ಶಿವಮೊಗ್ಗ: ದುಶ್ಚಟದಿಂದ ಮುಕ್ತರಾಗಿ ಶೈಕ್ಷಣಿಕವಾಗಿ, ಆರ್ಥಿಕವಾಗಿ ಮುಂದುವರಿಯುತ್ತಿರುವ ಬಂಜಾರ ಸಮುದಾಯದವರು ಇಂದು ಸ್ವಾಭಿಮಾನ ಬದುಕಿನ ಕಲೆ ಅರಿತಿದ್ದಾರೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ ಸಹಯೋಗದಲ್ಲಿ ಶುಕ್ರವಾರ ನಗರದ ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಿದ್ದ ಸಂತ ಶ್ರೀ ಸೇವಾಲಾಲರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬಂಜಾರ ಸಮುದಾಯದ ಗುರು ಸಂತ ಸೇವಾಲಾಲರು ಮನುಷ್ಟರನ್ನಷ್ಟೇ ಅಲ್ಲದೇ ಪ್ರಾಣಿ, ಪಕ್ಷಿಗಳಿಗೂ ಅಚ್ಚುಮೆಚ್ಚಿನವರಾಗಿದ್ದರು. ಅವರ ಜನ್ಮಭೂಮಿ ಸೂರಗೊಂಡನಕೊಪ್ಪದ ಸರ್ವಾಂಗೀಣ ವಿಕಾಸಕ್ಕೆ ಸರಕಾರಗಳು ಅಗತ್ಯ ನೆರವು ನೀಡಿ ಸಹಕರಿಸಿವೆ. ಇಂದಿನ ಯುವಪೀಳಿಗೆಯೂ ಕೂಡ ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳುವ ಸ್ಥಾನಮಾನ ಕಂಡುಕೊಳ್ಳುವಂತಾಗಬೇಕು ಎಂದರು.
ಪಶು ವೈದ್ಯಕೀಯ ಇಲಾಖೆ ಉಪನಿರ್ದೇಶಕ ಡಾ.ಎಸ್.ಇಂದ್ರಾನಾಯ್ಕ್ ವಿಶೇಷ ಉಪನ್ಯಾಸ ನೀಡಿ, ಬಂಜಾರ ಸಮುದಾಯವನ್ನು ಸಂರಕ್ಷಿಸಿದ, ಅನ್ಯರ ದಾಳಿಯಿಂದ ಜನಾಂಗವನ್ನು ಕಾಪಾಡಿದ, ತಮ್ಮದೇ ಆದ ಸಂಸ್ಕೃತಿಯ ಅನನ್ಯತೆಯನ್ನು ಸೃಷ್ಟಿಸಿ ಪಸರಿಸಿದ ಮಾಹಾನ್ ಸಂತ ಸೇವಾಲಾಲರು ಎಂದರು.
ಸಂತ ಸೇವಾಲಾಲರು ಅಂದೇ ಶಿಕ್ಷಣದ ಮಹತ್ವವನ್ನು ಜನಾಂಗಕ್ಕೆ ಸಾರಿದ್ದರು. ಬಂಜಾರ ಜನಾಂಗದ ಆಚಾರ ವಿಚಾರ ಸಂಪ್ರದಾಯ ಮತ್ತಿತರ ವಿವರಗಳನ್ನು ಹಾಡು, ಸಾಹಿತ್ಯದಲ್ಲಿ ಕಾಣಬಹುದಾಗಿದೆ. ಅವರು ನಾಡಿನ ಜನತೆಗೆ ಸಾರಿದ ಸಂದೇಶ ಅತ್ಯಂತ ಮಹತ್ವವುಳ್ಳದ್ದಾಗಿವೆ. ಎಲ್ಲರನ್ನೂ ನಮ್ಮಂತೆಯೇ ಭಾವಿಸಿ. ನಮ್ಮ ಏಳಿಗೆ ನಮ್ಮಿಂದಲೇ ಸಾಧ್ಯ. ಯಾರಲ್ಲಿಯೂ ಸಹಾಯಕ್ಕಾಗಿ ಕಾಯದೆ ಇತರರಿಗೆ ಸಹಾಯ ಮಾಡುವವರಾಗುವಂತೆ ಕರೆ ನೀಡಿದ ಮಾರ್ಗದರ್ಶಕ, ದಾರ್ಶನಿಕ ಎಂದು ಬಣ್ಣಿಸಿದರು.
ಬಂಜಾರ, ಲಂಬಾಣಿ, ಲಮಾಣಿ ಮುಂತಾದ ನಾಮಗಳಿಂದ ಗೋರ್ ಸಮುದಾಯವನ್ನು ಗುರುತಿಸಲಾಗುತ್ತಿದೆ. ಬಹು ವರ್ಷಗಳ ಹಿಂದೆ ಎತ್ತುಗಳನ್ನು ಬಳಸಿ, ಸಾಮಗ್ರಿಗಳನ್ನು ಸಾಗಿಸಿ ಅವುಗಳನ್ನು ಮಾರಾಟ ಮಾಡಿ ಜೀವನ ನಿರ್ವಹಿಸುತ್ತಿದ್ದರು. ಅಂದು ಅವರು ನಡೆದಾಡುತ್ತಿದ್ದ ಕಾಡುದಾರಿಗಳು ಈಗ ರೈಲು ಮಾರ್ಗಗಳಾಗಿ ರೂಪುಗೊಂಡಿವೆ. ಹಿಗಾಗಿ ರೈಲು ಮಾರ್ಗ ಗೋರ್ಬಾಯಿಗಳು ನೀಡಿದ ಕೊಡುಗೆ ಎಂದೇ ಬಣ್ಣಿಸಲಾಗುತ್ತಿದೆ. ಇಂದು ಗೋರ್ಬಾಯಿಗಳನ್ನು ದೇಶ, ವಿದೇಶಗಳಲ್ಲಿ ಗುರುತಿಸಬಹುದಾಗಿದೆ ಎಂದು ವಿವರಿಸಿದರು.
ಜಿ.ಪಂ ಉಪಾಧ್ಯಕ್ಷೆ ವೇದಾ ವಿಜಯಕುಮಾರ್ ಮಾತನಾಡಿ, ಮಹನೀಯ ಸೇವಾಲಾಲರು ಸಮುದಾಯದ ಉನ್ನತಿಗೆ ಶ್ರಮಿಸಿದ್ದಾರೆ. ಈ ಜನಾಂಗದ ಆಚಾರ, ವಿಚಾರ, ಉಡುಗೆ, ತೊಡುಗೆ ವಿಭಿನ್ನವಾಗಿವೆ. ನಿಮ್ಮಲ್ಲಿರುವ ಕಸೂತಿ ಕಲೆಯ ಜತೆಗೆ ಶಿಕ್ಷಣವಂತರಾಗಿ ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದರು.
ಜಿಲ್ಲಾಧಿಕಾರಿ ಕೆ.ಎ.ದಯಾನಂದ್, ಅಪರ ಜಿಲ್ಲಾಧಿಕಾರಿ ಜಿ.ಅನುರಾಧ, ಬಂಜಾರ ಗುರು ಸೈನಾಭಗತ್, ಕರ್ನಾಟಕ ಜೀವವೈವಿಧ್ಯ ಮಂಡಳಿ ಅಧ್ಯಕ್ಷ ಎಸ್.ಪಿ.ಶೇಷಾದ್ರಿ, ಜಿ.ಪಂ ಸದಸ್ಯೆ ಅನಿತಾಕುಮಾರಿ, ಬಂಜಾರ ಸಮುದಾಯದ ಜಿಲ್ಲಾ ಅಧ್ಯಕ್ಷ ಆರ್.ಸಿ.ನಾಯ್ಕ್, ಗೌರವಾಧ್ಯಕ್ಷ ನಾನ್ಯಾನಾಯ್ಕ್ ಮತ್ತಿತರರರು ಇದ್ದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ ಸಹಯೋಗದಲ್ಲಿ ಶುಕ್ರವಾರ ನಗರದ ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಿದ್ದ ಸಂತ ಶ್ರೀ ಸೇವಾಲಾಲರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬಂಜಾರ ಸಮುದಾಯದ ಗುರು ಸಂತ ಸೇವಾಲಾಲರು ಮನುಷ್ಟರನ್ನಷ್ಟೇ ಅಲ್ಲದೇ ಪ್ರಾಣಿ, ಪಕ್ಷಿಗಳಿಗೂ ಅಚ್ಚುಮೆಚ್ಚಿನವರಾಗಿದ್ದರು. ಅವರ ಜನ್ಮಭೂಮಿ ಸೂರಗೊಂಡನಕೊಪ್ಪದ ಸರ್ವಾಂಗೀಣ ವಿಕಾಸಕ್ಕೆ ಸರಕಾರಗಳು ಅಗತ್ಯ ನೆರವು ನೀಡಿ ಸಹಕರಿಸಿವೆ. ಇಂದಿನ ಯುವಪೀಳಿಗೆಯೂ ಕೂಡ ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳುವ ಸ್ಥಾನಮಾನ ಕಂಡುಕೊಳ್ಳುವಂತಾಗಬೇಕು ಎಂದರು.
ಪಶು ವೈದ್ಯಕೀಯ ಇಲಾಖೆ ಉಪನಿರ್ದೇಶಕ ಡಾ.ಎಸ್.ಇಂದ್ರಾನಾಯ್ಕ್ ವಿಶೇಷ ಉಪನ್ಯಾಸ ನೀಡಿ, ಬಂಜಾರ ಸಮುದಾಯವನ್ನು ಸಂರಕ್ಷಿಸಿದ, ಅನ್ಯರ ದಾಳಿಯಿಂದ ಜನಾಂಗವನ್ನು ಕಾಪಾಡಿದ, ತಮ್ಮದೇ ಆದ ಸಂಸ್ಕೃತಿಯ ಅನನ್ಯತೆಯನ್ನು ಸೃಷ್ಟಿಸಿ ಪಸರಿಸಿದ ಮಾಹಾನ್ ಸಂತ ಸೇವಾಲಾಲರು ಎಂದರು.
ಸಂತ ಸೇವಾಲಾಲರು ಅಂದೇ ಶಿಕ್ಷಣದ ಮಹತ್ವವನ್ನು ಜನಾಂಗಕ್ಕೆ ಸಾರಿದ್ದರು. ಬಂಜಾರ ಜನಾಂಗದ ಆಚಾರ ವಿಚಾರ ಸಂಪ್ರದಾಯ ಮತ್ತಿತರ ವಿವರಗಳನ್ನು ಹಾಡು, ಸಾಹಿತ್ಯದಲ್ಲಿ ಕಾಣಬಹುದಾಗಿದೆ. ಅವರು ನಾಡಿನ ಜನತೆಗೆ ಸಾರಿದ ಸಂದೇಶ ಅತ್ಯಂತ ಮಹತ್ವವುಳ್ಳದ್ದಾಗಿವೆ. ಎಲ್ಲರನ್ನೂ ನಮ್ಮಂತೆಯೇ ಭಾವಿಸಿ. ನಮ್ಮ ಏಳಿಗೆ ನಮ್ಮಿಂದಲೇ ಸಾಧ್ಯ. ಯಾರಲ್ಲಿಯೂ ಸಹಾಯಕ್ಕಾಗಿ ಕಾಯದೆ ಇತರರಿಗೆ ಸಹಾಯ ಮಾಡುವವರಾಗುವಂತೆ ಕರೆ ನೀಡಿದ ಮಾರ್ಗದರ್ಶಕ, ದಾರ್ಶನಿಕ ಎಂದು ಬಣ್ಣಿಸಿದರು.
ಬಂಜಾರ, ಲಂಬಾಣಿ, ಲಮಾಣಿ ಮುಂತಾದ ನಾಮಗಳಿಂದ ಗೋರ್ ಸಮುದಾಯವನ್ನು ಗುರುತಿಸಲಾಗುತ್ತಿದೆ. ಬಹು ವರ್ಷಗಳ ಹಿಂದೆ ಎತ್ತುಗಳನ್ನು ಬಳಸಿ, ಸಾಮಗ್ರಿಗಳನ್ನು ಸಾಗಿಸಿ ಅವುಗಳನ್ನು ಮಾರಾಟ ಮಾಡಿ ಜೀವನ ನಿರ್ವಹಿಸುತ್ತಿದ್ದರು. ಅಂದು ಅವರು ನಡೆದಾಡುತ್ತಿದ್ದ ಕಾಡುದಾರಿಗಳು ಈಗ ರೈಲು ಮಾರ್ಗಗಳಾಗಿ ರೂಪುಗೊಂಡಿವೆ. ಹಿಗಾಗಿ ರೈಲು ಮಾರ್ಗ ಗೋರ್ಬಾಯಿಗಳು ನೀಡಿದ ಕೊಡುಗೆ ಎಂದೇ ಬಣ್ಣಿಸಲಾಗುತ್ತಿದೆ. ಇಂದು ಗೋರ್ಬಾಯಿಗಳನ್ನು ದೇಶ, ವಿದೇಶಗಳಲ್ಲಿ ಗುರುತಿಸಬಹುದಾಗಿದೆ ಎಂದು ವಿವರಿಸಿದರು.
ಜಿ.ಪಂ ಉಪಾಧ್ಯಕ್ಷೆ ವೇದಾ ವಿಜಯಕುಮಾರ್ ಮಾತನಾಡಿ, ಮಹನೀಯ ಸೇವಾಲಾಲರು ಸಮುದಾಯದ ಉನ್ನತಿಗೆ ಶ್ರಮಿಸಿದ್ದಾರೆ. ಈ ಜನಾಂಗದ ಆಚಾರ, ವಿಚಾರ, ಉಡುಗೆ, ತೊಡುಗೆ ವಿಭಿನ್ನವಾಗಿವೆ. ನಿಮ್ಮಲ್ಲಿರುವ ಕಸೂತಿ ಕಲೆಯ ಜತೆಗೆ ಶಿಕ್ಷಣವಂತರಾಗಿ ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದರು.
ಜಿಲ್ಲಾಧಿಕಾರಿ ಕೆ.ಎ.ದಯಾನಂದ್, ಅಪರ ಜಿಲ್ಲಾಧಿಕಾರಿ ಜಿ.ಅನುರಾಧ, ಬಂಜಾರ ಗುರು ಸೈನಾಭಗತ್, ಕರ್ನಾಟಕ ಜೀವವೈವಿಧ್ಯ ಮಂಡಳಿ ಅಧ್ಯಕ್ಷ ಎಸ್.ಪಿ.ಶೇಷಾದ್ರಿ, ಜಿ.ಪಂ ಸದಸ್ಯೆ ಅನಿತಾಕುಮಾರಿ, ಬಂಜಾರ ಸಮುದಾಯದ ಜಿಲ್ಲಾ ಅಧ್ಯಕ್ಷ ಆರ್.ಸಿ.ನಾಯ್ಕ್, ಗೌರವಾಧ್ಯಕ್ಷ ನಾನ್ಯಾನಾಯ್ಕ್ ಮತ್ತಿತರರರು ಇದ್ದರು.