ಆ್ಯಪ್ನಗರ

ಜಿ.ಪಂ. ಸದಸ್ಯ ಸುರೇಶ್‌ ಸ್ವಾಮಿರಾವ್‌ಗೆ ಜಾಮೀನು ಮಂಜೂರು

ಅರಣ್ಯ ಮತ್ತು ರೈಲ್ವೆ ಸಿಬ್ಬಂದಿ ವಿರುದ್ಧ ಹಲ್ಲೆ ನಡೆಸಿದ ಆರೋಪದ ಮೇಲೆ ನ್ಯಾಯಾಂಗ ಬಂಧನದಲ್ಲಿದ್ದ ಜಿ.ಪಂ. ಸದಸ್ಯ ಸುರೇಶ್‌ ಸ್ವಾಮಿರಾವ್‌ಗೆ ನ್ಯಾಯಾಲಯ ಶನಿವಾರ ಜಾಮೀನು ಮಂಜೂರು ಮಾಡಿದೆ

Vijaya Karnataka 23 Sep 2018, 5:00 am
ಹೊಸನಗರ: ಅರಣ್ಯ ಮತ್ತು ರೈಲ್ವೆ ಸಿಬ್ಬಂದಿ ವಿರುದ್ಧ ಹಲ್ಲೆ ನಡೆಸಿದ ಆರೋಪದ ಮೇಲೆ ನ್ಯಾಯಾಂಗ ಬಂಧನದಲ್ಲಿದ್ದ ಜಿ.ಪಂ. ಸದಸ್ಯ ಸುರೇಶ್‌ ಸ್ವಾಮಿರಾವ್‌ಗೆ ನ್ಯಾಯಾಲಯ ಶನಿವಾರ ಜಾಮೀನು ಮಂಜೂರು ಮಾಡಿದೆ.
Vijaya Karnataka Web bail issue to zilla panchayath member sureshswamyrao
ಜಿ.ಪಂ. ಸದಸ್ಯ ಸುರೇಶ್‌ ಸ್ವಾಮಿರಾವ್‌ಗೆ ಜಾಮೀನು ಮಂಜೂರು


ಸುರೇಶ್‌ ಪರ ವಾದ ಮಂಡಿಸಿದ ವಕೀಲರ ಜಾಮೀನು ಅರ್ಜಿ ಹಾಗೂ ಆಕ್ಷೇಪಗಳನ್ನು ಆಲಿಸಿದ ಇಲ್ಲಿನ ಹೆಚ್ಚುವರಿ ವ್ಯವಹಾರಿಕ ನ್ಯಾಯಾಧೀಶ ದೇಶಭೂಷಣ ಕೌಜಲಗಿ ಷರತ್ತು ಬದ್ದ ಜಾಮೀನು ನೀಡಿದರು.

ಇಬ್ಬರು ಗಣ್ಯ ವ್ಯಕ್ತಿಗಳಿಂದ ತಲಾ ರೂ.50 ಸಾವಿರದ ಬಾಂಡ್‌ ಪಡೆದು ಜಾಮೀನು ಮಂಜೂರು ಮಾಡಲಾಗಿದೆ. ಸುರೇಶ್‌ ಸ್ವಾಮಿರಾವ್‌ ಪರವಾಗಿ ವಕೀಲರಾದ ಡಿ.ಎನ್‌.ಹಿರಿಯಪ್ಪ ಹಾಗೂ ಹೊಳೆಗದ್ದೆ ವಿಜಯ್‌ ವಾದ ಮಂಡಿಸಿದ್ದರು.

ಸೆ.2ರಂದು ರಿಪ್ಪನ್‌ಪೇಟೆ ಸಮೀಪದ ಸೂಡೂರು ರೈಲ್ವೆ ಗೇಟ್‌ನಲ್ಲಿ ಕರ್ತವ್ಯ ನಿರತ ರೈಲ್ವೆ ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಸುರೇಶ ಮತ್ತು ತ್ರಿಭುವನ್‌ ಹಲ್ಲೆ ನಡೆಸಿದ್ದರು ಎಂದು ದೂರು ದಾಖಲಾಗಿತ್ತು. ಸೆ.18ರ ತಡರಾತ್ರಿ ಪೊಲೀಸರು ಕಾರಾರ‍ಯಚರಣೆ ನಡೆಸಿ, ಜಿ.ಪಂ. ಸದಸ್ಯ ಸುರೇಶ್‌ರನ್ನು ಬಂಧಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ