ಆ್ಯಪ್ನಗರ

ನಿಸ್ರಾಣಿ ರಾಮಚಂದ್ರ ಅವರಿಗೆ ಚಾತುರ್ಮಾಸ್ಯ ಪ್ರಶಸ್ತಿ

ರಾಮಾಯಣ ಚಾತುರ್ಮಾಸ್ಯದಲ್ಲಿಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳವರಿಂದ ಉದ್ಘೋಷಿತವಾದ ಚಾತುರ್ಮಾಸ್ಯ ಪ್ರಶಸ್ತಿಯನ್ನು ಈ ಬಾರಿ ನಿಸ್ರಾಣಿ ರಾಮಚಂದ್ರ ಅವರಿಗೆ ಶ್ರೀಗಳು ಅನುಗ್ರಹಿಸಿದ್ದು, ಸೆ.23ರಂದು ಸಂಜೆ 4ಕ್ಕೆ ಇಲ್ಲಿನ ಅಗ್ರಹಾರದ ಶ್ರೀರಾಘವೇಶ್ವರ ಭವನದಲ್ಲಿಪ್ರದಾನ ಮಾಡಲಾಗುವುದು.

Vijaya Karnataka 22 Sep 2019, 5:00 am
  1. ಸಾಗರ: ರಾಮಾಯಣ ಚಾತುರ್ಮಾಸ್ಯದಲ್ಲಿಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳವರಿಂದ ಉದ್ಘೋಷಿತವಾದ ಚಾತುರ್ಮಾಸ್ಯ ಪ್ರಶಸ್ತಿಯನ್ನು ಈ ಬಾರಿ ನಿಸ್ರಾಣಿ ರಾಮಚಂದ್ರ ಅವರಿಗೆ ಶ್ರೀಗಳು ಅನುಗ್ರಹಿಸಿದ್ದು, ಸೆ.23ರಂದು ಸಂಜೆ 4ಕ್ಕೆ ಇಲ್ಲಿನ ಅಗ್ರಹಾರದ ಶ್ರೀರಾಘವೇಶ್ವರ ಭವನದಲ್ಲಿಪ್ರದಾನ ಮಾಡಲಾಗುವುದು.
ರಾಮಚಂದ್ರಾಪುರ ಮಠದ ಸಮ್ಮುಖ ಸರ್ವಾಧಿಕಾರಿ ತಿಮ್ಮಪ್ಪಯ್ಯ ಮಡಿಯಾಳ್‌ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಮಠದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ .ಜಿ. ಭಟ್‌, ರಾಘವೇಶ್ವರ ಭವನ ಸಮಿತಿ ಅಧ್ಯಕ್ಷ ಹರನಾಥರಾವ್‌ ಮತ್ತಿಕೊಪ್ಪ ಮತ್ತು ಚಾತುರ್ಮಾಸ್ಯ ಸಮಿತಿ ಅಧ್ಯಕ್ಷ ರಾಮಚಂದ್ರ ಕೆಕ್ಕಾರು ಉಪಸ್ಥಿತರಿರುವರು.
Vijaya Karnataka Web award to nisrani ramchandra
ನಿಸ್ರಾಣಿ ರಾಮಚಂದ್ರ ಅವರಿಗೆ ಚಾತುರ್ಮಾಸ್ಯ ಪ್ರಶಸ್ತಿ


ಹಿಂದಿನ ಪೀಠಾಧಿಪತಿಗಳ ಕಾಲದಿಂದಲೂ ಶ್ರೀಮಠಕ್ಕೆ ಸೇವೆ ಸಲ್ಲಿಸುತ್ತಿರುವ ನಿಸ್ರಾಣಿ ರಾಮಚಂದ್ರ ಅವರು ಶ್ರೀಗಳು ಪೀಠಾರೋಹಣ ಆದಾಗಿಂದಲು ಆಡಳಿತದ ವಿವಿಧ ಸ್ತರಗಳಲ್ಲಿಸೇವೆ ಸಲ್ಲಿಸಿದ್ದರು. ರಾಮಾಯಣ ಮಹಾಸತ್ರ, ವಿಶ್ವಗೋ ಸಮ್ಮೇಳನದಂತ ಕಾರ್ಯಕ್ರಮಗಳಲ್ಲಿಅವರು ನಿರ್ವಹಿಸಿದ ಜವಾಬ್ದಾರಿ ಗಮನಿಸಿ ಅವರಿಗೆ ಈ ಪ್ರಶಸ್ತಿ ಅನುಗ್ರಹಿಸಲಾಗಿದೆ. ಅನಿವಾರ್ಯ ಕಾರಣಗಳಿಂದ ಚಾತುರ್ಮಾಸ್ಯದ ಸಂದರ್ಭ ಪಾಲ್ಗೊಳ್ಳಲು ಆಗದ ಅವರಿಗೆ ಸಾಗರಲ್ಲಿ ಪ್ರಶಸ್ತಿ ಕೊಡಲಾಗುತ್ತಿದೆ. ಆಸಕ್ತರು ಹಾಜರಿರಲು ಸಂಘಟಕರು ಕೋರಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ