ಆ್ಯಪ್ನಗರ

ಆಧುನಿಕ ಬಾಲ್ಯ ಕಥಾ ಜಗತ್ತಿನಿಂದ ದೂರ: ವಿಷಾದ

ಬಾಲ್ಯದಲ್ಲಿ ನಾವು ಕೇಳುವ ಕಥೆಗಳಿಂದ ನಮ್ಮ ಗ್ರಹಿಕೆ, ಕಲ್ಪನೆ ವಿಸ್ತಾರವಾಗುತ್ತದೆ. ಆಧುನಿಕ ಬಾಲ್ಯ ಅಂತಹ ಕಥಾಜಗತ್ತಿನಿಂದ ದೂರಾಗುತ್ತಿರುವುದು ವಿಷಾದನೀಯ ಎಂದು ಸಾಮಾಜಿಕ ಕಾರ‍್ಯಕರ್ತ ಕೆ.ಎಸ್‌.ಗೋಪಾಲಕೃಷ್ಣ ಹೇಳಿದರು.

Vijaya Karnataka 27 Jul 2019, 5:00 am
ಸಾಗರ: ಬಾಲ್ಯದಲ್ಲಿ ನಾವು ಕೇಳುವ ಕಥೆಗಳಿಂದ ನಮ್ಮ ಗ್ರಹಿಕೆ, ಕಲ್ಪನೆ ವಿಸ್ತಾರವಾಗುತ್ತದೆ. ಆಧುನಿಕ ಬಾಲ್ಯ ಅಂತಹ ಕಥಾಜಗತ್ತಿನಿಂದ ದೂರಾಗುತ್ತಿರುವುದು ವಿಷಾದನೀಯ ಎಂದು ಸಾಮಾಜಿಕ ಕಾರ‍್ಯಕರ್ತ ಕೆ.ಎಸ್‌.ಗೋಪಾಲಕೃಷ್ಣ ಹೇಳಿದರು.
Vijaya Karnataka Web SMR-26SGR8


ಇಲ್ಲಿನ ಬ್ರಾಸಂ ಸಭಾಭವನದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ ಗುರುವಾರ ಏರ್ಪಡಿಸಿದ್ದ ತಾಲೂಕು 5ನೇ ಮಕ್ಕಳ ಸಾಹಿತ್ಯ ಸಮ್ಮೇಳನ ಸಮಾರೋಪದಲ್ಲಿ ಅವರು ಮಾತನಾಡಿದರು.

ಅಜ್ಜ, ಅಜ್ಜಿ, ಅಪ್ಪ, ಅಮ್ಮ ಮಕ್ಕಳಿಗೆ ಕಥೆ ಹೇಳಿ ಮಲಗಿಸುತ್ತಿದ್ದ ಕಾಲವಿತ್ತು. ಹಿರಿಯರು ಹೇಳುವ ಕಥೆಗಳನ್ನು ಕೇಳುವುದೆಂದರೆ ಮಕ್ಕಳಿಗೂ ಇಷ್ಟವಾಗಿತ್ತು. ಆದರೆ, ಬದಲಾದ ಕಾಲಘಟ್ಟದಲ್ಲಿ ಬಹುತೇಕ ಮನೆಗಳಲ್ಲಿ ಹಿರಿಯರೇ ಇಲ್ಲವಾಗಿದ್ದಾರೆ. ಮಕ್ಕಳು ಸಹ ಕಥೆ ಕೇಳುವ ಬದಲು ಮೊಬೈಲ್‌ ಫೋನ್‌, ಟಿವಿಗಳ ಕಥೆಯನ್ನು ಹೆಚ್ಚು ಇಷ್ಟ ಪಡುತ್ತಿದ್ದಾರೆ. ಆದರೆ, ದೃಶ್ಯ ಮಾಧ್ಯಮದ ಕಥೆಗಳು ಬೀರುವ ಪರಿಣಾಮ ತಾತ್ಕಾಲಿಕವಾದುದು ಎಂದರು.

ಸರ್ವಾಧ್ಯಕ್ಷ ತೆ ವಹಿಸಿದ್ದ ಗಾರ್ಗಿ ಸೃಷ್ಟೀಂದ್ರ ಮಾತನಾಡಿ, ಮಕ್ಕಳ ಸಮ್ಮೇಳನ ನನಗೆ ಹೊಸ ಅನುಭವ ನೀಡಿದೆ. ನನ್ನ ಸಾಹಿತ್ಯಕ್ಕೆ ಪ್ರೇರಣೆ ನೀಡಿದ ತಂದೆ, ತಾಯಿ, ಶಿಕ್ಷ ಕರಿಗೆ ಹಾಗೂ ಸ್ನೇಹಿತೆಯರಿಗೆ ನಾನು ಕೃತಜ್ಞಳಾಗಿದ್ದೇನೆ. ಸಮ್ಮೇಳನದ ಅಧ್ಯಕ್ಷ ತೆ ನನ್ನಲ್ಲಿ ಇನ್ನಷ್ಟು ಸ್ಪೂರ್ತಿ ತುಂಬಿದೆ . ಶಾಲೆಗಳಲ್ಲಿ ಪರಿಷತ್ತು ಸಾಹಿತ್ಯಾಭಿರುಚಿ ಹೆಚ್ಚಿಸುವಂತಹ ಕಾರ‍್ಯಕ್ರಮ ನಡೆಸಬೇಕು ಎಂದರು. ಸ್ವರಚಿತ 'ವಿಸ್ಮಯ' ಕವನವನ್ನು ಅವರು ವಾಚಿಸಿದರು.

ಪರಿಷತ್ತಿನ ಅಧ್ಯಕ್ಷ ಎಸ್‌.ವಿ.ಹಿತಕರ ಜೈನ್‌ ಅಧ್ಯಕ್ಷ ತೆ ವಹಿಸಿದ್ದರು. ಪರಿಷತ್ತಿನ ಜಿಲ್ಲಾ ಉಪಾಧ್ಯಕ್ಷ ತಿರುಮಲ ಮಾವಿನಕುಳಿ ಮಾತನಾಡಿದರು.

ಇದೇ ಸಂದರ್ಭ ಸರ್ವಾಧ್ಯಕ್ಷೆ ಗಾರ್ಗಿ ಅವರನ್ನು ಪರಿಷತ್ತಿನಿಂದ ಅಭಿನಂದಿಸಲಾಯಿತು. ಎಸ್‌ಎಸ್‌ಎಲ್‌ಸಿ ಕನ್ನಡ ಪರೀಕ್ಷೆಯಲ್ಲಿ 125ಕ್ಕೆ 125 ಅಂಕ ಪಡೆದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.

ಪರಿಷತ್ತು ಆಯೋಜಿಸಿದ್ದ ವಿವಿಧ ಸ್ಪರ್ಧೆ ತೀರ್ಪುಗಾರರಾಗಿ ಸಹಕರಿಸಿದ 30 ಶಿಕ್ಷ ಕರಿಗೆ ನೆನಪಿನ ಕಾಣಿಕೆ ಹಾಗೂ ವಿಜೇತರಾದವರಿಗೆ ಬಹುಮಾನ, ಪ್ರಶಸ್ತಿ ಪತ್ರ ನೀಡಲಾಯಿತು. ನಗರಸಭೆ ಸದಸ್ಯ ಲಿಂಗರಾಜು, ಪರಿಷತ್ತಿನ ಕಾರ್ಯದರ್ಶಿ ಮೇಜರ್‌ ಎಂ.ನಾಗರಾಜ್‌, ಶಿಕಾರಿಪುರ ತಾಲೂಕು ಅಧ್ಯಕ್ಷ ಜಗದೀಶ ಅಂಗಡಿ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷ ಕ ಶಿಕಾರಿಪುರದ ಸುಭಾಶ್ಚಂದ್ರ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ