ಆ್ಯಪ್ನಗರ

ನಮ್ಮಲ್ಲೇ ‘ಬಸವ’ನೆಡೆಗೆ ಉದಾಸೀನ

ಬಸವ ತತ್ವವನ್ನು ಇಡೀ ಜಗತ್ತು ಒಪ್ಪಿಕೊಂಡಿದೆ. ಇದಕ್ಕೆ ದುಬೈ, ಲಂಡನ್‌ನಲ್ಲಿ ಪ್ರತಿಷ್ಠಾಪಿಸಿರುವ ಬಸವೇಶ್ವರರ ಮೂರ್ತಿಯೇ ಸಾಕ್ಷಿ. ಆದರೆ, ಶಿವಮೊಗ್ಗದಲ್ಲಿ ಪುತ್ಥಳಿ ತಂದು ಹಲವು ತಿಂಗಳಾದರೂ ಅದಕ್ಕೆ ಸೂಕ್ತ ಸ್ಥಾನ ಕೊಡಿಸುವಲ್ಲಿ ಇಲ್ಲಿಯ ಅಧಿಕಾರಿವರ್ಗ ಹಾಗೂ ಜನಪ್ರತಿನಿಧಿಗಳು ವಿಫಲರಾಗಿದ್ದಾರೆ ಎಂದು ಬೆಕ್ಕಿನಕಲ್ಮಠದ ಡಾ. ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.

Vijaya Karnataka 8 May 2019, 5:00 am
ಶಿವಮೊಗ್ಗ : ಬಸವ ತತ್ವವನ್ನು ಇಡೀ ಜಗತ್ತು ಒಪ್ಪಿಕೊಂಡಿದೆ. ಇದಕ್ಕೆ ದುಬೈ, ಲಂಡನ್‌ನಲ್ಲಿ ಪ್ರತಿಷ್ಠಾಪಿಸಿರುವ ಬಸವೇಶ್ವರರ ಮೂರ್ತಿಯೇ ಸಾಕ್ಷಿ. ಆದರೆ, ಶಿವಮೊಗ್ಗದಲ್ಲಿ ಪುತ್ಥಳಿ ತಂದು ಹಲವು ತಿಂಗಳಾದರೂ ಅದಕ್ಕೆ ಸೂಕ್ತ ಸ್ಥಾನ ಕೊಡಿಸುವಲ್ಲಿ ಇಲ್ಲಿಯ ಅಧಿಕಾರಿವರ್ಗ ಹಾಗೂ ಜನಪ್ರತಿನಿಧಿಗಳು ವಿಫಲರಾಗಿದ್ದಾರೆ ಎಂದು ಬೆಕ್ಕಿನಕಲ್ಮಠದ ಡಾ. ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.
Vijaya Karnataka Web SMG-0705-2-15-7SMG7


ಬಸವೇಶ್ವರ ವೀರಶೈವ ಸಮಾಜ ಸೇವಾ ಸಂಘವು ನಗರದ ಕುವೆಂಪು ರಂಗಮಂದಿರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು, ಪುತ್ಥಳಿ ಪ್ರತಿಷ್ಠಾಪನೆಗೆ ಇನ್ನು ಮುಂದಾದರೂ ಗಮನಹರಿಸುತ್ತಾರೆಯೇ ಎಂಬುವುದನ್ನು ಕಾದುನೋಡಬೇಕಿದೆ ಎಂದರು.

* ಕಾಯಕದ ಬಗ್ಗೆ ಅರಿವು ಮೂಡಿಲ್ಲ: ಜಾಗತಿಕ ಮಟ್ಟದಲ್ಲಿ ಕಾಯಕ ಕಲ್ಪನೆಯ ಬಗ್ಗೆ ಇರುವಷ್ಟು ಅರಿವು ಭಾರತೀಯರಲ್ಲಿ ಇನ್ನೂ ಮೂಡಿಲ್ಲ. ಸರಕಾರ ಸಾಕಷ್ಟು ಹಣ ಖರ್ಚು ಮಾಡಿ ವಚನ ಸಂಪುಟಗಳನ್ನು ಸಿದ್ಧಪಡಿಸಿದೆ. ಅದನ್ನು ಖರೀದಿಸುವ ಮತ್ತು ಓದುವ ವ್ಯವಧಾನ ಜನರಲ್ಲಿ ಇಲ್ಲ ಎಂದು ಹೇಳಿದರು.

ಜಗತ್ತಿನಲ್ಲಿಂದು ಎಲ್ಲರೆಡೆಗೂ ಅನುಮಾನದಿಂದ ಕಾಣುವ ಸ್ಥಿತಿ ಇದೆ. ಮಾನವ ಆತ್ಮಾಹುತಿ ಬಾಂಬರ್‌ಗಳು ಎಲ್ಲಿಂದ ಬೇಕಾದರೂ ಬರಬಹುದು ಎಂಬ ಪ್ರಕ್ಷುಬ್ಧ ಸ್ಥಿತಿ ಇದೆ. ಇಂತಹ ಸಂದರ್ಭದಲ್ಲಿ ಇಡೀ ವಿಶ್ವಕ್ಕೆ ಆಧ್ಯಾತ್ಮ ಮಾರ್ಗದರ್ಶನ ಮಾಡಿದ ಉಚ್ಚ ಸ್ಥಾನದಲ್ಲಿರುವ ಭಾರತದ ಕಡೆಗೆ ಎಲ್ಲರೂ ಮುಖ ಮಾಡಿರುವಾಗ ನಾವೆಲ್ಲರೂ ಇನ್ನಿತರ ದೇಶಗಳೆಡೆಗೆ ನೋಡುತ್ತಿದ್ದೇವೆ ಎಂದರು.

ಬಸವಣ್ಣ ನಮಗೆ ನಡೆ, ನುಡಿ, ಉಣ್ಣುವುದು ಹಾಗೂ ಉಡುವುದು ಎಲ್ಲವನ್ನೂ ಕಲಿಸಿಕೊಟ್ಟಿದ್ದಾರೆ. ಆದರೆ, ಅವುಗಳನ್ನು ಆಚರಣೆಗೆ ತರುತ್ತಿಲ್ಲ. ಯಾವುದೇ ಮೂಲಸೌಲಭ್ಯಗಳಿಲ್ಲದ ದೇಶಗಳು ಸಮೃದ್ಧವಾಗಿ ಬೆಳೆಯುತ್ತಿವೆ. ಆರ್ಥಿಕವಾಗಿ ಸದೃಢವಾಗಿವೆ. ಅದಕ್ಕೆ ಕಾರಣ ಅವರಲ್ಲಿರುವ ಕಾಯಕ ಪ್ರಜ್ಞೆ. ನಾವಿನ್ನೂ ಕಾಯಕ ಕಲ್ಪನೆಯನ್ನೇ ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

ನಮ್ಮ ಧರ್ಮದ ಬಗ್ಗೆ ಪ್ರೀತಿ ಇಟ್ಟುಕೊಂಡು, ಇನ್ನೊಂದು ಧರ್ಮದೆಡೆಗೆ ಗೌರವ ಭಾವನೆಯನ್ನು ತಳೆಯಬೇಕು ಎಂದು ಸಲಹೆ ನೀಡಿದರು.

ಬಸವ ಕೇಂದ್ರದ ಬಸವ ಮರುಳಸಿದ್ಧ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ವಿಧಾನ ಪರಿಷತ್‌ ಸದಸ್ಯ ಆಯನೂರು ಮಂಜುನಾಥ್‌, ನಿವೃತ್ತ ಪ್ರಾಂಶುಪಾಲ ಸಿ.ಬಿ. ಪಂಚಾಕ್ಷರಯ್ಯ, ಬಸವೇಶ್ವರ ವೀರಶೈವ ಸಮಾಜ ಸೇವಾ ಸಂಘದ ಉಪಾಧ್ಯಕ್ಷ ಎಂ.ಎನ್‌. ಒಡೆಯರ್‌, ಪಾಲಿಕೆ ಸದಸ್ಯ ಎಚ್‌.ಸಿ. ಯೋಗೇಶ್‌, ವಿಶ್ವಾಸ್‌, ರುದ್ರಮುನಿ ಎಸ್‌. ಸಜ್ಜನ್‌, ಎಚ್‌.ಎಸ್‌. ರುದ್ರಸ್ವಾಮಿ, ಸಿ.ಎಸ್‌. ಪಂಚಾಕ್ಷರಯ್ಯ, ಪಿ. ರುದ್ರೇಶ್‌, ಜೆ.ಶಕುಂತಲಾ ಟಿ.ಬಿ. ಜಗದೀಶ್‌, ವಿ.ಸಿ.ಎಸ್‌.ಮೂರ್ತಿ ಇತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ