ಆ್ಯಪ್ನಗರ

ಯುವಕರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ

ವೈಯಕ್ತಿಕ ಕಾರಣಕ್ಕಾಗಿ ಭದ್ರಾವತಿಯ ಭದ್ರಾ ಕಾಲೊನಿಯಲ್ಲಿಇಬ್ಬರು ಯುವಕರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆಮಾಡಿರುವ ಘಟನೆ ಸೋಮವಾರ ಸಂಜೆ ನಡೆದಿದೆ.

Vijaya Karnataka 11 Sep 2019, 5:00 am
ಶಿವಮೊಗ್ಗ: ವೈಯಕ್ತಿಕ ಕಾರಣಕ್ಕಾಗಿ ಭದ್ರಾವತಿಯ ಭದ್ರಾ ಕಾಲೊನಿಯಲ್ಲಿಇಬ್ಬರು ಯುವಕರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆಮಾಡಿರುವ ಘಟನೆ ಸೋಮವಾರ ಸಂಜೆ ನಡೆದಿದೆ.
Vijaya Karnataka Web attack on youth
ಯುವಕರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ


ವಿದ್ಯಾರಾಜ್‌, ಮಣಿಕಂಠ ಎಂಬುವವರ ಮೇಲೆ ಹಲ್ಲೆಮಾಡಲಾಗಿದೆ. ಕುತ್ತಿಗೆ ಭಾಗದಲ್ಲಿಗಂಭೀರ ಗಾಯಗಳಾಗಿದ್ದು, ಕೂಡಲೇ ಅವರನ್ನು ಭದ್ರಾವತಿ ಸರಕಾರಿ ಆಸ್ಪತ್ರೆಗೆ ದಾಖಲಿಸಿ, ಹೆಚ್ಚುವರಿ ಚಿಕಿತ್ಸೆಗೋಸ್ಕರ ಮೆಗ್ಗಾನ್‌ ಆಸ್ಪತ್ರೆಗೆ ಕರೆ ತರಲಾಗಿತ್ತು. ನಂತರ ಅವರನ್ನು ಮಣಿಪಾಲ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಹೊಸಮನೆ ಪೊಲೀಸ್‌ ಠಾಣೆಯಲ್ಲಿಪ್ರಕರಣ ದಾಖಲಾಗಿದೆ.

===
ನಿವೃತ್ತ ನೌಕರ ಖಾತೆಯಿಂದ ಹಣ ಗುಳುಂ
ಶಿವಮೊಗ್ಗ: ಬ್ಯಾಂಕ್‌ ಮ್ಯಾನೇಜರ್‌ ಸೋಗಿನಲ್ಲಿಕರೆ ಮಾಡಿದ್ದ ವ್ಯಕ್ತಿಯೊಬ್ಬರು ನಿವೃತ್ತ ನೌಕರನ ಖಾತೆಯಿಂದ 69,500 ರೂ. ಲಪಟಾಯಿಸಿರುವ ಘಟನೆ ಶನಿವಾರ ನಡೆದಿದೆ.

ಅಶ್ವಥ ನಗರ ನಿವಾಸಿ ಸದಾಶಿವಪ್ಪ ಎಂಬುವವರೇ ಹಣ ಕಳೆದುಕೊಂಡವರು. ಕನ್ನಡದಲ್ಲಿಮಾತನಾಡಿದ ವ್ಯಕ್ತಿಯು ಎಟಿಎಂ ಬ್ಲಾಕ್‌ ಆಗುವುದಾಗಿ ಹೇಳಿ ಕರೆ ಮಾಡಿದ್ದಾನೆ. ಅದನ್ನು ನಂಬಿ ಇವರು ಕೇಳಿದ್ದ ಒಟಿಪಿ ಮತ್ತು ಎಟಿಎಂ ಕಾರ್ಡ್‌ ಸಂಖ್ಯೆ ನೀಡಿದ್ದಾನೆ. ನಂತರ ಆನ್‌ಲೈನ್‌ ಮೂಲಕ ಹಣ ಡ್ರಾ ಆಗಿರುವುದಾಗಿ ದೂರಿನಲ್ಲಿಸದಾಶಿವಪ್ಪ ತಿಳಿಸಿದ್ದಾರೆ. ಶಿವಮೊಗ್ಗ ಸಿಇಎನ್‌ ಪೊಲೀಸ್‌ ಠಾಣೆಯಲ್ಲಿಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ