ಆ್ಯಪ್ನಗರ

ಬಸವಣ್ಣ ವಿಶ್ವ ಧರ್ಮ ಪ್ರತಿಪಾದಕ

ಮಹಾತ್ಮ ಸಂತ ಗುರು ಬಸವಣ್ಣ ಅವರ ತತ್ವ ಸಂದೇಶಗಳು ಪ್ರತಿಯೊಬ್ಬರ ಬದುಕಿನಲ್ಲಿ ಅನುಷ್ಠಾನಗೊಂಡಾಗ ಮಾತ್ರ ಸಮಾಜದಲ್ಲಿ ಜೀವಂತಿಕೆ ಸ್ವರೂಪ ಪಡೆಯಲು ಸಾಧ್ಯ ಎಂದು ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಪಂಡಿತ ಕೆ.ಬಿ.ಸಂಗಮೇಶ್ವರ ಗವಾಯಿ ಅಭಿಪ್ರಾಯಪಟ್ಟರು.

Vijaya Karnataka 9 May 2019, 5:00 am
ಶಿವಮೊಗ್ಗ : ಮಹಾತ್ಮ ಸಂತ ಗುರು ಬಸವಣ್ಣ ಅವರ ತತ್ವ ಸಂದೇಶಗಳು ಪ್ರತಿಯೊಬ್ಬರ ಬದುಕಿನಲ್ಲಿ ಅನುಷ್ಠಾನಗೊಂಡಾಗ ಮಾತ್ರ ಸಮಾಜದಲ್ಲಿ ಜೀವಂತಿಕೆ ಸ್ವರೂಪ ಪಡೆಯಲು ಸಾಧ್ಯ ಎಂದು ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಪಂಡಿತ ಕೆ.ಬಿ.ಸಂಗಮೇಶ್ವರ ಗವಾಯಿ ಅಭಿಪ್ರಾಯಪಟ್ಟರು.
Vijaya Karnataka Web SMR-8ganesh2


ನಗರದ ರಾಷ್ಟ್ರೀಯ ಬಸವದಳ ಟ್ರಸ್ಟ್‌ ವತಿಯಿಂದ ವಿನೋಬನಗರದ ಬಸವಮಂಟಪದಲ್ಲಿ ಬುಧವಾರ ಏರ್ಪಡಿಸಿದ್ದ ದಾರ್ಶನಿಕ ಗುರು ಬಸವಣ್ಣ ಅವರ 886ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಗುರು ಬಸವಣ್ಣ ಅವರು ಜಗತ್ತಿಗೆ ಆದರ್ಶಪ್ರಾಯರು. ಅವರ ಸಂದೇಶಗಳು ಪ್ರತಿಯೊಬ್ಬ ಮಾನವನಿಗೂ ಅತ್ಯಂತ ಅವಶ್ಯಕವಾಗಿದ್ದು, ಅವುಗಳನ್ನು ಇಡೀ ವಿಶ್ವವೇ ಒಪ್ಪುವ ಕಾಲ ಸನ್ನಿಹವಾಗಿದೆ. ಅವರು ನೀಡಿದ ಮಾನವೀಯ ಪ್ರೇಮದ ಧರ್ಮ ಅದು ವಿಶ್ವ ಧರ್ಮ ಎನಿಸಿಕೊಂಡಿದೆ ಎಂದರು.

ಕಾರ್ಯಕ್ರಮದಲ್ಲಿ ನಿರ್ವಿಕಲ್ಪ ಯೋಗೀಶ್‌ ಪ್ರಾಸ್ತವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಶರಣ ಪಂಡಿತ ಸಂಗಮೇಶ್ವರ ಗವಾಯಿಗಳನ್ನು ಸತ್ಕರಿಸಲಾಯಿತು. ಕಾರ್ಯಕ್ರಮ ಅಂಗವಾಗಿ ಸಾಮೂಹಿಕ ಇಷ್ಟಲಿಂದ ಪೂಜೆ, ಬಸವೇಶ್ವರ ಪೂಜಾ ವ್ರತ ಜರುಗಿದವು. ಟ್ರಸ್ಟ್‌ ಅಧ್ಯಕ್ಷ ರಾಮಪ್ಪ ಅಧ್ಯಕ್ಷತೆ ವಹಿಸಿದ್ದರು. ಬಾಣೂರು ಹಿರಣ್ಣಯ್ಯ, ಬಾಳಾನಂದ, ಶಿವಗಂಗಮ್ಮ, ಅನ್ನಪೂರ್ಣಮ್ಮ ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ