ಆ್ಯಪ್ನಗರ

ವಿದ್ರೋಹಿಗಳಿಂದ ಮೀಸಲಾತಿ ಮುಗಿಸುವ ಯತ್ನ

ಮೀಸಲಾತಿ ವಿದ್ರೋಹ ಶಕ್ತಿಗಳಿಂದ ಮೀಸಲಾತಿಯನ್ನು ತಣ್ಣಗೆ ಮುಗಿಸುವ ಯತ್ನ ನಿರಂತರವಾಗಿ ನಡೆಯುತ್ತಿದೆ ಎಂದು ಸಾಗರ ಇಂದಿರಾಗಾಂಧಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಪ್ರೊ.ಬಿ.ಎಲ್‌.ರಾಜು ಹೇಳಿದರು.

Vijaya Karnataka 24 Sep 2019, 5:00 am
ಶಿವಮೊಗ್ಗ: ಮೀಸಲಾತಿ ವಿದ್ರೋಹ ಶಕ್ತಿಗಳಿಂದ ಮೀಸಲಾತಿಯನ್ನು ತಣ್ಣಗೆ ಮುಗಿಸುವ ಯತ್ನ ನಿರಂತರವಾಗಿ ನಡೆಯುತ್ತಿದೆ ಎಂದು ಸಾಗರ ಇಂದಿರಾಗಾಂಧಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಪ್ರೊ.ಬಿ.ಎಲ್‌.ರಾಜು ಹೇಳಿದರು.
Vijaya Karnataka Web attempt to finish a reservation from the traitor
ವಿದ್ರೋಹಿಗಳಿಂದ ಮೀಸಲಾತಿ ಮುಗಿಸುವ ಯತ್ನ


ನಗರದ ಪ್ರೆಸ್‌ಟ್ರಸ್ಟ್‌ ಸಭಾಂಗಣದಲ್ಲಿದಲಿತ ನೌಕರರ ಒಕ್ಕೂಟ ಹಾಗೂ ದಲಿತ ಸಂಘರ್ಷ ಸಮಿತಿ ಸಹಯೋಗದಲ್ಲಿಶನಿವಾರ ಏರ್ಪಡಿಸಿದ್ದ ಮೀಸಲಾತಿಗೆ ನೂರು ವರ್ಷ: ಒಂದು ಅವಲೋಕನ ಸಂವಾದದಲ್ಲಿಅವರು ಮಾತನಾಡಿದರು.

ಈ ದೇಶದ ಆರೋಗ್ಯ ಕಾಪಾಡಿದವರು ದಲಿತರು. ಈ ದೇಶಕ್ಕೆ ಬಹುದೊಡ್ಡ ಕೊಡುಗೆ ನೀಡಿದವರು ಹಿಂದುಳಿದವರು. ಆದರೆ, ಈ ದೇಶದ ನಿರ್ಮಾಣದ ವಿಚಾರ ಬಂದಾಗ ಈ ಎರಡು ವರ್ಗಗಳನ್ನೂ ಕಡೆಗಣಿಸಲಾಗುತ್ತಿದೆ. ದೊಡ್ಡ ಸಮುದಾಯಕ್ಕೆ ಮೀಸಲಾತಿ ಸರಿಯಾಗಿ ಸಿಗುತ್ತಿಲ್ಲ. ಮೀಸಲಾತಿಯ ವಿರುದ್ಧ ವಿದ್ರೋಹ ಬಗೆಯುವ ಶಕ್ತಿಗಳಿಂದು ವ್ಯವಸ್ಥಿತವಾಗಿ ಕೆಲಸ ಮಾಡುತ್ತಿವೆ ಎಂದರು.

ಸಂವಿಧಾನದಲ್ಲಿಮೀಸಲಾತಿಯ ಸ್ಪಷ್ಟ ಚಿತ್ರಣವಿದೆ. ಈ ಸಮಾಜದ ಗಾಲಿಗಳು ಸರಿಯಾಗಿ ಉರುಳಬೇಕಾದರೆ, ಎಲ್ಲಜಾತಿ, ಜನಾಂಗ, ಧರ್ಮದವರು ಸಮಾನವಾಗಿ ನಡೆಯಬೇಕೆಂಬ ಕಲ್ಪನೆಯಿಂದಾಗಿ ಅಂಬೇಡ್ಕರ್‌ ಮೀಸಲಾತಿ ಜಾರಿಗೊಳಿಸಿದರು. ಆದರಿಂದು ಮೀಸಲಾತಿಯನ್ನು ಕೇವಲ ಬಡತನ ನಿವಾರಣಾ ಕಾರ್ಯಕ್ರಮ ಎಂದು ಬಿಂಬಿಸಲಾಗುತ್ತಿದೆ. ಇದರಲ್ಲಿದಲಿತ, ಹಿಂದುಳಿದ ಯುವಕರು ಭಾಗಿಯಾಗುತ್ತಿರುವುದು ಆತಂಕಕಾರಿ ಸಂಗತಿ ಎಂದರು.

ಮೀಸಲಾತಿ ಎಂಬುದನ್ನು ಸಾಮಾಜಿಕ ಘನತೆ ಮರುಸ್ಥಾಪಿಸುವುದಕ್ಕೆ, ಮನುಷ್ಯರನ್ನು ಮನುಷ್ಯರಾಗಿ ನೋಡುವುದಕ್ಕೆ, ದೇಶದ ಅಭಿವೃದ್ಧಿಯಲ್ಲಿಎಲ್ಲರನ್ನೂ ಒಳಗೊಳ್ಳುವುದಕ್ಕಾಗಿ ನೀಡಲಾಗಿದೆ ಎಂಬುದನ್ನು ಎಲ್ಲರೂ ಅರಿಯಬೇಕಿದೆ ಎಂದರು.

ಡಿಎಸ್‌ಎಸ್‌ ರಾಜ್ಯ ಸಂಚಾಲಕ ಎಂ.ಗುರುಮೂರ್ತಿ ಮಾತನಾಡಿ, ಇಂದು ಅನೇಕರು ಮೀಸಲಾತಿ ಬಗ್ಗೆ ಅಪಸ್ವರ ಎತ್ತುತ್ತಿದ್ದಾರೆ. ಆದರೆ, ಇಂದಿಗೂ ದಲಿತರ ಮೇಲೆ ಅತ್ಯಾಚಾರ, ಅನ್ಯಾಯ, ಶೋಷಣೆ, ಜೀವಂತ ಸುಡುವ ಕಾರ್ಯ ಮುಂದುವರಿದಿದೆ. ಹಾಗಾಗಿ ಈ ಶೋಷಣೆ ನಿಲ್ಲುವವರೆಗೆ, ಅಂತರಜಾತಿ ವಿವಾಹ, ಸಹಪಂಕ್ತಿ ಭೋಜನ, ದೇವಸ್ಥಾನ, ಮನೆಗಳಿಗೆ ಮುಕ್ತಪ್ರವೇಶ ಸಿಗುವವರೆಗೆ ದಲಿತರಿಗೆ ಮೀಸಲಾತಿ ಸಿಗಬೇಕೆಂದರು.

ಜಿಲ್ಲಾದಲಿತ ನೌಕರರ ಒಕ್ಕೂಟದ ಅಧ್ಯಕ್ಷ ಶಿವಬಸಪ್ಪ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಮಂಜುನಾಥ್‌, ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾಸಂಚಾಲಕ ಅರ್ಜುನ್‌, ಏಳುಕೋಟಿ ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ