ಆ್ಯಪ್ನಗರ

‘ಅಚ್ಛೇ ದಿನ್‌ ತರಲಿಲ್ಲ ಬಿಜೆಪಿ’

ಹಿಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೀಡಿದ ಭರವಸೆಗಳನ್ನು ಈಡೇರಿಸಿದ್ದು ಎಷ್ಟು ಎಂಬುದರ ಕುರಿತು ಜನರಿಗೆ ಮಾಹಿತಿ ನೀಡಲಿ. ದೇಶವನ್ನು ಗುಜರಾತ್‌ ಮಾದರಿಯಲ್ಲಿ ಅಭಿವೃದ್ಧಿಗೊಳಿಸಿ ಅಚ್ಛೇದಿನ್‌ ತರಲಾಗುವುದು ಎಂಬ ಬಿಜೆಪಿ ಭರವಸೆ ಹುಸಿ ಆಗಿದೆ. ಸುಳ್ಳುಗಾರರ ಕೂಟ ಬಿಜೆಪಿ ಜನರಲ್ಲಿ ಭಾವನೆಗಳನ್ನು ಕೆರಳಿಸಲು ಕುಟಿಲ ತಂತ್ರ ಮಾಡುತ್ತಿದೆ ಎಂದು ಕಾಂಗ್ರೆಸ್‌ ಮುಖಂಡ ಅಮ್ರಪಾಲಿ ಸುರೇಶ್‌ ಆರೋಪಿಸಿದ್ದಾರೆ.

Vijaya Karnataka 30 Mar 2019, 5:00 am
ತೀರ್ಥಹಳ್ಳಿ: ಹಿಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೀಡಿದ ಭರವಸೆಗಳನ್ನು ಈಡೇರಿಸಿದ್ದು ಎಷ್ಟು ಎಂಬುದರ ಕುರಿತು ಜನರಿಗೆ ಮಾಹಿತಿ ನೀಡಲಿ. ದೇಶವನ್ನು ಗುಜರಾತ್‌ ಮಾದರಿಯಲ್ಲಿ ಅಭಿವೃದ್ಧಿಗೊಳಿಸಿ ಅಚ್ಛೇದಿನ್‌ ತರಲಾಗುವುದು ಎಂಬ ಬಿಜೆಪಿ ಭರವಸೆ ಹುಸಿ ಆಗಿದೆ. ಸುಳ್ಳುಗಾರರ ಕೂಟ ಬಿಜೆಪಿ ಜನರಲ್ಲಿ ಭಾವನೆಗಳನ್ನು ಕೆರಳಿಸಲು ಕುಟಿಲ ತಂತ್ರ ಮಾಡುತ್ತಿದೆ ಎಂದು ಕಾಂಗ್ರೆಸ್‌ ಮುಖಂಡ ಅಮ್ರಪಾಲಿ ಸುರೇಶ್‌ ಆರೋಪಿಸಿದ್ದಾರೆ.
Vijaya Karnataka Web bjp does not bring achilles din
‘ಅಚ್ಛೇ ದಿನ್‌ ತರಲಿಲ್ಲ ಬಿಜೆಪಿ’


ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ರಾಜಕೀಯ ಪಕ್ಷವಾಗಿ ಸ್ಥಾಪನೆಗೊಂಡ ವರ್ಷದಿಂದ ಪ್ರತಿ ಚುನಾವಣೆಯಲ್ಲಿ ಸುಳ್ಳು ಹೇಳುತ್ತಿರುವ ಬಿಜೆಪಿ ಈಗಲೂ ಅದನ್ನೇ ಮುಂದುವರಿಸಿದೆ. ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿರ್ಮಿಸಲಾಗುವುದು ಎಂದು ಜನರಿಗೆ ನೀಡಿದ್ದ ಭರವಸೆ ಸುಳ್ಳಾಗಿದೆ. 2019ರ ಲೋಕಸಭಾ ಚುನಾವಣೆ ಸನಿಹದಲ್ಲಿ ಶ್ರೀರಾಮಮಂದಿರ ನಿರ್ಮಾಣಕ್ಕೆ ಆದ್ಯತೆ ನೀಡಲಾಗುತ್ತದೆ ಎಂದು ಗುಲ್ಲೆಬ್ಬಿಸಿ ಜನರ ಭಾವನೆ ಕೆರಳಿಸುವ ಪ್ರಯತ್ನ ಮಾಡಿದೆ. ಪುಲ್ವಾಮದಲ್ಲಿ ನಡೆದ ಸೈನಿಕರ ಹತ್ಯೆ ಘಟನೆಯನ್ನು ರಾಜಕೀಯ ಬಂಡವಾಳ ಮಾಡಿಕೊಂಡಿರುವ ಬಿಜೆಪಿ ಜನರನ್ನು ದಿಕ್ಕು ತಪ್ಪಿಸುತ್ತಿದೆ. ಸೈನಿಕರ ಸಾವಿನ ಘಟನೆಯ ದುಃಖವಿಲ್ಲದ ಬಿಜೆಪಿಗೆ ಓಟಿನ ಲೆಕ್ಕಾಚಾರ ಮುಖ್ಯವಾಗಿದೆ ಎಂದು ಆಪಾದಿಸಿದ್ದಾರೆ.

ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಉಪ ಚುನಾವಣೆ ಸೇರಿದಂತೆ ಬಿಜೆಪಿ 3ಅವಧಿಯಲ್ಲಿ ಸಂಸತ್‌ ಸ್ಥಾನದ ಅಧಿಕಾರ ಪಡೆದಿದೆ. ಕ್ಷೇತ್ರದಲ್ಲಿ ಯಾವುದೇ ಮಹತ್ವದ ಅಭಿವೃದ್ಧಿ ಕೆಲಸ ಮಾಡಿಲ್ಲ. ಸುಳ್ಳು ಪ್ರಚಾರ ಪಡೆಯುವುದು ಬಿಟ್ಟರೆ ಸಂಸದರಾಗಿದ್ದ ಯಡಿಯೂರಪ್ಪ, ರಾಘವೇಂದ್ರ ಜನಪರ ಕೆಲಸ ಮಾಡುವುದರಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಜನರಿಗೆ ಕೊಟ್ಟ ಭರವಸೆ ಈಡೇರಿಸದ ರಾಘವೇಂದ್ರ 2ಬಾರಿ ಸಂಸದರಾಗಿ ಮಾಡಿದ ಕೆಲಸ ಶೂನ್ಯ ಎಂದು ಅಮ್ರಪಾಲಿ ಸುರೇಶ್‌ ಹೇಳಿದ್ದಾರೆ.

ಏ.1ಕ್ಕೆ ಕಾರ‍್ಯಕರ್ತರ ಸಭೆ: ಕಾಂಗ್ರೆಸ್‌, ಜೆಡಿಎಸ್‌ ಮುಖಂಡರ, ಕಾರ‍್ಯಕರ್ತರ ಸಭೆ ಪಟ್ಟಣದ ಟಿಎಪಿಸಿಎಂಎಸ್‌ ಸಭಾಂಗಣದಲ್ಲಿ ಏ.1ರಂದು ಬೆಳಗ್ಗೆ 10ಕ್ಕೆ ನಡೆಯಲಿದೆ. ಮೈತ್ರಿ ಪಕ್ಷದ ಅಭ್ಯರ್ಥಿ ಮಧುಬಂಗಾರಪ್ಪ ಅವರ ಗೆಲುವಿಗೆ ಶ್ರಮಿಸುವ ಕುರಿತು ಸಭೆ ಒಮ್ಮತದ ತೀರ್ಮಾನ ತೆಗೆದುಕೊಳ್ಳಲಿದೆ. ಸಭೆಗೆ ಆಗಮಿಸುವಂತೆ ಅಮ್ರಪಾಲಿ ಸುರೇಶ್‌ ಕೋರಿದ್ದಾರೆ.

--------------
2018-19ನೇ ಸಾಲಿನ ಆರ್ಥಿಕ ವರ್ಷ ಮುಕ್ತಾಯದ ಮಾರ್ಚ್‌ ತಿಂಗಳಿನ ಈ ಸಂದರ್ಭ ಕೇಂದ್ರ ಸರಕಾರದ ಸೇವಾ ವ್ಯಾಪ್ತಿಯಲ್ಲಿರುವ ಬ್ಯಾಂಕ್‌ನಲ್ಲಿ ಜನರಿಗೆ ಉತ್ತಮ ಸೇವೆ ಸಿಗುತ್ತಿಲ್ಲ. ಬ್ಯಾಂಕ್‌ ಜನರಿಂದ ತುಂಬಿದ್ದು ಎಟಿಎಂ ಸೇವಾ ಘಟಕಗಳಲ್ಲಿ ಜನರಿಗೆ ಹಣ ಸಿಗುತ್ತಿಲ್ಲ. ಬಿಜೆಪಿ ಜನರನ್ನು ಕಷ್ಟಕ್ಕೆ ತಳ್ಳಿದೆ ಎಂಬುದು ಜನರಿಗೆ ಇದರಿಂದ ಗೊತ್ತಾಗುತ್ತಿದೆ.

- ಅಮ್ರಪಾಲಿ ಸುರೇಶ್‌

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ