ಹಾಗೂ ಯಾವುದೇ ಭಿನ್ನಾಭಿಪ್ರಾಯಗಳಿಲ್ಲದೇ ಕೆಲಸ ಮಾಡಿದ ಕ್ಷೇತ್ರ ಶಿವಮೊಗ್ಗ. ನನ್ನನ್ನು ಗೆಲ್ಲಿಸಿಕೊಂಡು ಬರಲು ಕಾಂಗ್ರೆಸ್‌, ಜೆಡಿಎಸ್‌ ನಾಯಕರರೆಲ್ಲರೂ ಒಗ್ಗಟ್ಟಿನಿಂದ ಬಂದಿದ್ದರು. ಇದರೊಂದಿಗೆ ನನಗೆ ಚುನಾವಣೆಯಲ್ಲಿ ಅವಕಾಶ ನೀಡಿದ ಮೈತ್ರಿ ಸರಕಾರದ ಎಲ್ಲ ನಾಯಕರಿಗೂ ಧನ್ಯವಾದ ಸಲ್ಲಿಸುತ್ತೇನೆ ಎಂದು ತಿಳಿಸಿದರು.

ಪಾಲಿಕೆ ಸದಸ್ಯ ಎಚ್‌.ಸಿ.ಯೋಗೇಶ್‌ ಮಾತನಾಡಿ, ಮತಗಳನ್ನು ಧರ್ಮದ ಆಧಾರದ ಮೇಲೆ ವಿಭಜಿಸುವ ಕೆಲಸವನ್ನು ಬಿಜೆಪಿ ಮಾಡಿದೆ. ಚುನಾವಣೆ ಹೊಸ್ತಿಲಲ್ಲಿರುವಾಗ ನಡೆದ ಪುಲ್ವಾಮಾ ದಂತಹ ಪ್ರಕರಣದಿಂದ ಮತದಾರರನ್ನು ವಿಚಲಿತರನ್ನಾಗಿ ಮಾಡಲಾಗಿದೆ ಎಂದು ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜನರ ಮಧ್ಯೆ ಮಧು ಬಂಗಾರಪ್ಪ ಅವರು ಸೇತುವೆ ರೂಪದಲ್ಲಿ ಕೆಲಸ ಮಾಡಬೇಕು. ಈ ಕೃತಜ್ಞತೆ ಸಭೆ ಮೂಲಕ ನವೆಂಬರ್‌ನಿಂದ ನಿರಂತರ ಕೆಲಸ ಮಾಡಿದ ಕಾರ್ಯಕರ್ತರಿಗೆ ಗೌರವ ಸಲ್ಲಿಸಿದಂತಾಗಿದೆ ಎಂದರು. ಮುಖಂಡರಾದ ಎಂ.ಶ್ರೀಕಾಂತ್‌, ಕಲಕೋಡು ರತ್ನಾಕರ್‌, ಇಮ್ತಿಯಾಜ್‌, ಪಲ್ಲವಿ, ನಾಗರಾಜ್‌ ಕಂಕಾರಿ, ವೇದಾ ವಿಜಯಕುಮಾರ್‌ ಇತರರಿದ್ದರು.

===
'ಬಿಜೆಪಿ ತಾಳಕ್ಕೆ ಕುಣಿಯುವ ಉಸ್ತುವಾರಿ'
ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರು ಬಿಜೆಪಿಯ ತಾಳಕ್ಕೆ ತಕ್ಕಂತೆ ಕೆಲಸ ಮಾಡುತಿದ್ದಾರೆ. ಹೀಗಾಗಿ, ಮಧು ಬಂಗಾರಪ್ಪ ಅವರು ಉಸ್ತುವಾರಿಯಂತೆ ಕೆಲಸ ಮಾಡಬೇಕಿದೆ. ಜಿಲ್ಲೆಯ ಸಮಸ್ಯೆಗಳೆಡೆಗೆ ಗಮನಹರಿಸುವ ನಿಟ್ಟಿನಲ್ಲಿ ಅವರ ಗಮನ ಸೆಳೆಯಬೇಕಿದೆ ಎಂದು ಕಾಂಗ್ರೆಸ್‌ ಮಾಜಿ ಜಿಲ್ಲಾಧ್ಯಕ್ಷ ತೀ.ನ.ಶ್ರೀನಿವಾಸ್‌ ಆರೋಪಿಸಿದರು. ಬಾಯಿಗೆ ಬಂದಂತೆ ಮಾತನಾಡುವ ಪಕ್ಷದ ನಾಯಕರನ್ನು ಕಾರ್ಯಕರ್ತರೇ ನಿಯಂತ್ರಿಸಬೇಕು. ಜತೆಗೆ, ಯಾವುದೇ ಅಭ್ಯರ್ಥಿಗೆ ಸೋತೆನೆಂಬ ಕಾರಣಕ್ಕೆ ಹತಾಶೆ ಬೇಡ ಎಂದರು.

===
ಯಾವುದೇ ಭಿನ್ನಾಭಿಪ್ರಾಯಗಳಿಲ್ಲದೇ ಕೆಲಸ ಮಾಡಿದ್ದೇವೆ. ಆದರೆ, ನಾಯಕರಿಗೆ ಮತ್ತು ಮುಖಂಡರಿಗೆ ಎಲ್ಲೋ ಸ್ವಲ್ಪ ನಿಯಂತ್ರಣ ತಪ್ಪಿದ್ದರ ಫಲವಾಗಿ ಸೋತಿದ್ದೇವೆ. ಒಂದು ವರ್ಷದಲ್ಲಿ ಮೂರು ಸೋಲು ಕಂಡಿದ್ದರಿಂದಾಗಿ ತಕ್ಷಣ ಕೃತಜ್ಞತಾ ಕಾರ್ಯಕ್ರಮ ಹಮ್ಮಿಕೊಂಡಿರಲಿಲ್ಲ. ಹೀಗಾಗಿ, ಕಾರ್ಯಕರ್ತರು ಮತ್ತು ಮತದಾರರು ಕ್ಷಮಿಸಬೇಕು.
- ಎಚ್‌.ಎಸ್‌.ಸುಂದರೇಶ್‌, ಕಾಂಗ್ರೆಸ್‌ ಜಿಲ್ಲಾಧ್ಯಕ್ಷ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ