ಆ್ಯಪ್ನಗರ

ಸೆಂಟ್ರಲ್‌ ಜೈಲಲ್ಲಿ ವೈದ್ಯನ ಮೇಲೆ ಹಲ್ಲೆ

ಚಿಕಿತ್ಸೆ ನೀಡಲು ತೊಡಗಿದ್ದ ವೈದ್ಯರ ಮೇಲೆ ಕೈದಿಗಳು ತೀವ್ರಥರ ಹಲ್ಲೆ ನಡೆಸಿರುವ ಘಟನೆ ಇಲ್ಲಿನ ಕೇಂದ್ರ ಕಾರಾಗೃಹದಲ್ಲಿ ನಡೆದಿದೆ.

Vijaya Karnataka 20 Oct 2018, 5:00 am
ಶಿವಮೊಗ್ಗ : ಚಿಕಿತ್ಸೆ ನೀಡಲು ತೊಡಗಿದ್ದ ವೈದ್ಯರ ಮೇಲೆ ಕೈದಿಗಳು ತೀವ್ರಥರ ಹಲ್ಲೆ ನಡೆಸಿರುವ ಘಟನೆ ಇಲ್ಲಿನ ಕೇಂದ್ರ ಕಾರಾಗೃಹದಲ್ಲಿ ನಡೆದಿದೆ.
Vijaya Karnataka Web assault on doctor at central jail
ಸೆಂಟ್ರಲ್‌ ಜೈಲಲ್ಲಿ ವೈದ್ಯನ ಮೇಲೆ ಹಲ್ಲೆ


ಕಾರಾಗೃಹದ ವೈದ್ಯಾಧಿಕಾರಿ ಡಾ.ರಘುಪ್ರಸಾದ್‌ ಎಂಬುವವರ ಮೇಲೆ ಅರ್ಬಾಜ್‌ ಇನ್ನಿತರರು ಹಲ್ಲೆ ನಡೆಸಿದ್ದು, ಇವರನ್ನು ಬೆಳಗಾವಿ ಕೇಂದ್ರ ಕಾರಾಗೃಹಕ್ಕೆ ವರ್ಗಾಯಿಸಲಾಗಿದೆ.

ಜೈಲಿನೊಳಗೆ ಪರಸ್ಪರ ಜಗಳವಾಡಿಕೊಂಡು ಗಾಯಗೊಂಡಿದ್ದ ಕೈದಿಗಳಿಗೆ ಡಾ.ರಘುಪ್ರಸಾದ್‌ ಅವರು ಚಿಕಿತ್ಸೆ ನೀಡಲು ಬಂದಿದ್ದರು. ಆಗ ಅರ್ಬಾಸ್‌ ತನಗೆ ಮೆಗ್ಗಾನ್‌ ಆಸ್ಪತ್ರೆಗೆ ದಾಖಲಿಸಲು ಶಿಫಾರಸು ಮಾಡುವಂತೆ ಕೋರಿದ್ದಾನೆ. ಆದರೆ, ಚಿಕ್ಕ ಗಾಯಗಳಾಗಿರುವುರಿಂದ ಇಲ್ಲಿಯೇ ಚಿಕಿತ್ಸೆ ನೀಡಲು ಸಾಧ್ಯವಿದೆ ಎಂದು ಕೈದಿಯ ಬೇಡಿಕೆಯನ್ನು ನಿರಾಕರಿಸಿದ್ದಾರೆ. ಈ ವೇಳೆ, ರೊಚ್ಚಿಗೆದ್ದ ಅರ್ಬಾಜ್‌ ಇನ್ನಿತರರು ವೈದ್ಯಾಧಿಕಾರಿ ಮೇಲೆ ಹಲ್ಲೆ ಮಾಡಿದ್ದಾರೆ. ತುಂಗಾ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

===========

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ