ಆ್ಯಪ್ನಗರ

ತಂಬಾಕು ಸೇವನೆಯಿಂದ ದೂರವಿರಿ

ತಂಬಾಕು ಸೇವನೆ ಆರೋಗ್ಯಕ್ಕೆ ಹಾನಿಕರ ಎಂದು ತಿಳಿದಿದ್ದರೂ ಹಲವು ಮಂದಿ ತಂಬಾಕಿಗೆ ದಾಸರಾಗಿರುವುದು ಆತಂಕಕಾರಿ ಬೆಳವಣಿಗೆ ಎಂದು ಜಿಲ್ಲಾಧಿಕಾರಿ ಕೆ.ಎ.ದಯಾನಂದ್‌ ಕಳವಳ ವ್ಯಕ್ತಪಡಿಸಿದರು.

Vijaya Karnataka 12 Dec 2018, 5:00 am
ಶಿಮೊಮೊಗ್ಗ: ತಂಬಾಕು ಸೇವನೆ ಆರೋಗ್ಯಕ್ಕೆ ಹಾನಿಕರ ಎಂದು ತಿಳಿದಿದ್ದರೂ ಹಲವು ಮಂದಿ ತಂಬಾಕಿಗೆ ದಾಸರಾಗಿರುವುದು ಆತಂಕಕಾರಿ ಬೆಳವಣಿಗೆ ಎಂದು ಜಿಲ್ಲಾಧಿಕಾರಿ ಕೆ.ಎ.ದಯಾನಂದ್‌ ಕಳವಳ ವ್ಯಕ್ತಪಡಿಸಿದರು.
Vijaya Karnataka Web SMR-11GANESH1


ನಗರದ ಐಎಂಎ ಸಭಾಂಗಣದಲ್ಲಿ ಸೋಮವಾರ ಜಿಲ್ಲಾಡಳಿತ, ಜಿ.ಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಸಹಯೋಗದಲ್ಲಿ ಕಾನೂನು ಅನುಷ್ಠಾನ ಅಧಿಕಾರಿಗಳಿಗೆ ಏರ್ಪಡಿಸಿದ್ದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ತಂಬಾಕು ಬೆಳೆಯನ್ನು ಹಂತಹಂತವಾಗಿ ಸರಕಾರ ನಿಯಂತ್ರಿಸುತ್ತಿದೆ. ಇದಕ್ಕಾಗಿ ಹಲವಾರು ಕಾರ್ಯಕ್ರಮ ರೂಪಿಸಿದೆ. ಪ್ರತಿವರ್ಷ ತಂಬಾಕಿನ ಮೇಲೆ ತೆರಿಗೆ ಹೆಚ್ಚಳ ಮಾಡುತ್ತಿದೆ. ನಿಯಂತ್ರಣ ಹೇರಿದೆ. ತಮ್ಮ ಉತ್ಪನ್ನದ ಮೇಲೆ ಮನುಷ್ಯನ ಆರೋಗ್ಯದ ಮೇಲೆ ಹಾನಿಕಾರಕ ಎಂದು ಮುದ್ರಿಸಲಾಗಿದೆ. ಇಷ್ಟಾದರೂ ತಂಬಾಕು ಸೇವನೆ ಮಾಡುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ ಎಂದು ಬೇಸರ ವ್ಯಕ್ತಪಡಿಸಿದರು.

ತಂಬಾಕು ಸೇವನೆಯಂಥ ದುಶ್ಚಟದಿಂದ ದೂರವಿದ್ದು, ಆರೋಗ್ಯದ ಕುರಿತು ಎಲ್ಲರೂ ಕಾಳಜಿ ವಹಿಸಬೇಕು. ಒಂದು ಬಾರಿ ತಂಬಾಕು ಸೇವನೆ ಮಾಡಿದರೆ ದುಶ್ಚಟವಾಗಿ ಪರಿಣಮಿಸಿ, ದೇಹದ ಆರೋಗ್ಯವನ್ನು ಸಂಪೂರ್ಣ ಹಾಳು ಮಾಡುತ್ತದೆ. ತಂಬಾಕು ಬೆಳೆಯುವ ಪ್ರದೇಶಗಳಲ್ಲಿ ವಿಷಕಾರಿ ಸರೀಸೃಪಗಳೇ ಹೋಗಲು ಹಿಂದೇಟು ಹಾಕುವಾಗ ಅದನ್ನು ಮಾನವ ಸೇವಿಸುವುದು ಆರೋಗ್ಯವಂತ ಸಮಾಜದ ಹಿತದೃಷ್ಟಿಯಿಂದ ಉತ್ತಮ ಬೆಳವಣಿಗೆಯಲ್ಲ ಎಂದರು.

ಮನುಷ್ಯ ತನ್ನ ಮೇಲಿನ ಒತ್ತಡ ನಿವಾರಿಸಿಕೊಳ್ಳುವ ಸಲುವಾಗಿ ದುಶ್ಚಟಗಳಿಗೆ ಮಾರುಹೋಗುತ್ತಾನೆ. ಕೊನೆಗೆ ಇದೇ ನಮಗೆ ಅನಿವಾರ್ಯ ಎಂಬಂತೆ ಭಾವಿಸಿಕೊಳ್ಳುತ್ತಾನೆ. ಇದರಿಂದ ಅವರನ್ನು ಹೊರತರಲು ಅನಿವಾರ್ಯ ಎಂಬುದು ಮಾನಸಿಕ ಸ್ಥಿತಿ ಅಷ್ಟೇ. ಆರೋಗ್ಯದ ಮೇಲೆ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಿ ತಂಬಾಕು ಸೇವನೆಯಿಂದ ಹೊರಬರುವಂತೆ ಪ್ರೇರೇಪಿಸಬೇಕಿದೆ ಎಂದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ವೆಂಕಟೇಶ್‌, ಎಂಟಿಪಿಸಿ ಕಾರ್ಯಕ್ರಮಾಧಿಕಾರಿ ಶಂಕರಪ್ಪ, ಡಾ. ರಘುನಂದನ್‌ ಮತ್ತಿತರರು ಇದ್ದರು.

--------------

ಕೆಲವರು ಆಯಾಸ ಪರಿಹರಿಸಿಕೊಳ್ಳಲು ತಂಬಾಕು ಸೇವೆ ಪ್ರಾರಂಭಿಸುತ್ತಾರೆ. ಇದರಿಂದ ಖಂಡಿತ ಪರಿಹಾರ ಸಿಗುವುದಿಲ್ಲ. ಬದಲಿಗೆ ಮೆದುಳಿನ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುವುದರಿಂದ ಮುಂದೆ ಸಾಕಷ್ಟು ಪಶ್ಚಾತ್ತಾಪ ಪಡಬೇಕಾಗುತ್ತದೆ. ಆರೋಗ್ಯದ ದೃಷ್ಟಿಯಿಂದ ತಂಬಾಕು ಸೇವನೆಯಿಂದ ದೂರವಿರುವುದೇ ಉತ್ತಮ. ಸ್ವಯಂ ಪ್ರೇರಿತರಾಗಿ ತಂಬಾಕು ಸೇವನೆಯಿಂದ ಮುಕ್ತರಾಗಿ.

-ಕೆ.ಎ.ದಯಾನಂದ್‌, ಜಿಲ್ಲಾಧಿಕಾರಿ,ಶಿವಮೊಗ್ಗ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ