ಆ್ಯಪ್ನಗರ

ಉದ್ಯೋಗ ಖಾತ್ರಿ ಗ್ರಾಮೀಣರಿಗೆ ವರ

ಕುಟುಂಬ ಆರ್ಥಿಕವಾಗಿ ಸದೃಢವಾಗಲು ಸರಕಾರ ಉದ್ಯೋಗ ಖಾತ್ರಿ ಯೋಜನೆ ಜಾರಿಗೊಳಿಸಿದೆ. ಪ್ರತಿಯೊಬ್ಬರೂ ಈ ಯೋಜನೆ ಸದುಪಯೋಗಪಡಿಸಿಕೊಳ್ಳಬೇಕೆಂದು ತ್ಯಾಗರ್ತಿ ಗ್ರಾ.ಪಂ.ಸದಸ್ಯ ಕೆ.ಬಿ.ಗಣಪತಿ ಹೇಳಿದರು.

Vijaya Karnataka 5 Mar 2019, 5:00 am
ತ್ಯಾಗರ್ತಿ: ಕುಟುಂಬ ಆರ್ಥಿಕವಾಗಿ ಸದೃಢವಾಗಲು ಸರಕಾರ ಉದ್ಯೋಗ ಖಾತ್ರಿ ಯೋಜನೆ ಜಾರಿಗೊಳಿಸಿದೆ. ಪ್ರತಿಯೊಬ್ಬರೂ ಈ ಯೋಜನೆ ಸದುಪಯೋಗಪಡಿಸಿಕೊಳ್ಳಬೇಕೆಂದು ತ್ಯಾಗರ್ತಿ ಗ್ರಾ.ಪಂ.ಸದಸ್ಯ ಕೆ.ಬಿ.ಗಣಪತಿ ಹೇಳಿದರು.
Vijaya Karnataka Web SMR-4tgt1


ಸಾಗರ ತಾಲೂಕಿನ ತ್ಯಾಗರ್ತಿಯಲ್ಲಿ ಭಾನುವಾರ ಹೊಸಗದ್ದೆ ಕೆರೆ ಹೂಳೆತ್ತುವ ಕಾರ‍್ಯದ ಸಮಾರೋಪದಲ್ಲಿ ಅವರು ಮಾತನಾಡಿದರು.

ಈ ಕೆರೆ ಕಾಮಗಾರಿಯನ್ನು ಸಣ್ಣ ನೀರಾವರಿ ಯೋಜನೆ ಅಥವಾ ಯಾವುದೇ ಸರಕಾರದ ಯೋಜನೆಗಳಲ್ಲಿ ಕಾರ‍್ಯನಿರ್ವಹಿಸಿದ್ದರೆ ಹಣ ಪೂರ್ತಿ ಗುತ್ತಿಗೆದಾರರ ಅಥವಾ ಯಂತ್ರೋಪಕರಣ ಮಾಲೀಕರ ಪಾಲಾಗುತ್ತಿತ್ತು. ಆದರೆ ಇಂದು ಉದ್ಯೋಗಖಾತ್ರಿ ಯೋಜನೆಯಲ್ಲಿ ಕೆರೆ ಕಾಮಗಾರಿ ಪೂರ್ಣಗೊಂಡಿದ್ದು ಕೂಲಿ ಮುಖಾಂತರ ಹಣ ನಮ್ಮ ಗ್ರಾಮದ ರೈತರಿಗೆ ಹಂಚಿಕೆಯಾಗಿದೆ. ಇಂತಹ ಕಾರ‍್ಯಕ್ರಮಗಳಿಂದ ರೈತರು ಕೂಲಿಗಾಗಿ ಹಂಬಲಿಸುವುದು ತಪ್ಪುವುದಲ್ಲದೇ ಆರ್ಥಿಕವಾಗಿಯೂ ಸದೃಢರಾಗುತ್ತಾರೆ ಎಂದರು.

ಉದ್ಯೋಗ ಖಾತ್ರಿ ಕಾರ್ಮಿಕರು ತಮ್ಮ ಒಂದು ದಿನದ ಸಂಬಳದ ಹಣವನ್ನು ತ್ಯಾಗರ್ತಿಯ ಶ್ರೀಮಾರಿಕಾಂಬಾ ದೇವಸ್ಥಾನÜ ಕಟ್ಟಡ ನಿರ್ಮಾಣಕ್ಕೆ ನೀಡಿದರು.

ಕಾರ್ಮಿಕರ ಸಹಕಾರ ಮನೋಭಾವ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ ತ್ಯಾಗರ್ತಿ ಪಿಡಿಒ ಮಂಜಾನಾಯಕ್‌, ಕಾರ್ಮಿಕರು ಹೆಚ್ಚಿನ ಉತ್ಸಾಹ ತೋರಿದರೆ 60-40ರ ಅನುಪಾತದಲ್ಲಿ ಗ್ರಾಮದ ಶಾಲೆ ಕಾಂಪೌಂಡ್‌ ನಿರ್ಮಾಣ, ಜಾನುವಾರುಗಳ ಕುಡಿಯುವ ನೀರಿನ ತೊಟ್ಟಿ, ಕೈತೋಟ ಇನ್ನು ಹಲವು ಕಾರ‍್ಯಕ್ರಮ ಹಮ್ಮಿಕೊಳ್ಳಲು ಸಹಕಾರಿಯಾಗುತ್ತದೆ. ಇದರಿಂದ ಕಾರ್ಮಿಕರು ಆರ್ಥಿಕವಾಗಿ ಅಭಿವೃದ್ಧಿ ಹೊಂದುವುದರ ಜತೆಗೆ ಗ್ರಾಮದ ಏಳಿಗೆ ಕೂಡ ಆಗುತ್ತದೆ ಎಂದರು.

ಗ್ರಾ.ಪಂ.ಅಧ್ಯಕ್ಷ ರೇವಪ್ಪ ಅಧ್ಯಕ್ಷ ತೆ ವಹಿಸಿದ್ದರು. ಸದಸ್ಯರಾದ ಗಿರೀಶ್‌, ಸಿಬ್ಬಂದಿ ಎಲ್ಲಪ್ಪ, ನಾಗರಾಜ್‌, ಬೋಜರಾಜ್‌, ಗುತ್ಯಪ್ಪ, ತಾಂತ್ರಿಕ ಅಧಿಕಾರಿ ಮಹೇಶ್‌ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ