ಆ್ಯಪ್ನಗರ

ಆಯುಷ್ಮಾನ್‌ ಭವ ಹೆಲ್ತ್‌ ಕಾರ್ಡ್‌ ಹೆಸರಲ್ಲಿ ವಂಚನೆಗೆ ಯತ್ನ

ಕೇಂದ್ರ ಸರಕಾರದ ಮಹತ್ವದ ಯೋಜನೆಯಾದ ಅಯುಷ್ಮಾನ್‌ಭವ ಯೋಜನೆಯ ಕಾರ್ಡ್‌ ವಿತರಿಸುವುದಾಗಿ ಗ್ರಾಮಸ್ಥರಿಗೆ ಹುಸಿ ಕರೆ ಮಾಡಿ ವಂಚಿಸಲು ಯತ್ನಿಸುತ್ತಿದ್ದಾರೆ.

Vijaya Karnataka 14 May 2019, 5:00 am
ನಿಟ್ಟೂರು : ಕೇಂದ್ರ ಸರಕಾರದ ಮಹತ್ವದ ಯೋಜನೆಯಾದ ಅಯುಷ್ಮಾನ್‌ಭವ ಯೋಜನೆಯ ಕಾರ್ಡ್‌ ವಿತರಿಸುವುದಾಗಿ ಗ್ರಾಮಸ್ಥರಿಗೆ ಹುಸಿ ಕರೆ ಮಾಡಿ ವಂಚಿಸಲು ಯತ್ನಿಸುತ್ತಿದ್ದಾರೆ.
Vijaya Karnataka Web ayushmann bhavs attempt to cheat in the name of health card
ಆಯುಷ್ಮಾನ್‌ ಭವ ಹೆಲ್ತ್‌ ಕಾರ್ಡ್‌ ಹೆಸರಲ್ಲಿ ವಂಚನೆಗೆ ಯತ್ನ


ನಿಟ್ಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹತ್ತಾರು ಜನಕ್ಕೆ ಫೋನ್‌ ಮಾಡಿ, ನಾವು ಗ್ರಾ.ಪಂ. ನಿಂದ ಕರೆ ಮಾಡುತ್ತಿದ್ದೇವೆ. ನಿಮ್ಮ ಹೆಲ್ತ್‌ ಕಾರ್ಡ್‌ ಅಂಚೆಯ ಮೂಲಕ ಬರುತ್ತದೆ. 320 ರೂ. ಹಣ ಕಟ್ಟಿ ಬಿಡಿಸಿಕೊಳ್ಳಿ ಎಂದು ವಂಚಿಸಲು ಯತ್ನಿಸುತ್ತಿದ್ದಾರೆ.

ಮೊ.9448693816/ 9448693813 ನಿಂದ ಕರೆಗಳು ಬಂದಿದ್ದು, ಅನುಮಾನಗೊಂಡ ಕೆಲವರು ಗ್ರಾ.ಪಂ.ಗೆ ತೆರಳಿ ತೆರಳಿ ವಿಚಾರಿಸಿದಾಗ ಮೋಸದ ಸಂಚು ಬಯಲಾಗಿದೆ.

ಈ ಬಗ್ಗೆ ಪಿಡಿಒ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಕಾರ್ಡ್‌ ಪಡೆಯಲು ಯಾವುದೇ ಶುಲ್ಕ ವಿಧಿಸಿಲ್ಲ,ಇದು ಸಾಮಾನ್ಯ ಅಂಚೆ ಮೂಲಕ ಜನರ ಕೈಸೇರುತ್ತಿದೆ. ಸುಳ್ಳು ಕರೆಗಳ ಮಾತು ನಂಬಿ ಮೋಸ ಹೋಗಬಾರದು ಎಂದು ಗ್ರಾಮಸ್ಥರಿಗೆ ಮನವಿ ಮಾಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ