ಆ್ಯಪ್ನಗರ

ನೀರು ಪೋಲಾಗದಂತೆ ಎಚ್ಚರ ವಹಿಸಿ

ಸುತ್ತಲಿನ ಸ್ವಚ್ಛತೆ, ವ್ಯಕ್ತಿಯ ಸ್ವಚ್ಛತೆ ಸಾಮಾಜಿಕ ಆರೋಗ್ಯಕ್ಕೆ ಸಹಕಾರಿ. ಸ್ವಚ್ಛತೆ ಬಗ್ಗೆ ಮತ್ತೊಬ್ಬರಿಂದ ಹೇಳಿಸುವ ಸ್ಥಿತಿ ನಿರ್ಮಾಣವಾಗಿರುವುದು ದುರದೃಷ್ಟಕರ ಎಂದು ಶಾಸಕ ಎಚ್‌.ಹಾಲಪ್ಪ ಹೇಳಿದರು.

Vijaya Karnataka 29 Jun 2019, 5:00 am
ಸಾಗರ: ಸುತ್ತಲಿನ ಸ್ವಚ್ಛತೆ, ವ್ಯಕ್ತಿಯ ಸ್ವಚ್ಛತೆ ಸಾಮಾಜಿಕ ಆರೋಗ್ಯಕ್ಕೆ ಸಹಕಾರಿ. ಸ್ವಚ್ಛತೆ ಬಗ್ಗೆ ಮತ್ತೊಬ್ಬರಿಂದ ಹೇಳಿಸುವ ಸ್ಥಿತಿ ನಿರ್ಮಾಣವಾಗಿರುವುದು ದುರದೃಷ್ಟಕರ ಎಂದು ಶಾಸಕ ಎಚ್‌.ಹಾಲಪ್ಪ ಹೇಳಿದರು.
Vijaya Karnataka Web SMR-26SGR1


ಇಲ್ಲಿನ ವೀರಶೈವ ಕಲ್ಯಾಣ ಮಂಟಪದಲ್ಲಿ ಬುಧವಾರ ತಾಲೂಕು ಪಂಚಾಯಿತಿ ಏರ್ಪಡಿಸಿದ್ದ ಸ್ವಚ್ಛಮೇವ ಜಯತೆ ಮತ್ತು ಜಲಾಮೃತ ತಾಲೂಕು ಮಟ್ಟದ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಸ್ವಚ್ಛತೆರಹಿತ ಬದುಕು ನಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಕೇಂದ್ರ ಸರಕಾರ ಸ್ವಚ್ಛಭಾರತ್‌ ಕಲ್ಪನೆಯಡಿ ಅನೇಕ ಕಾರ್ಯಕ್ರಮ ರೂಪಿಸಿದೆ. ಕಾರ್ಯಕ್ರಮ ಸಾರ್ಥಕವಾಗಲು ಅಧಿಕಾರಿಗಳ ಜತೆ ಸಾರ್ವಜನಿಕರು ಕೈಜೋಡಿಸಬೇಕು. ಸ್ವಚ್ಛತೆ ಮತ್ತು ಕಸ ವಿಲೇವಾರಿ ಹೊರೆಯಾಗದಂತೆ ನಮ್ಮ ದಿನಚರಿ ರೂಪಿಸಿಕೊಳ್ಳಬೇಕು. ವಿನಾಕಾರಣ ನೀರು ಪೋಲಾಗದಂತೆ ಎಚ್ಚರ ವಹಿಸಬೇಕೆಂದರು. ತಾಪಂ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ಮಾತನಾಡಿದರು. ವೇದಿಕೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶಿವರಾಮೆಗೌಡ, ತಾಪಂ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಕಲಸೆ ಚಂದ್ರಪ್ಪ, ಇಒ ಮಂಜುನಾಥಸ್ವಾಮಿ, ಸಹಾಯಕ ಕೃಷಿ ಅಧಿಕಾರಿ ಎಸ್‌.ಅಶೋಕ್‌, ಕ್ಷೇತ್ರ ಶಿಕ್ಷ ಣಾಧಿಕಾರಿ ಕೆ.ಆರ್‌.ಬಿಂಬ, ತಾಲೂಕು ಆರೋಗ್ಯಾಧಿಕಾರಿ ಡಾ. ಮುನಿವೆಂಕಟರಾಜು, ತಾಪಂ ಮತ್ತು ನಗರಸಭೆ ಸದಸ್ಯರು ಇತರರು ಇದ್ದರು. ಸುಶೀಲಬಾಯಿ ಪ್ರಾರ್ಥಿಸಿ, ಡಾ.ರಂಗಸ್ವಾಮಿ ಸ್ವಾಗತಿಸಿ, ಕೃಷ್ಣಪ್ಪ ನಿರೂಪಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ