ಆ್ಯಪ್ನಗರ

ಪ್ರಶಸ್ತಿ ಪ್ರದಾನ 27ರಂದು

ನಮ್ಮ ಹಳ್ಳಿ ಥಿಯೇಟರ್‌ ವತಿಯಿಂದ ನೀಡಲಾಗುವ ವರ್ಷದ ರಂಗ ಸಾಧಕ ಮತ್ತು ವರ್ಷದ ಸಮಾಜ ಸೇವಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಏ.27ರಂದು ಸಂಜೆ 5.30ಕ್ಕೆ ನಗರದ ಸರಕಾರಿ ನೌಕರರ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.

Vijaya Karnataka 25 Apr 2019, 5:00 am
ಶಿವಮೊಗ್ಗ: ನಮ್ಮ ಹಳ್ಳಿ ಥಿಯೇಟರ್‌ ವತಿಯಿಂದ ನೀಡಲಾಗುವ ವರ್ಷದ ರಂಗ ಸಾಧಕ ಮತ್ತು ವರ್ಷದ ಸಮಾಜ ಸೇವಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಏ.27ರಂದು ಸಂಜೆ 5.30ಕ್ಕೆ ನಗರದ ಸರಕಾರಿ ನೌಕರರ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
Vijaya Karnataka Web award presenting on 27th
ಪ್ರಶಸ್ತಿ ಪ್ರದಾನ 27ರಂದು


'ವರ್ಷದ ರಂಗಸಾಧಕ 2019 ಪ್ರಶಸ್ತಿ'ಗೆ ಶಿವಮೊಗ್ಗ ರಂಗಾಯಣದ ನಿರ್ದೇಶಕ ಡಾ.ಎಂ.ಗಣೇಶ್‌ ಹಾಗೂ 'ವರ್ಷದ ಸಮಾಜ ಸೇವಕ-2019 ಪ್ರಶಸ್ತಿ'ಗೆ ಪರಿಸರ ಅಧ್ಯಯನ ಕೇಂದ್ರದ ನಿರ್ದೇಶಕ ಜೆ.ಎಲ್‌.ಜನಾರ್ದನ್‌ ಭಾಜನರಾಗಿದ್ದಾರೆ.

ರಂಗಭೂಮಿಯಲ್ಲಿ ಸಲ್ಲಿಸಿರುವ ಸೇವೆ ಪರಿಗಣಿಸಿ ಈ ಪ್ರಶಸ್ತಿಯನ್ನು ಗಣೇಶ್‌ ಅವರಿಗೆ ನೀಡಲಾಗುತ್ತಿದೆ. ಈ ಮೊದಲು ಎಸ್‌.ಮಾಲತಿ, ಪುರುಶೋತ್ತಮ ತಲವಾಟ ಅವರು ಪ್ರಶಸ್ತಿಗೆ ಭಾಜನರಾಗಿದ್ದರು. ಪರಿಸರ ಸಂರಕ್ಷ ಣೆ, ಸಮಾಜದ ಸುಧಾರಣೆಗೆ ಕೈಗೊಂಡ ಕಾರ್ಯಗಳನ್ನು ಗಮನಿಸಿ ಈ ಪ್ರಶಸ್ತಿ ಕೊಡಮಾಡಲಾಗುತ್ತಿದೆ. ಈ ಮೊದಲು ಈ ಪ್ರಶಸ್ತಿಯನ್ನು ಮಂಗಳೂರಿನ ಹಾಜಬ್ಬ ಮತ್ತು ತೀರ್ಥಹಳ್ಳಿಯ ಸಂದೇಶ್‌ ಜವಳಿ ಅವರಿಗೆ ನೀಡಲಾಗಿತ್ತು.

ಮಾನಸಧಾರಾ ಟ್ರಸ್ಟ್‌ ಮತ್ತು ನಮ್ಮ ಹಳ್ಳಿ ಥಿಯೇಟರ್‌ ಶಿವಮೊಗ್ಗ ಇವರ ಆಶ್ರಯದಲ್ಲಿ ಸರಕಾರಿ ಶಾಲೆಯ ಮಕ್ಕಳಿಗಾಗಿ ನಡೆಯುತ್ತಿರುವ ಉಚಿತ ಮನಸ್ಫೂರ್ತಿ 2019ರ ಸಮಾರೋಪದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಥಿಯೇಟರ್‌ ಅಧ್ಯಕ್ಷ ಪ್ರವೀಣ್‌ ಎಸ್‌.ಹಾಲ್ಮತ್ತೂರು, ಕಾರ್ಯದರ್ಶಿ ದೇವರಾಜ್‌ ನಾಯ್ಕ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ