ಆ್ಯಪ್ನಗರ

ವರುಣಾರ್ಭಟಕ್ಕೆ ಬಾಪೂಜಿನಗರ ಜಲಾವೃತ

ಬುಧವಾರ ರಾತ್ರಿ ಸುರಿದ ಭಾರಿ ಮಳೆಗೆ ನಗರದ ಬಾಪೂಜಿ ನಗರ ಮತ್ತೆ ಜಲಾವೃತಗೊಂಡಿದ್ದು, ಇಲ್ಲಿನ ನಿವಾಸಿಗಳಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

Vijaya Karnataka 8 Nov 2019, 5:00 am
ಶಿವಮೊಗ್ಗ: ಬುಧವಾರ ರಾತ್ರಿ ಸುರಿದ ಭಾರಿ ಮಳೆಗೆ ನಗರದ ಬಾಪೂಜಿ ನಗರ ಮತ್ತೆ ಜಲಾವೃತಗೊಂಡಿದ್ದು, ಇಲ್ಲಿನ ನಿವಾಸಿಗಳಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
Vijaya Karnataka Web 7GANESH3_46


ಜಿಲ್ಲೆಯಲ್ಲಿಕಳೆದೆರಡು ದಿನಗಳಿಂದ ಅನಿರೀಕ್ಷಿತವಾಗಿ ಭರ್ಜರಿ ಮಳೆಯಾಗುತ್ತಿರುವುದರಿಂದ ಇಡೀ ಜನಜೀವನ ಅಸ್ತವ್ಯಸ್ತಗೊಂಡಿದೆ. ಬಾಪೂಜಿ ನಗರ ಟ್ಯಾಂಕ್‌ ಮೊಹಲ್ಲಾ, ಗಂಧರ್ವ ನಗರಗಳು ನೆರೆಗೆ ಸಿಲುಕಿಕೊಂಡಿದ್ದು, ಇಲ್ಲಿಯ ಹಲವು ಮನೆಗಳಿಗೆ ನೀರು ನುಗ್ಗಿದೆ.

ರಾಜ ಕಾಲುವೆಯೇ ಕಾರಣ:


ನಗರದಲ್ಲಿಜೋರು ಮಳೆ ಬಂದಾಗಲೆಲ್ಲಬಾಪೂಜಿ ನಗರದ ಜಲಾವೃತಗೊಳ್ಳುತ್ತದೆ. ಇದಕ್ಕೆ ಕಾರಣ ಇಲ್ಲಿನಿರ್ಮಾಣ ಮಾಡಿರುವ ರಾಜ ಕಾಲುವೆ.

ಕಳೆದ ವರ್ಷ ಇಲ್ಲಿನ ರಾಜಕಾಲುವೆ ದುರಸ್ತಿಯಿಂದಾಗಿ ಪದೇ ಪದೇ ಸಮಸ್ಯೆ ಎದುರಾಗುತ್ತಿತ್ತು. ಹೀಗಾಗಿ ರಾಜಕಾಲುವೆ ತೆರವುಗೊಳಿಸಲಾಗಿತ್ತು. ಇದಕ್ಕೆ ತಾತ್ಕಾಲಿಕವಾಗಿ ಪೈಪ್‌ ಅಳವಡಿಕೆ ಮಾಡಲಾಗಿತ್ತು. ಆದರೆ ಬುಧವಾರ ರಾತ್ರಿ ಸುರಿದ ಭಾರಿ ಮಳೆಗೆ ಅಪಾರ ಪ್ರಮಾಣದಲ್ಲಿನೀರು ಪೈಪ್‌ನಲ್ಲಿಹರಿಯಲು

ಸಾಧ್ಯವಾಗದೇ ಮನೆಗಳಿಗೆ ನುಗ್ಗಿದೆ. ಈಗಾಗಲೇ ಹೊಸ ಸೇತುವೆಗೆ ಟೆಂಡರ್‌ ಮುಗಿದ ಕಾಮಗಾರಿ ಆರಂಭವಾಗಬೇಕಿದೆ. ಆದರೆ, ಅದು ವಿಳಂಬವಾಗುತ್ತಿರುವುದರಿಂದ ಪದೇ ಪದೇ ಈ ಭಾಗದ ಜನರು ಸಂಕಷ್ಟಪಡುವಂತಾಗಿದೆ.

ಆಯುಕ್ತರ ಪೋನ್‌ ಆಫ್‌, ಜನರು ಗರಂ: ರಾತೋ ರಾತ್ರಿ ಸುರಿದ ಮಳೆಗೆ ಬಾಪೂಜಿ ನಗರದ ಸುಮಾರು 100ಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿ, ಮನೆಯಲ್ಲಿದ್ದ ವಸ್ತುಗಳೆಲ್ಲತೇಲುತ್ತಿದ್ದವು. ರಾತ್ರಿ ವೇಳೆ ಏನು ಮಾಡಬೇಕೆಂದು ದಿಕ್ಕುತೋಚದ ಜನ ಇಡೀರಾತ್ರಿ ನಿದ್ದೆ ಇಲ್ಲದೇ ಹಿಡಿ ಶಾಪ ಹಾಕಿದರು. ರಾತ್ರಿಯೇ ಪಾಲಿಕೆ ಅಧಿಕಾರಿಗಳಿಗೆ ಪೋನ್‌ ಹಾಯಿಸಿದ್ದಾರೆ. ಈ ವೇಳೆ ಆಯುಕ್ತ ಚಿದಾನಂದ್‌ ವಟಾರೆ ಪೋನ್‌ ಸ್ವಿಚ್‌ ಆಫ್‌ ಆಗಿದ್ದು, ಜನರ ಆಕ್ರೋಶಕ್ಕೆ ಕಾರಣವಾಗಿತ್ತು.

ಬೆಳಗ್ಗೆ ನೀರು ನುಗ್ಗಿದ ಪ್ರದೇಶಕ್ಕೆ ಆಯುಕ್ತರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ರಾಜಕಾಲುವೆ ದುಸ್ಥಿತಿ ಪರಿಶೀಲಿಸಿದ ಅವರು, ತಾತ್ಕಾಲಿಕವಾಗಿ ನೀರು ಹರಿಸಲು ಪರಾರ‍ಯಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಆದರೆ ರಾತ್ರಿ ದಿಢೀರನೆ ಸುರಿದ ಭಾರಿ ಮಳೆಗೆ ರಾಜಕಾಲುವೆ ತುಂಬಿ ಉಕ್ಕಿದ ನೀರು ಸರಾಗವಾಗಿ ಹರಿಯದೆ ಅಕ್ಕಪಕ್ಕದ ರಸ್ತೆಗಳ ಮನೆಗಳಿಗೆ ನುಗ್ಗಿ ಅಪಾರ ಪ್ರಮಾಣದ ಹಾನಿಯಾಗಿದೆ. ಪಾಲಿಕೆ ಸದಸ್ಯರಾದ ಸುರೇಖಾ ಮುರಳೀಧರ್‌, ಯೋಗೀಶ್‌ ಸೇರಿದಂತೆ ಅಧಿಕಾರಿಗಳು ಭೇಟಿ ನೀಡಿ ಸೂಕ್ತ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದ್ದಾರೆ.

------------------
ಗುರುವಾರವೂ ಭರ್ಜರಿ ಮಳೆ:
ಜಿಲ್ಲೆಯಲ್ಲಿಅನಿರೀಕ್ಷಿತವಾಗಿ ಸುರಿಯುತ್ತಿರುವ ಮಳೆ ಗುರುವಾರವೂ ಭಾರೀ ಪ್ರಮಾಣದಲ್ಲೇ ಸುರಿದಿದೆ. ಮಳೆಗೆ ರಸ್ತೆಯ ಹಲವು ರಸ್ತೆಗಳು ಜಲಾವೃತಗೊಂಡಿದ್ದು ತಗ್ಗು ಪ್ರದೇಶದ ಜನರು ಮತ್ತಷ್ಟು ಭಯಭೀತರಾಗಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ