ಆ್ಯಪ್ನಗರ

ಕಳಪೆ ಕಾಮಗಾರಿ ಪ್ರಶ್ನಿಸಿ: ಹಾಲಪ್ಪ

189 ಕಿ.ಮೀ. ವ್ಯಾಪ್ತಿಯಲ್ಲಿ ಒಳಚರಂಡಿ ಪೈಪ್‌ಗಳಿಗೆ 12700 ಮನೆಗಳಿಂದ ಸಂಪರ್ಕ ಕಲ್ಪಿಸುವ ಯೋಜನೆಯನ್ನು ಮುಂದಿನ 15ತಿಂಗಳೊಳಗೆ æ ಮುಗಿಸುವಂತೆ ಶಾಸಕ ಎಚ್‌.ಹಾಲಪ್ಪ ತಿಳಿಸಿದರು.

Vijaya Karnataka 10 Dec 2018, 5:00 am
ಸಾಗರ : 189 ಕಿ.ಮೀ. ವ್ಯಾಪ್ತಿಯಲ್ಲಿ ಒಳಚರಂಡಿ ಪೈಪ್‌ಗಳಿಗೆ 12700 ಮನೆಗಳಿಂದ ಸಂಪರ್ಕ ಕಲ್ಪಿಸುವ ಯೋಜನೆಯನ್ನು ಮುಂದಿನ 15ತಿಂಗಳೊಳಗೆ æ ಮುಗಿಸುವಂತೆ ಶಾಸಕ ಎಚ್‌.ಹಾಲಪ್ಪ ತಿಳಿಸಿದರು.
Vijaya Karnataka Web asked about poor work halappa
ಕಳಪೆ ಕಾಮಗಾರಿ ಪ್ರಶ್ನಿಸಿ: ಹಾಲಪ್ಪ


ಇಲ್ಲಿನ ಅಣಲೆಕೊಪ್ಪ ಹಾಗೂ ಶ್ರೀಮಹಾಗಣಪತಿ ದೇಗುಲದ ಬಳಿ ಭಾನುವಾರ ಕರ್ನಾಟಕ ಜಲ ಮಂಡಳಿ ಮತ್ತು ನಗರಸಭೆ ವತಿಯಿಂದ ಪಟ್ಟಣದಲ್ಲಿ 26 ಕೋಟಿ ರೂ.ವೆಚ್ಚದಲ್ಲಿ ಒಳಚರಂಡಿ ಗೃಹ ಸಂಪರ್ಕ ಕಲ್ಪಿಸುವ ಕಾಮಗಾರಿಗೆ ಗುದ್ದಲಿಪೂಜೆ ಹಾಗೂ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ನಗರವ್ಯಾಪ್ತಿಯಲ್ಲಿ ಒಂದಷ್ಟು ಶಾಶ್ವತ ಕಾಮಗಾರಿಗೆ ಚಿಂತನೆ ನಡೆಸಲಾಗಿದೆ. ಪ್ರಮುಖವಾಗಿ ಗಣಪತಿ ಕೆರೆ ಅಭಿವೃದ್ಧಿಗೆ 12 ಕೋಟಿ ರೂ. ಯೋಜನೆಯ ನೀಲನಕ್ಷೆ ತಯಾರಿಸಲಾಗಿದೆ. ಅದಕ್ಕೆ ಕೇಂದ್ರ ಸರಕಾರ 8 ಕೋಟಿ ರೂ. ಬಿಡುಗಡೆ ಮಾಡಿದೆ. ಉಳಿದ ನಾಲ್ಕು ಕೋಟಿ ರೂ. ರಾಜ್ಯ ಸರಕಾರ, ಜಿಲ್ಲಾ ಪಂಚಾಯಿತಿ ಅಥವಾ ನಗರಸಭೆಯಿಂದ ಬಿಡುಗಡೆ ಮಾಡಿಸಿ ಕೆಲಸ ಪ್ರಾರಂಭಿಸುವ ಚಿಂತನೆ ನಡೆಸಲಾಗಿದೆ ಎಂದರು.

ಗಣಪತಿ ಕೆರೆ ಪಕ್ಕದಲ್ಲಿರುವ ಕೊಪ್ಪಲಗದ್ದೆಯ 30 ಎಕರೆ ಜಾಗದಲ್ಲಿ ಕೆಆರ್‌ಎಸ್‌ ಮಾದರಿಯಲ್ಲಿ ಪಾರ್ಕ್‌ ನಿರ್ಮಾಣ ಯೋಜನೆ ಹೊಂದಲಾಗಿದೆ. ಈ ಜಾಗವನ್ನು ರಿಯಲ್‌ ಎಸ್ಟೇಟ್‌ನವರು ಸ್ಥಳೀಯರಿಗೆ ಸಣ್ಣಪುಟ್ಟ ಆಮೀಷವೊಡ್ಡಿ ನಿವೇಶನ ಮಾಡಿ ಮಾರುವ ಪ್ರಯತ್ನ ಮಾಡುತ್ತಿದ್ದು, ಇದಕ್ಕೆ ಜಿಲ್ಲಾಧಿಕಾರಿಗಳು ತಡೆಯೊಡ್ಡಿದ್ದಾರೆ. ಇದು ನಿವೇಶನಕ್ಕೆ ಸೂಕ್ತ ಜಾಗವಲ್ಲ. ಇದನ್ನು ನಗರದ ಅಭಿವೃದ್ಧಿಗೆ ಉಳಿಸಿಕೊಳ್ಳುವ ನಿಟ್ಟಿನಲ್ಲಿ ನಗರಸಭೆ ಆಡಳಿತ ಗಮನ ಹರಿಸಬೇಕು. ಜಮೀನು ಮಾಲೀಕರಿಗೆ ಪರಿಹಾರ ನೀಡಿ ಅದನ್ನು ನಗರಸಭೆ ಖರೀದಿಸಿ, ಉದ್ಯಾನವನ ನಿರ್ಮಾಣ ಮಾಡಿ, ನಾಲ್ಕು ಭಾಗದಿಂದಲೂ ರಸ್ತೆ ಮಾಡುವ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.

ಅಧಿಕಾರಿಗಳು ಗುಣಮಟ್ಟದ ಕಾಮಗಾರಿ ಕೈಗೊಳ್ಳಬೇಕು. ಒಂದೊಮ್ಮೆ ಕಳಪೆ ಕಾಮಗಾರಿ ಮಾಡಿದರೆ ಅಂತಹ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದು ಅನಿವಾರ್ಯ. ಜನರು ಸಹ ಕಳಪೆ ಕಾಮಗಾರಿ ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕೆಂದರು.

ನಗರಸಭೆ ಉಪಾಧ್ಯಕ್ಷೆ ಗ್ರೇಸಿ ಡಯಾಸ್‌, ಸದಸ್ಯರಾದ ಆರ್‌.ಶ್ರೀನಿವಾಸ್‌, ಸಂತೋಷ್‌ ಆರ್‌.ಶೇಟ್‌, ನಾಗರತ್ನ, ಅರವಿಂದ ರಾಯ್ಕರ್‌ ಇದ್ದರು. ರಚನ ಪ್ರಾರ್ಥಿಸಿ, ಪ್ರಭಾಕರ್‌ ಸ್ವಾಗತಿಸಿದರು. ಒಳಚರಂಡಿ ಮಂಡಳಿ ಸಹಾಯಕ ಕಾರ್ಯಪಾಲಕ ಅಭಿಯಂತರ ಚಂದ್ರಶೇಖರ್‌ ಪ್ರಾಸ್ತಾವಿಕ ಮಾತನಾಡಿದರು. ರಮೇಶ್‌ ನಿರೂಪಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ