ಆ್ಯಪ್ನಗರ

ಸಕ್ರೆಬೈಲು ಬಿಡಾರದಲ್ಲಿ ಮರಿ ಆನೆ ಸಾವು

ಸಕ್ರೆಬೈಲು ಆನೆ ಬಿಡಾರದ ಮರಿ ಆನೆ ಎರಡು ವರ್ಷದ ಭಾರತಿ ಶನಿವಾರ ಬೆಳಗಿನ ಜಾವ ಮೃತಪಟ್ಟಿದೆ.

Vijaya Karnataka 26 May 2019, 5:00 am
ಶಿವಮೊಗ್ಗ: ಸಕ್ರೆಬೈಲು ಆನೆ ಬಿಡಾರದ ಮರಿ ಆನೆ ಎರಡು ವರ್ಷದ ಭಾರತಿ ಶನಿವಾರ ಬೆಳಗಿನ ಜಾವ ಮೃತಪಟ್ಟಿದೆ.
Vijaya Karnataka Web baby elephant death in the sacredbail camp
ಸಕ್ರೆಬೈಲು ಬಿಡಾರದಲ್ಲಿ ಮರಿ ಆನೆ ಸಾವು


4 ವರ್ಷದ ಹಿಂದೆ ಹಾಸನ ಜಿಲ್ಲೆ ಆಲೂರಿನಲ್ಲಿ ಸೆರೆಹಿಡಿಯಲಾಗಿದ್ದ ಭಾನುಮತಿ ಆನೆಯು ಬಿಡಾರಕ್ಕೆ ಬಂದ ಎರಡು ವರ್ಷದ ಬಳಿಕ ಭಾರತಿಗೆ ಜನ್ಮ ನೀಡಿತ್ತು. ಶುಕ್ರವಾರ ಬೆಳಗ್ಗೆ ಆನೆಗಳಿಗೆ ಮೈ ತೊಳೆಸುವಾಗ ಲವಲವಿಕೆಯಿಂದ ಇದ್ದ ಆನೆ ಮರಿಯು ಮಧ್ಯಾಹ್ನದ ಹೊತ್ತಿಗೆ ಮಂಕಾಗಿತ್ತು. ಅದರ ನಡುವೆಯೂ ತಾಯಿ ಜತೆಗೆ ಮೇಯಲು ಕಾಡಿಗೆ ಅಟ್ಟಲಾಗಿತ್ತು.

ಮಾವುತರು ಮತ್ತು ಕಾವಾಡಿಗಳು ಶನಿವಾರ ಬೆಳಗ್ಗೆ ಆನೆಗಳನ್ನು ಕರೆತರಲು ಕಾಡಿಗೆ ಹೋದಾಗ ಭಾನುಮತಿ ಆನೆಯು ಜೋರಾಗಿ ಘೀಳಿಟ್ಟು ರೋಧಿಸುತ್ತಿತ್ತು. ಈ ಸಮಯದಲ್ಲಿ ಮರಿ ಮೃತಪಟ್ಟಿರುವುದನ್ನು ಮಾವುತರು ಗುರುತಿಸಿದರು. ಮರಿಯು ಯಾವ ಕಾರಣಕ್ಕೆ ಮೃತಪಟ್ಟಿದೆ ಎಂಬುದು ಗೊತ್ತಾಗಿಲ್ಲ. ಮಂಕಾಗಿದ್ದ ಮರಿಗೆ ಚಿಕಿತ್ಸೆ ನೀಡದೆ ಕಾಡಿಗೆ ಮೇಯಲು ಬಿಟ್ಟಿದ್ದು ಅದರ ಸಾವಿಗೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ. ಮರಣೋತ್ತರ ಪರೀಕ್ಷೆ ಬಳಿಕ ಅಧಿಕಾರಿಗಳು, ಮಾವುತರು ಮತ್ತು ಕಾವಾಡಿಗಳು ಕಾಡಿನಲ್ಲೇ ಅಂತ್ಯಸಂಸ್ಕಾರ ನಡೆಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ