ಆ್ಯಪ್ನಗರ

ಪ್ರವಾಹದ ನೀರು ಹೊರ ಹಾಕಿದ್ದಕ್ಕೆ ಜಾತಿನಿಂದನೆ; ಸಿಎಂ ತವರೂರಲ್ಲಿ 23 ಜನರ ವಿರುದ್ಧ ಪ್ರಕರಣ ದಾಖಲು

ವ್ಯಾಪಕ ಮಳೆಯಾಗಿದ್ದರಿಂದ ಮಾಯತಮ್ಮನ ಮುಚಡಿ ಗ್ರಾಮದ ಪರಿಶಿಷ್ಟ ಜಾತಿ ಸಮುದಾಯಗಳ ಕಾಲೊನಿ ಜಲಮಯವಾಗಿತ್ತು. ಮನೆಗಳಿಗೆ ನೀರು ನುಗ್ಗಿ ಜನ ಪರದಾಡುತಿದ್ದರು. ಗ್ರಾಮ ಪಂಚಾಯಿತಿ ಪಿಡಿಒ ಮತ್ತು ಸದಸ್ಯರ ಅನುಮತಿ ಪಡೆದು ಜೆಸಿಬಿ ಸಹಾಯದಿಂದ ನೀರನ್ನು ಹೊರ ಹಾಕಲಾಗಿದೆ. ಇದೇ ಕಾರಣಕ್ಕೆ ಜಾತಿ ನಿಂದನೆ ಮಾಡಿ ಜೀವ ಬೆದರಿಕೆ ಹಾಕಿದ್ದಾರೆಂದು ವೀರೇಶ್‌ ದೂರು ನೀಡಿದ್ದಾರೆ.

Vijaya Karnataka 26 Jul 2021, 8:32 am
ಶಿರಾಳಕೊಪ್ಪ: ಮುಖ್ಯಮಂತ್ರಿ ಬಿಎಸ್‌ವೈ ತವರು ಕ್ಷೇತ್ರ ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪ ಪಟ್ಟಣದ ಪೊಲೀಸ್‌ ಠಾಣೆಯಲ್ಲಿ 23 ಜನರ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲಾಗಿದೆ.
Vijaya Karnataka Web cases registered


ಶಿರಾಳಕೊಪ್ಪದ ಮಾಯತ್ತಮ್ಮನ ಮುಚಡಿ ಗ್ರಾಮದಲ್ಲಿ ಪರಿಶಿಷ್ಟ ಜಾತಿಯ ಕುಟುಂಬದ ಮೇಲೆ ಮುಂದುವರಿದ ಜನಾಂಗದ ಕೆಲವರು ಜಾತಿ ನಿಂದನೆ ಮಾಡಿ ಜೀವ ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬಸವರಾಜಪ್ಪ, ಮಲ್ಲೇಶಪ್ಪ ಹೊಟ್ಟೆಗೌಡ್ರು, ಮಾಲತೇಶ್‌ ಮುತ್ತಳಿ ಸೇರಿದಂತೆ 23 ಜನರ ವಿರುದ್ಧ ಶನಿವಾರ ದೂರು ನೀಡಲಾಗಿದೆ.
ಬಿಹಾರ: ಅಕ್ರಮ ಸಂಬಂಧ ಇರಿಸಿಕೊಂಡಿದ್ದ 17 ವರ್ಷದ ಬಾಲಕನ ಮರ್ಮಾಂಗ ಕತ್ತರಿಸಿ ಕೊಲೆ
ಗಲಾಟೆಗೆ ಕಾರಣ:
ಶಿಕಾರಿಪುರದಲ್ಲಿ ವ್ಯಾಪಕ ಮಳೆಯಾಗಿದ್ದರಿಂದ ಮಾಯತಮ್ಮನ ಮುಚಡಿ ಗ್ರಾಮದ ಪರಿಶಿಷ್ಟ ಜಾತಿ ಸಮುದಾಯಗಳ ಕಾಲೊನಿ ಜಲಮಯವಾಗಿತ್ತು. ಮನೆಗಳಿಗೆ ನೀರು ನುಗ್ಗಿ ಜನ ಪರದಾಡುತಿದ್ದರು. ಗ್ರಾಮ ಪಂಚಾಯಿತಿ ಪಿಡಿಒ ಮತ್ತು ಸದಸ್ಯರ ಅನುಮತಿ ಪಡೆದು ಜೆಸಿಬಿ ಸಹಾಯದಿಂದ ನೀರನ್ನು ಹೊರ ಹಾಕಲಾಗಿದೆ. ಇದೇ ಕಾರಣಕ್ಕೆ ಜಾತಿ ನಿಂದನೆ ಮಾಡಿ ಜೀವ ಬೆದರಿಕೆ ಹಾಕಿದ್ದಾರೆಂದು ವೀರೇಶ್‌ ದೂರು ನೀಡಿದ್ದಾರೆ. ದೂರಿನನ್ವಯ ಠಾಣೆಯಲ್ಲಿ ಐಪಿಸಿ ಕಲಂ 143, 147, 504, 506 ಸಹಿತ 149 ಹಾಗೂ ಎಸ್‌ಸಿ, ಎಸ್‌ಟಿ ಕಾಯಿದೆ ಅಡಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ