ಆ್ಯಪ್ನಗರ

ಮಾಸೂರು ಕಂಪನಿಗೆ ಅತ್ಯುತ್ತಮ ನಿರ್ವಹಣಾ ಪ್ರಶಸ್ತಿ

ತೋಟಗಾರಿಕಾ ಇಲಾಖೆಯಿಂದ ಪ್ರಾಯೋಜಿತವಾದ ತಾಲೂಕಿನ ಮಾಸೂರಿನ ಮಲೆನಾಡು ತೋಟಗಾರಿಕಾ ಉತ್ಪಾದಕರ ಕಂಪನಿಗೆ ತೋಟಗಾರಿಕಾ ಇಲಾಖೆ ಹಾಗೂ ಫೋರ್‌ಟೆಲ್‌ ಸಂಸ್ಥೆ ವತಿಯಿಂದ ಅತ್ಯುತ್ತಮ ನಿರ್ವಹಣಾ ಪ್ರಶಸ್ತಿ ಘೋಷಿಸಲಾಗಿದೆ. ಈ ಸಂಬಂಧ ಇತ್ತೀಚೆಗೆ ಬೆಂಗಳೂರಿನ ಭಾರತೀಯ ವಿಜ್ಞಾನ ಕೇಂದ್ರದ ಸಭಾಂಗಣದಲ್ಲಿ ನಡೆದ ಎಫ್‌ಪಿಓಗಳ ಖರೀದಿದಾರರು ಮತ್ತು ಮಾರಾಟಗಾರರ ಸಮ್ಮೇಳನದಲ್ಲಿ ಈ ಪ್ರಶಸ್ತಿ ವಿತರಿಸಲಾಗಿದೆ.

Vijaya Karnataka 15 Jul 2019, 5:00 am
ಸಾಗರ: ತೋಟಗಾರಿಕಾ ಇಲಾಖೆಯಿಂದ ಪ್ರಾಯೋಜಿತವಾದ ತಾಲೂಕಿನ ಮಾಸೂರಿನ ಮಲೆನಾಡು ತೋಟಗಾರಿಕಾ ಉತ್ಪಾದಕರ ಕಂಪನಿಗೆ ತೋಟಗಾರಿಕಾ ಇಲಾಖೆ ಹಾಗೂ ಫೋರ್‌ಟೆಲ್‌ ಸಂಸ್ಥೆ ವತಿಯಿಂದ ಅತ್ಯುತ್ತಮ ನಿರ್ವಹಣಾ ಪ್ರಶಸ್ತಿ ಘೋಷಿಸಲಾಗಿದೆ. ಈ ಸಂಬಂಧ ಇತ್ತೀಚೆಗೆ ಬೆಂಗಳೂರಿನ ಭಾರತೀಯ ವಿಜ್ಞಾನ ಕೇಂದ್ರದ ಸಭಾಂಗಣದಲ್ಲಿ ನಡೆದ ಎಫ್‌ಪಿಓಗಳ ಖರೀದಿದಾರರು ಮತ್ತು ಮಾರಾಟಗಾರರ ಸಮ್ಮೇಳನದಲ್ಲಿ ಈ ಪ್ರಶಸ್ತಿ ವಿತರಿಸಲಾಗಿದೆ.
Vijaya Karnataka Web SMR-14sgr11


ಮಾಸೂರಿನ ಎಫ್‌ಪಿಓ 2016ರಲ್ಲಿ ಕಂಪನಿ ಕಾಯ್ದೆಯಡಿ ನೋಂದಣಿಗೊಂಡಿದ್ದು, ನೋಂದಾಯಿತ ರೈತರಿಗೆ ಸರಕಾರ ನಿಗದಿಪಡಿಸಿದ ದರದಲ್ಲಿ ಕೃಷಿ ಪರಿಕರಗಳ ಖರೀದಿ ಮತ್ತು ಮಾರಾಟ ವಹಿವಾಟು ನಡೆಸಿದೆ. ಮೂರು ವರ್ಷದಲ್ಲಿ ಸುಮಾರು ಮೂರೂವರೆ ಕೋಟಿ ರೂ. ವ್ಯವಹಾರ ನಡೆಸಿ ನಾಲ್ಕೂವರೆ ಲಕ್ಷ ರೂ.ಗಳ ನಿವ್ವಳ ಲಾಭ ಗಳಿಸಿರುವುದನ್ನು ಪ್ರಶಸ್ತಿ ಆಯ್ಕೆಯಲ್ಲಿ ಪರಿಗಣಿಸಲಾಗಿದೆ.

ಆರಂಭಿಕ ಹಂತದಲ್ಲಿ ತೋಟಗಾರಿಕಾ ಇಲಾಖೆಯಿಂದ ವ್ಯಾವಹಾರಿಕ ಬಂಡವಾಳ ಹಾಗೂ ಕೃಷಿ ಬಳಕೆ ಯಂತ್ರೋಪಕರಣ ಖರೀದಿಗೆ ಶೇ. 90ರ ಅನುದಾನದಲ್ಲಿ 3ಲಕ್ಷ ರೂ. ಅನುದಾನ ಸಿಕ್ಕಿತ್ತು. ಇದರಲ್ಲಿ ಖರೀದಿಸಿದ ಯಂತ್ರಗಳನ್ನು ರೈತರಿಗೆ ಕಡಿಮೆ ದರದಲ್ಲಿ ಬಾಡಿಗೆ ನೀಡುವ ಕ್ರಮ ಕೈಗೊಳ್ಳಲಾಗಿತ್ತು ಎಂದು ಪ್ರಶಸ್ತಿ ಸಂಭ್ರಮದಲ್ಲಿದ್ದ ಕಂಪನಿಯ ಅಧ್ಯಕ್ಷ ಬಿ. ದುರ್ಗಪ್ಪ ಹಿರೇನೆಲ್ಲೂರು ತಿಳಿಸಿದರು. ಕಂಪನಿಗೆ ಮಾಸೂರು ಸುತ್ತಮುತ್ತಲಿನ 30 ಗ್ರಾಮಗಳ ಸಾವಿರ ರೈತರು ಷೇರುದಾರರಾಗಿದ್ದಾರೆ. 15 ಜನರ ನಿರ್ದೇಶಕ ಮಂಡಳಿಯಿದೆ. ಮುಂದಿನ ದಿನಗಳಲ್ಲಿ ತಾಂತ್ರಿಕ ತೊಡಕು ನಿವಾರಿಸಿ ರೈತರ ಬೆಳೆಗಳಿಗೆ ಮಾರುಕಟ್ಟೆ ಒದಗಿಸಿಕೊಡಲಿದ್ದೇವೆ ಎಂದು ಸಂಸ್ಥೆಯ ಮುಖ್ಯಕಾರ್ಯನಿರ್ವಹಣಾಧಿಕಾರಿ ರಾಮಕೃಷ್ಣ ಹೆಗಡೆ ವಿಶ್ವಾಸ ವ್ಯಕ್ತಪಡಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ