ಆ್ಯಪ್ನಗರ

ಹುಂಡಿಗೆ ಕೈಹಾಕಿದ ಕಿರಾತಕರು ಅರೆಸ್ಟ್‌

ನಗರದ ಬಿದರೆ ಗ್ರಾಮದಲ್ಲಿರುವ ಶ್ರೀ ಸಾಯಿಬಾಬಾ ಮಂದಿರದಲ್ಲಿಭದ್ರತಾ ಸಿಬ್ಬಂದಿ ಮೇಲೆ ಹಲ್ಲೆನಡೆಸಿ ಸಿನಿಮೀಯ ರೀತಿಯಲ್ಲಿಕಳ್ಳತನ ಮಾಡಿದ್ದ ಐವರು ಆರೋಪಿಗಳನ್ನು ಬಂಧಿಸಲಾಗಿದೆ.

Vijaya Karnataka 7 Dec 2019, 5:00 am
ಶಿವಮೊಗ್ಗ: ನಗರದ ಬಿದರೆ ಗ್ರಾಮದಲ್ಲಿರುವ ಶ್ರೀ ಸಾಯಿಬಾಬಾ ಮಂದಿರದಲ್ಲಿಭದ್ರತಾ ಸಿಬ್ಬಂದಿ ಮೇಲೆ ಹಲ್ಲೆನಡೆಸಿ ಸಿನಿಮೀಯ ರೀತಿಯಲ್ಲಿಕಳ್ಳತನ ಮಾಡಿದ್ದ ಐವರು ಆರೋಪಿಗಳನ್ನು ಬಂಧಿಸಲಾಗಿದೆ.
Vijaya Karnataka Web 6SMG6081216
ಕಳ್ಳತನಕ್ಕೆ ಬಳಸಿದ ಸಾಮಗ್ರಿ ಹಾಗೂ ಜಪ್ತಿಮಾಡಿಕೊಂಡ ನಗದು.


ಕಳ್ಳತನ ಪ್ರಕರಣದ ಕಿಂಗ್‌ಪಿನ್‌ ಬಂಟ್ವಾಳ ತಾಲೂಕಿನ ಪರಂಗಿಪೇಟೆ ಪುದು ಗ್ರಾಮದ ನಿವಾಸಿ ಮಹಮದ್‌ ಇಸ್ಮಾಯಿಲ್‌(49)ನನ್ನು ಸಕ್ರೆಬೈಲು ಬಳಿ ಬುಧವಾರ ವಶಕ್ಕೆ ಪಡೆಯಲಾಗಿದೆ ಎಂದು ನಗರದ ಎಸ್‌ಪಿ ಕಚೇರಿಯಲ್ಲಿಶುಕ್ರವಾರ ಸಂಜೆ ಕರೆದಿದ್ದ ಸುದ್ದಿಗೋಷ್ಠಿಯಲ್ಲಿಎಸ್‌ಪಿ ಕೆ.ಎಂ. ಶಾಂತರಾಜು ಹೇಳಿದರು.

ತಲೆಮರೆಸಿಕೊಂಡಿದ್ದ ಬಂಟ್ವಾಳದ ಪರಂಗಿಪೇಟೆಯ ಮೊಹಮದ್‌ ಗೌಸ್‌ ಅಲಿಯಾಸ್‌ ಮುನ್ನ ಚೇಯಬ್‌(34), ಉಡುಪಿಯ ಕುರುಕಲ್‌ ಗ್ರಾಮದ ಪ್ರೇಮನಾಥ್‌ ಅಲಿಯಾಸ್‌ ಪ್ರೇಮ್‌ದಾಸ್‌(18), ಮೂಡುಬಿದರೆಯ ಸುವರ್ಣ ನಗರದ ತೌಸೀಫ್‌ ಅಹಮದ್‌ (30) ಹಾಗೂ ಕಡೂರು ತಾಲೂಕಿನ ಬಿ.ಎರದಕೆರೆ ಗ್ರಾಮದ ತಿಮ್ಮಯ್ಯ ಅಲಿಯಾಸ್‌ ತಿಮ್ಮ ಎಂಬುವವರನ್ನು ಶುಕ್ರವಾರ ನರಸಿಂಹರಾಜಪುರ ರಸ್ತೆಯ ಸಂತೆಕಡೂರು ಬಳಿ ವಶಕ್ಕೆ ಪಡೆಯಲಾಗಿದೆ. ಇವರಲ್ಲಿತಿಮ್ಮನ ವಿರುದ್ಧ ಒಂದು ಕಳ್ಳತನ ಪ್ರಕರಣವಿದೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ತಿಳಿಸಿದರು.

ಬಂಧಿತರಿಂದ ಒಂದು ಕಾರು, ಒಂದು ಕಂಟ್ರಿ ಪಿಸ್ತೂಲ್‌, 9 ಜೀವಂತ ಗುಂಡು, 24,500 ರೂ. ನಗದು, ಕೃತ್ಯಕ್ಕೆ ಬಳಸಿದ ರೈನ್‌ ಕೋಟ್‌, ಜರ್ಕಿನ್‌, ಮಂಕಿ ಕ್ಯಾಪ್‌, ಕಬ್ಬಿಣದ ರಾಡು ಇನ್ನಿತರ ಸಾಮಗ್ರಿಗಳನ್ನು ಜಪ್ತಿ ಪಡಿಸಿಕೊಳ್ಳಲಾಗಿದೆ.

ನವೆಂಬರ್‌ 25ರಂದು ಶ್ರೀಸಾಯಿಬಾಬಾ ಮಂದಿರದಲ್ಲಿಕಾಣಿಕೆ ಹುಂಡಿಯಲ್ಲಿದ್ದ 50 ಸಾವಿರ ರೂ. ನಗದು ಕಳ್ಳತನ ಮಾಡಿದ್ದಲ್ಲದೇ ಭದ್ರತಾ ಸಿಬ್ಬಂದಿಗೆ ಹಗ್ಗದಿಂದ ಕಟ್ಟಿಹಾಕಿ ಹಲ್ಲೆನಡೆಸಿದ್ದರು. ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿಪ್ರಕರಣ ದಾಖಲಾಗಿತ್ತು.

ಸಿಬ್ಬಂದಿ ಕಾರ್ಯಕ್ಕೆ ಮೆಚ್ಚುಗೆ

ಡಿವೈಎಸ್‌ಪಿ ಉಮೇಶ್‌ ನಾಯ್‌್ಕ ಮಾರ್ಗದರ್ಶನದಲ್ಲಿಗ್ರಾಮಾಂತರ ಸಿಪಿಐ ಜೆ.ಲೋಕೇಶ್‌ ನೇತೃತ್ವದ ಪಿಎಸ್‌ಐ ಮಂಜು ಎಸ್‌. ಕುಪ್ಪೆಲೂರು ಸಿಬ್ಬಂದಿ ತಂಡವು ಪ್ರಕರಣ ಭೇದಿಸಿದೆ.

===

ರೌಡಿ ನಿಗ್ರಹ ದಳಕ್ಕೆ ಮರುಜೀವ

ಜಿಲ್ಲೆಯಲ್ಲಿನ ರೌಡಿಗಳ ಮೇಲೆ ನಿಗಾ ಇಡುವುದಕ್ಕೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿಪೊಲೀಸ್‌ ಇಲಾಖೆ ರೌಡಿ ನಿಗ್ರಹ ದಳ ರಚಿಸಿದೆ. ವಿನೋಬನಗರ ಪಿಎಸ್‌ಐ ಉಮೇಶ್‌, ಸಿಇಎನ್‌ ಠಾಣೆಯ ಇನ್‌ಸ್ಪೆಕ್ಟರ್‌ ಗುರುರಾಜ್‌ ನೇತೃತ್ವದಲ್ಲಿಆರು ಜನ ಅಧಿಕಾರಿಗಳ ತಂಡ ಶುಕ್ರವಾರದಿಂದಲೇ ಕಾರ್ಯನಿರ್ವಹಿಸಲಿದೆ. ಈ ಹಿಂದೆಯೂ ರೌಡಿಗಳ ಹೆಡೆಮುರಿ ಕಟ್ಟಲು ಇಂತಹ ದಳವನ್ನು ಜಿಲ್ಲೆಯಲ್ಲಿರಚಿಸಲಾಗಿತ್ತು. ಅದಕ್ಕೆ ಮರುಜೀವ ನೀಡಲಾಗಿದೆ.
========

ತೀರ್ಥಹಳ್ಳಿಯಲ್ಲಿಮಕ್ಕಳ ಕಳ್ಳರ ಬಗ್ಗೆ ಗಾಳಿ ಸುದ್ದಿ ಹಬ್ಬಿಸಲಾಗುತ್ತಿದೆ. ಇದುವರೆಗೆ ಅಂತಹ ಪ್ರಕರಣಗಳು ಹಾಗೂ ಘಟನೆ ಕಂಡುಬಂದಿಲ್ಲ. ಒಂದುವೇಳೆ, ಅನುಮಾನಾಸ್ಪದವಾಗಿ ಅಂತಹ ವ್ಯಕ್ತಿಗಳನ್ನು ನೋಡಿದ್ದಲ್ಲಿತಕ್ಷಣ ಪೊಲೀಸ್‌ ಠಾಣೆಗೆ ಮಾಹಿತಿ ನೀಡಿ. ಗಾಳಿ ಸುದ್ದಿಗೆ ಕಿವಿಗೊಟ್ಟು ಭಯ ಪಡುವ ಅಗತ್ಯವಿಲ್ಲ.

- ಕೆ.ಎಂ.ಶಾಂತರಾಜು,
ಎಸ್‌ಪಿ, ಶಿವಮೊಗ್ಗ
===

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ