ಆ್ಯಪ್ನಗರ

ಜಮೀನು ತೆರವು ವಿರೋಧಿಸಿ ತಹಸೀಲ್ದಾರ್‌ಗೆ ಮನವಿ

ಬಡವರ ಜಮೀನನ್ನು ತೆರವುಗೊಳಿಸಿ ಸ್ಮಶಾನ ಮಾಡಲು ಹೊರಟಿರುವ ಕ್ರಮ ಖಂಡಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲೂಕು ಘಟಕದ ನೇತೃತ್ವದಲ್ಲಿ ಸೋಮವಾರ ಪಟ್ಟಣದ ತಾಲೂಕು ಕಚೇರಿಗೆ ತೆರಳಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು.

Vijaya Karnataka 23 Jul 2019, 5:00 am
ಸೊರಬ: ಬಡವರ ಜಮೀನನ್ನು ತೆರವುಗೊಳಿಸಿ ಸ್ಮಶಾನ ಮಾಡಲು ಹೊರಟಿರುವ ಕ್ರಮ ಖಂಡಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲೂಕು ಘಟಕದ ನೇತೃತ್ವದಲ್ಲಿ ಸೋಮವಾರ ಪಟ್ಟಣದ ತಾಲೂಕು ಕಚೇರಿಗೆ ತೆರಳಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು.
Vijaya Karnataka Web SMR-22SRBP1


ಸಮಿತಿ ರಾಜ್ಯ ವಿಭಾಗೀಯ ಸಂಚಾಲಕ ಗುರುರಾಜ ಮಾತನಾಡಿ, ಉಳವಿ ಹೋಬಳಿ ಹೊಸಬಾಳೆ ಗ್ರಾಪಂ ವ್ಯಾಪ್ತಿಯ ಕೋಡನಕಟ್ಟೆ ಗ್ರಾಮದ ಸರ್ವೆ ನಂ. 31ರಲ್ಲಿ ಸುಮಾರು 35ವರ್ಷಗಳಿಂದ 3 ಎಕರೆ 6ಗುಂಟೆ ಜಮೀನಿನಲ್ಲಿ ಅಣ್ಣಪ್ಪ ಕೊರಗಶೆಟ್ಟಿ ಎಂಬುವವರು ಉಳುಮೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. 1986ರಲ್ಲಿ ನಮೂನೆ 50 ಮತ್ತು 53ರಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಇವರಿಗೆ ಬಗರ್‌ಹುಕುಂ ಸಮಿತಿಯಿಂದ 2017ರಲ್ಲಿ ಮಂಜೂರಾತಿಯೂ ಸಹ ದೊರೆತಿದೆ. ಪ್ರತಿ ವರ್ಷದಂತೆ ಈ ವರ್ಷವೂ ಸಾಗುವಳಿ ಮಾಡಿಕೊಂಡು ಬಂದಿದ್ದು, ಇತ್ತೀಚೆಗೆ ಜು. 17ರಂದು ತಹಸೀಲ್ದಾರ್‌ ಸ್ಥಳ ಸಮೀಕ್ಷೆ ನಡೆಸುವ ವಿಷಯ ತಿಳಿದು ಕೆಲವರು ಜಮೀನಿನಲ್ಲಿ ಬೆಳೆದ ಜೋಳವನ್ನು ನಾಶ ಮಾಡಿರುವುದು ಖಂಡನೀಯ ಎಂದರು.

ಸಮಿತಿ ತಾಲೂಕು ಸಂಚಾಲಕ ಮಹೇಶ ಶಕುನವಳ್ಳಿ ಮಾತನಾಡಿ, ಗ್ರಾ.ಪಂ. ಸದಸ್ಯ ಸತ್ಯನಾರಾಯಣ ಎಂಬುವವರು ಅನಗತ್ಯ ಕಿರುಕುಳ ನೀಡುತ್ತಿರುವುದು ಸಲ್ಲದು. ಇತ್ತೀಚೆಗೆ ಸತ್ಯನಾರಾಯಣ ಅವರ ತಾಯಿ ಮೃತಪಟ್ಟ ಸಂದರ್ಭ ಅಣ್ಣಪ್ಪ ಅವರ ಜಮೀನಿನಲ್ಲಿಯೇ ಶವ ಸಂಸ್ಕಾರ ನಡೆಸಿದ್ದಾರೆ. ಗ್ರಾಮದಲ್ಲಿ ಶಾಂತಿ ಭಂಗಕ್ಕೆ ಯತ್ನಿಸುತ್ತಿರುವವರ ವಿರುದ್ಧ ಸಂಬಂಧಪಟ್ಟ ಇಲಾಖೆ ಸೂಕ್ತ ಕ್ರಮ ಕೈಗೊಂಡು, ಬಡ ರೈತನಿಗೆ ರಕ್ಷ ಣೆ ಒದಗಿಸಬೇಕು ಎಂದರು.

ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ಬಂಗಾರಪ್ಪ ನಿಟ್ಟಕ್ಕಿ, ಪ್ರಮುಖರಾದ ನಾಗರಾಜ ಹುರಳಿಕೊಪ್ಪ, ನಾಗರಾಜ ಕಾಸರಗುಪ್ಪೆ, ಸಂಜೀವ ನೇರಲಿಗಿ, ರವೀಂದ್ರ ಆನವಟ್ಟಿ, ರೈತ ಅಣ್ಣಪ್ಪ ಕೊರಗಶೆಟ್ಟಿ, ಗುಲಾಬಿ ಮತ್ತಿತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ