ಆ್ಯಪ್ನಗರ

ಮಾದಕ ವಸ್ತು ಬಗ್ಗೆ ಎಚ್ಚರವಿರಲಿ

ಯುವ ಸಮೂಹ ಮಾದಕ ವಸ್ತುಗಳತ್ತ ಗಮನ ಹರಿಸುತ್ತಿರುವುದು ವಿಷಾದನೀಯ. ವಿದ್ಯಾರ್ಥಿಗಳು ಮಾದಕ ವಸ್ತುಗಳ ಬಗ್ಗೆ ಎಚ್ಚರದಿಂದ ಇರಬೇಕು, ಮಾದಕ ವಸ್ತುಗಳು ಬದುಕನ್ನು ನಾಶಗೊಳಿಸುತ್ತವೆ ಎಂದು ಪಟ್ಟಣದ ಪಿಎಸ್‌ಐ ರಾಜಶೇಖರ್‌ ಹೇಳಿದರು.

Vijaya Karnataka 28 Jun 2019, 5:00 am
ರಿಪ್ಪನ್‌ಪೇಟೆ: ಯುವ ಸಮೂಹ ಮಾದಕ ವಸ್ತುಗಳತ್ತ ಗಮನ ಹರಿಸುತ್ತಿರುವುದು ವಿಷಾದನೀಯ. ವಿದ್ಯಾರ್ಥಿಗಳು ಮಾದಕ ವಸ್ತುಗಳ ಬಗ್ಗೆ ಎಚ್ಚರದಿಂದ ಇರಬೇಕು, ಮಾದಕ ವಸ್ತುಗಳು ಬದುಕನ್ನು ನಾಶಗೊಳಿಸುತ್ತವೆ ಎಂದು ಪಟ್ಟಣದ ಪಿಎಸ್‌ಐ ರಾಜಶೇಖರ್‌ ಹೇಳಿದರು.
Vijaya Karnataka Web SMR-26RPT2


ಪಟ್ಟಣದ ಮೇರಿ ಮಾತಾ ಪದವಿಪೂರ್ವ ಕಾಲೇಜಿನÜಲ್ಲಿ ಬುಧವಾರ ಪೊಲೀಸ್‌ ಇಲಾಖೆ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಾದಕ ವಸ್ತುಗಳ ವಿರೋಧಿ ದಿನಾಚರಣೆ ಯಲ್ಲಿ ಅವರು ಮಾತನಾಡಿದರು.

ಹದಿಹರೆಯದ ವಯಸ್ಸಿನವರು ಮತ್ತು ಮಕ್ಕಳು ಮಾದಕ ಪದಾರ್ಥ ಸೇವನೆ ಮಾಡಿ ಮಾನಸಿಕ ಖಿನ್ನತೆಗೆ ಒಳಗಾಗುತ್ತಿದ್ದಾರೆ. ಅಮಲು ಪದಾರ್ಥ ಸೇವನೆ ಆರೋಗ್ಯ ಮೇಲೆ ತೀವ್ರ ದುಷ್ಪರಿಣಾಮ ಬೀರಿ ಅನಾರೋಗ್ಯಕ್ಕೆ ತುತ್ತಾಗುವುದಲ್ಲದೇ ಕೊಲೆ, ದರೋಡೆ, ಕಳ್ಳತನ, ಸುಲಿಗೆಯಂತಹ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗುವಂತೆ ಮಾಡಿ ಸಮಾಜದ ಸ್ವಾಸ್ಥ್ಯ ಹಾಳುಗೆಡುವುತ್ತದೆ. ಜತೆಗೆ ಸಮಾಜದ ನೆಮ್ಮದಿ ಬದುಕಿಗೆ ಮಾರಕವಾಗುತ್ತದೆ ಎಂದರು.

ಕಾಲೇಜಿನ ಸಂಚಾಲಕ ಮಹೇಂದ್ರ, ಉಪನ್ಯಾಸಕರಾದ ಮಂಜಪ್ಪ, ಸುಜನ್‌, ಪಾವನ, ಅರ್ಚನ, ಚಿತ್ರಾ ಹಾಗೂ ಪೊಲೀಸ್‌ ಇಲಾಖೆಯ ಸಂತೋಷ್‌ಕುಮಾರ್‌, ಜಯಶೀಲ, ನಾಗಪ್ಪ, ರಮ್ಯ ಇತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ