ಆ್ಯಪ್ನಗರ

ಸೆಕೆಂಡ್‌ ರೌಂಡ್‌ನಲ್ಲಿ ರೌಡಿಗಳಿಗೆ ಆವಾಜ್‌

ಮೊದಲನೇ ಹಂತದಲ್ಲಿ 350ಕ್ಕೂ ಹೆಚ್ಚು ರೌಡಿಶೀಟರ್‌ಗಳ ವಿರುದ್ಧ ಗುಡುಗಿದ್ದ ಎಸ್‌ಪಿ ಡಾ.ಎಂ. ಅಶ್ವಿನಿ ಅವರು, ಸೋಮವಾರ ಎರಡನೇ ಹಂತದ ರೌಡಿ ಪರೇಡ್‌ ಮಾಡಿದ್ದಾರೆ.

Vijaya Karnataka 21 May 2019, 5:00 am
ಶಿವಮೊಗ್ಗ : ಮೊದಲನೇ ಹಂತದಲ್ಲಿ 350ಕ್ಕೂ ಹೆಚ್ಚು ರೌಡಿಶೀಟರ್‌ಗಳ ವಿರುದ್ಧ ಗುಡುಗಿದ್ದ ಎಸ್‌ಪಿ ಡಾ.ಎಂ. ಅಶ್ವಿನಿ ಅವರು, ಸೋಮವಾರ ಎರಡನೇ ಹಂತದ ರೌಡಿ ಪರೇಡ್‌ ಮಾಡಿದ್ದಾರೆ.
Vijaya Karnataka Web awaaz for rowdies in second round
ಸೆಕೆಂಡ್‌ ರೌಂಡ್‌ನಲ್ಲಿ ರೌಡಿಗಳಿಗೆ ಆವಾಜ್‌


ಇಲ್ಲಿನ ಡಿಎಆರ್‌ ಮೈದಾನದಲ್ಲಿ ನಡೆದ ರೌಡಿಪರೇಡ್‌ನಲ್ಲಿ ಶಿವಮೊಗ್ಗ ವಿಭಾಗ ವ್ಯಾಪ್ತಿಯ ವಿವಿಧ ಠಾಣೆಗಳಲ್ಲಿ ಪ್ರಕರಣಗಳನ್ನು ಎದುರಿಸುತ್ತಿರುವ 250ಕ್ಕೂ ಅಧಿಕ ರೌಡಿಗಳು ಪಾಲ್ಗೊಂಡಿದ್ದರು.

ರೌಡಿಗಳ ದಾಖಲೆಗಳನ್ನು ಪರಿಶೀಲಿಸಿದ ಅವರು, ಅಪರಾಧ ಚಟುವಟಿಕೆಗಳಲ್ಲಿ ಪಾಲ್ಗೊಂಡಲ್ಲಿ ಖಡಕ್‌ ಕ್ರಮಕೈಗೊಳ್ಳಲಾಗುವುದು. ಹೀಗಾಗಿ, ಬಾಲ ಮುದುರಿಕೊಂಡು ಸುಮ್ಮನಿರಬೇಕು. ಸಾರ್ವಜನಿಕರಿಗೆ ತೊಂದರೆ ನೀಡಬಾರದು ಎಂದು ಎಚ್ಚರಿಕೆ ನೀಡಿದರು.

ಹೆಚ್ಚುವರಿ ಪೊಲೀಸ್‌ ರಕ್ಷಣಾಧಿಕಾರಿ ಎಚ್‌.ಎಂ. ಶೇಖರ್‌, ಡಿವೈಎಸ್‌ಪಿ ಈಶ್ವರ ನಾಯಕ್‌ ಮತ್ತಿತರ ಪೊಲೀಸ್‌ ಅಧಿಕಾರಿಗಳು ಉಪಸ್ಥಿತರಿದ್ದರು.

============

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ