ಆ್ಯಪ್ನಗರ

ಪೇದೆಗೆ ಬೈಕ್‌ ಡಿಕ್ಕಿ

ಕರ್ತವ್ಯ ನಿರತ ಪೊಲೀಸ್‌ ಸಿಬ್ಬಂದಿಗೆ ಬೈಕ್‌ ಸವಾರ ಡಿಕ್ಕಿ ಹೊಡೆದು ಪರಾರಿಯಾದ ಘಟನೆ ಇಲ್ಲಿನ ಊರಗಡೂರು ಚೆಕ್‌ ಪೋಸ್ಟ್‌ ಬಳಿ ಗುರುವಾರ ನಡೆದಿದೆ.

Vijaya Karnataka 17 Apr 2020, 5:00 am
ಶಿವಮೊಗ್ಗ: ಕರ್ತವ್ಯ ನಿರತ ಪೊಲೀಸ್‌ ಸಿಬ್ಬಂದಿಗೆ ಬೈಕ್‌ ಸವಾರ ಡಿಕ್ಕಿ ಹೊಡೆದು ಪರಾರಿಯಾದ ಘಟನೆ ಇಲ್ಲಿನ ಊರಗಡೂರು ಚೆಕ್‌ ಪೋಸ್ಟ್‌ ಬಳಿ ಗುರುವಾರ ನಡೆದಿದೆ.
Vijaya Karnataka Web bike hit to the constable
ಪೇದೆಗೆ ಬೈಕ್‌ ಡಿಕ್ಕಿ


ಕೊರೊನಾ ಗಸ್ತಿನಲ್ಲಿತುಂಗಾನಗರ ಪೊಲೀಸ್‌ ಠಾಣೆ ಸಿಬ್ಬಂದಿ ಚಿದಾನಂದ್‌ ಎಂಬುವವರಿಗೆ ಬೈಕ್‌ ಡಿಕ್ಕಿ ಹೊಡೆದಿದ್ದು, ಸಣ್ಣ ಪುಟ್ಟ ಗಾಯಗಳಾಗಿವೆ. ಎಂಆರ್‌ಎಸ್‌ ಕಡೆಯಿಂದ ಬಂದ ಬೈಕ್‌ ಸವಾರ ಚೆಕ್‌ ಪೋಸ್ಟ್‌ ಬಳಿ ಬಂದು ಪೇದೆ ಚಿದಾನಂದ್‌ ಅವರಿಗೆ ಗುದ್ದಿದ್ದಾನೆ. ಟ್ರಿಪಲ್‌ ರೈಡಿಂಗ್‌ ಮಾಡುತ್ತಿದ್ದ ಬೈಕ್‌ ಸವಾರ ಗುದ್ದಿದ್ದೇ ಬೈಕ್‌ ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾನೆ. ಗಾಯಗೊಂಡಿರುವ ಪೇದೆಯನ್ನು ಮ್ಯಾಕ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿದೆ.
===
ಬೈಕ್‌, ಕಾರು ಕಳ್ಳರ ಬಂಧನ
ಶಿವಮೊಗ್ಗ: ಬೈಕ್‌, ಕಾರು ಕಳ್ಳತನ ಮಾಡಿ ಅವುಗಳನ್ನು ಮಾರ್ಪಡಿಸಿ ಮಾರಾಟ ಮಾಡುತ್ತಿದ್ದವರನ್ನು ಪೊಲೀಸರು ಬಂಧಿಸಿದ್ದಾರೆ.

ಹಾರನಹಳ್ಳಿ ಬಳಿಯ ಶೆಟ್ಟಿಕೆರೆ ಗ್ರಾಮದ ಸಂದೀಪ್‌(25), ಚೋರಡಿಯ ಆಸೀಫ್‌ (17), ರಂಜನ್‌ (24) ಬಂಧಿತರು.

ಖಚಿತ ಮಾಹಿತಿ ಮೇರೆಗೆ ಚೋರಡಿ ಗ್ರಾಮದಲ್ಲಿದಾಳಿ ನಡೆಸಿದ ಪೊಲೀಸರ ತಂಡ ಇವರನ್ನು ಬಂಧಿಸಿ, ಇವರಿಂದ 9 ಬೈಕ್‌, 1 ಕಾರು ವಶಕ್ಕೆ ಪಡೆಯಲಾಗಿದೆ. ಕಾರ್ಯಾಚರಣೆಯಲ್ಲಿಪಿಎಸ್‌ಐ ನವೀನ್‌ ಕುಮಾರ್‌, ಪೇದೆ ಶಿವರಾಜ್‌, ಪ್ರವೀಣ್‌, ನಿತಿನ್‌, ಹುಚ್ಚರಾಯಪ್ಪ ಇದ್ದರು. ಕುಂಸಿ ಪೊಲೀಸ್‌ ಠಾಣೆಯಲ್ಲಿಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ