ಆ್ಯಪ್ನಗರ

ಬಿಜೆಪಿ ಅಭ್ಯರ್ಥಿಗೆ ಬೆಂಬಲ ವಾಪಸ್‌

ತಾಲೂಕಿನ ಸಾಲೂರು ಗ್ರಾ.ಪಂ. ಸದಸ್ಯೆ ರೇಣುಕಮ್ಮ ತಾವು ಈ ಹಿಂದೆ ಬಿಜೆಪಿ ಬೆಂಬಲಿತ ಅಧ್ಯಕ್ಷ ಅಭ್ಯರ್ಥಿಗೆ ನೀಡಿದ್ದ ಬೆಂಬಲ ವಾಪಸ್‌ ಪಡೆಯುವುದಾಗಿ ಹೇಳಿದರು.

Vijaya Karnataka 8 Nov 2019, 5:00 am
ಶಿಕಾರಿಪುರ: ತಾಲೂಕಿನ ಸಾಲೂರು ಗ್ರಾ.ಪಂ. ಸದಸ್ಯೆ ರೇಣುಕಮ್ಮ ತಾವು ಈ ಹಿಂದೆ ಬಿಜೆಪಿ ಬೆಂಬಲಿತ ಅಧ್ಯಕ್ಷ ಅಭ್ಯರ್ಥಿಗೆ ನೀಡಿದ್ದ ಬೆಂಬಲ ವಾಪಸ್‌ ಪಡೆಯುವುದಾಗಿ ಹೇಳಿದರು.
Vijaya Karnataka Web bjp candidate backed
ಬಿಜೆಪಿ ಅಭ್ಯರ್ಥಿಗೆ ಬೆಂಬಲ ವಾಪಸ್‌


ಪಟ್ಟಣದಲ್ಲಿಬುಧವಾರ ಸುದ್ದಿಗೋಷ್ಠಿಯಲ್ಲಿಅವರು ಮಾತನಾಡಿದರು. ತಾವು ಚಿಕ್ಕಾಪುರ ಗ್ರಾಮದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದು ತಮಗೆ ಎರಡನೇ ಅವಧಿಗೆ ಅಧ್ಯಕ್ಷ ಸ್ಥಾನ ನೀಡುವುದಾಗಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಭರವಸೆ ನೀಡಿದ್ದರಿಂದ ಅವರಿಗೆ ಬೆಂಬಲ ನೀಡಿದ್ದೆ. ಆದರೆ ಈಗಾಗಲೇ ನಾಲ್ಕು ಬಾರಿ ಅಧ್ಯಕ್ಷರ ಬದಲಾವಣೆ ಆಗಿದ್ದರೂ ತಮಗೆ ಅವಕಾಶ ಕಲ್ಪಿಸದೆ ವಚನ ಭ್ರಷ್ಟರಾಗಿದ್ದಾರೆ. ಇದಕ್ಕಾಗಿ ತಮ್ಮ ಬೆಂಬಲ ವಾಪಸ್‌ ಪಡೆಯುತ್ತೇನೆ ಎಂದರು.

--------
ಸಾಲೂರು ಗ್ರಾ.ಪಂ.ನ ಒಟ್ಟು 13ಸ್ಥಾನದಲ್ಲಿ5 ಬಿಜೆಪಿ ಬೆಂಬಲಿತ, 6 ಕಾಂಗ್ರೆಸ್‌ ಬೆಂಬಲಿತ, 2 ಸ್ವತಂತ್ರ ಅಭ್ಯರ್ಥಿಗಳಿದ್ದಾರೆ. ರೇಣುಕಮ್ಮ ಬೆಂಬಲ ವಾಪಸ್‌ ಪಡೆದ ಕಾರಣಕ್ಕೆ ಆಡಳಿತ, ಪ್ರತಿ ಪಕ್ಷ ಸದಸ್ಯರು ಸಮಬಲ ಸಾಧಿಸಿದಂತಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ