ಶೆಟ್ಟಿಹಳ್ಳಿಯಲ್ಲಿ ಅಕ್ರಮ ಮದ್ಯ ಸರಬರಾಜುದಾರರ ಬಂಧನ
ಕಿರಾಣಿ ಅಂಗಡಿಗಳಿಗೆ ಅಕ್ರಮವಾಗಿ ಮದ್ಯವನ್ನು ಸರಬರಾಜು ಮಾಡುತ್ತಿದ್ದ ಇಬ್ಬರನ್ನು ಶೆಟ್ಟಿಹಳ್ಳಿ ಹೊಸೂರು ಗ್ರಾಮಸ್ಥರು ಬುಧವಾರ ಬೆಳಗ್ಗೆ ಮದ್ಯ ಮತ್ತು ವಾಹನ ಸಮೇತ ಹಿಡಿದು ಅಬಕಾರಿ ಇಲಾಖೆಗೆ ಒಪಿಸಿದ್ದಾರೆ.
Vijaya Karnataka 11 Jan 2019, 5:00 am
ಶಿವಮೊಗ್ಗ : ಕಿರಾಣಿ ಅಂಗಡಿಗಳಿಗೆ ಅಕ್ರಮವಾಗಿ ಮದ್ಯವನ್ನು ಸರಬರಾಜು ಮಾಡುತ್ತಿದ್ದ ಇಬ್ಬರನ್ನು ಶೆಟ್ಟಿಹಳ್ಳಿ ಹೊಸೂರು ಗ್ರಾಮಸ್ಥರು ಬುಧವಾರ ಬೆಳಗ್ಗೆ ಮದ್ಯ ಮತ್ತು ವಾಹನ ಸಮೇತ ಹಿಡಿದು ಅಬಕಾರಿ ಇಲಾಖೆಗೆ ಒಪಿಸಿದ್ದಾರೆ.
ಶಿವಮೊಗ್ಗ ತಾಲೂಕು ಬಿ.ಬೀರನಹಳ್ಳಿಯ ಬಿ.ಶಿವಣ್ಣ ಮತ್ತು ಚನ್ನರಾಯಪಟ್ಟಣ ತಾಲೂಕು ಡೊಡ್ಡ ಯರಗನಾಳ್ನ ಅಣ್ಣಪ್ಪ ಬಂಧಿತ ಆರೋಪಿಗಳು. ಇವರು ಮಾರುತಿ ವ್ಯಾನ್ನಲ್ಲಿ ಮದ್ಯವನ್ನು ತುಂಬಿಕೊಂಡು ಹಳ್ಳಿಗಳಲ್ಲಿರುವ ಕಿರಾಣಿ ಅಂಗಡಿಗಳಿಗೆ ಸರಬರಾಜು ಮಾಡುತ್ತಿದ್ದರು.
ಇದರ ಬಗ್ಗೆ ಶೆಟ್ಟಿಹಳ್ಳಿ ಗ್ರಾಮಸ್ಥರು ಹಲವು ಬಾರಿ ಎಚ್ಚರಿಸಿದರೂ ಅದೇ ಕೃತ್ಯವನ್ನು ಮುಂದುವರಿಸಿದ ಹಿನ್ನೆಲೆಯಲ್ಲಿ ಬುಧವಾರ ಬೆಳಗ್ಗೆ ವಾಹನ ಬರುವುದನ್ನೇ ಕಾಯ್ದು ಅವರಿಂದ ವಾಹನ ಸಮೇತ ಮದ್ಯವನ್ನು ವಶಪಡಿಸಿಕೊಂಡರು. ಅಬಕಾರಿ ಇಲಾಖೆ ಅಧಿಕಾರಿಗಳು ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.
ಶಿವಮೊಗ್ಗ ತಾಲೂಕು ಬಿ.ಬೀರನಹಳ್ಳಿಯ ಬಿ.ಶಿವಣ್ಣ ಮತ್ತು ಚನ್ನರಾಯಪಟ್ಟಣ ತಾಲೂಕು ಡೊಡ್ಡ ಯರಗನಾಳ್ನ ಅಣ್ಣಪ್ಪ ಬಂಧಿತ ಆರೋಪಿಗಳು. ಇವರು ಮಾರುತಿ ವ್ಯಾನ್ನಲ್ಲಿ ಮದ್ಯವನ್ನು ತುಂಬಿಕೊಂಡು ಹಳ್ಳಿಗಳಲ್ಲಿರುವ ಕಿರಾಣಿ ಅಂಗಡಿಗಳಿಗೆ ಸರಬರಾಜು ಮಾಡುತ್ತಿದ್ದರು.
ಇದರ ಬಗ್ಗೆ ಶೆಟ್ಟಿಹಳ್ಳಿ ಗ್ರಾಮಸ್ಥರು ಹಲವು ಬಾರಿ ಎಚ್ಚರಿಸಿದರೂ ಅದೇ ಕೃತ್ಯವನ್ನು ಮುಂದುವರಿಸಿದ ಹಿನ್ನೆಲೆಯಲ್ಲಿ ಬುಧವಾರ ಬೆಳಗ್ಗೆ ವಾಹನ ಬರುವುದನ್ನೇ ಕಾಯ್ದು ಅವರಿಂದ ವಾಹನ ಸಮೇತ ಮದ್ಯವನ್ನು ವಶಪಡಿಸಿಕೊಂಡರು. ಅಬಕಾರಿ ಇಲಾಖೆ ಅಧಿಕಾರಿಗಳು ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.