ಆ್ಯಪ್ನಗರ

ಬಸ್‌ಗಳಿಗೆ ‘ಶರಾವತಿ ಯೋಜನೆ ವಿರೋಧಿ ಫಲಕ’

ಶರಾವತಿ ಯೋಜನೆ ವಿರೋಧಿಸಿ ಗುರುವಾರ ಖಾಸಗಿ ಬಸ್‌ ಏಜೆಂಟರು ಮತ್ತು ನಿರ್ವಾಹಕರ ಸಂಘದಿಂದ ಮುಖ್ಯ ಬಸ್‌ ನಿಲ್ದಾಣದಲ್ಲಿ ಶಿವಮೊಗ್ಗ, ಬೆಂಗಳೂರಿಗೆ ಹೋಗುವ ಬಸ್‌ಗಳಿಗೆ 'ಶರಾವತಿ ನದಿ ನೀರನ್ನು ಬೆಂಗಳೂರಿಗೆ ತೆಗೆದುಕೊಂಡು ಹೋಗಲು ಬಿಡುವುದಿಲ್ಲ' ಎಂಬ ಘೋಷಣಾ ಫಲಕ ಅಳವಡಿಸುವ ಮೂಲಕ ಪ್ರತಿಭಟಿಸಲಾಯಿತು.

Vijaya Karnataka 5 Jul 2019, 5:00 am
ಸಾಗರ : ಶರಾವತಿ ಯೋಜನೆ ವಿರೋಧಿಸಿ ಗುರುವಾರ ಖಾಸಗಿ ಬಸ್‌ ಏಜೆಂಟರು ಮತ್ತು ನಿರ್ವಾಹಕರ ಸಂಘದಿಂದ ಮುಖ್ಯ ಬಸ್‌ ನಿಲ್ದಾಣದಲ್ಲಿ ಶಿವಮೊಗ್ಗ, ಬೆಂಗಳೂರಿಗೆ ಹೋಗುವ ಬಸ್‌ಗಳಿಗೆ 'ಶರಾವತಿ ನದಿ ನೀರನ್ನು ಬೆಂಗಳೂರಿಗೆ ತೆಗೆದುಕೊಂಡು ಹೋಗಲು ಬಿಡುವುದಿಲ್ಲ' ಎಂಬ ಘೋಷಣಾ ಫಲಕ ಅಳವಡಿಸುವ ಮೂಲಕ ಪ್ರತಿಭಟಿಸಲಾಯಿತು.
Vijaya Karnataka Web SMR-04SGR7


ಏಜೆಂಟರ ಸಂಘದ ನಾಗರಾಜ ಗುಡ್ಡೆಮನೆ ಮಾತನಾಡಿ, ರಾಜ್ಯ ಸರಕಾರ ಯೋಜನೆ ಕೈಬಿಡುವ ಮೂಲಕ ಮಲೆನಾಡು ಜನರ ಕೂಗಿಗೆ ಸ್ಪಂದಿಸಬೇಕು. ಜಿಲ್ಲಾ ಬಂದ್‌ಗೆ ಸಾಗರ ಮುಖ್ಯ ಬಸ್‌ ನಿಲ್ದಾಣದ ಎಲ್ಲರೂ ಬೆಂಬಲ ಘೋಷಣೆ ಮಾಡುತ್ತೇವೆ ಎಂದು ತಿಳಿಸಿದರು.

ಗೋಪಿನಾಥ್‌, ಸಂತೋಷ್‌, ಜನಾರ್ದನ ನಾಯಕ್‌, ರವೀಶ್‌, ನಾಗೇಶ್‌, ಖಾದರ್‌ , ಮಹೇಶ ಮತ್ತಿತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ