ಆ್ಯಪ್ನಗರ

ಕಾರ‍್ಯಕರ್ತರಿಂದ ಬಿಜೆಪಿ ಬೆಳವಣಿಗೆ: ಬಿವೈಆರ್‌

ಜಿಲ್ಲೆಯಲ್ಲೇ ಅತಿ ಹೆಚ್ಚು ಬಿಜೆಪಿ ಸದಸ್ಯತ್ವ ತಾಲೂಕಲ್ಲಿ ಮಾಡುವ ಸಂಕಲ್ಪ ಪ್ರತಿಯೊಬ್ಬ ಕಾರ‍್ಯಕರ್ತ ಕೈಗೊಳ್ಳಬೇಕೆಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.

Vijaya Karnataka 8 Jul 2019, 5:00 am
ಶಿಕಾರಿಪುರ: ಜಿಲ್ಲೆಯಲ್ಲೇ ಅತಿ ಹೆಚ್ಚು ಬಿಜೆಪಿ ಸದಸ್ಯತ್ವ ತಾಲೂಕಲ್ಲಿ ಮಾಡುವ ಸಂಕಲ್ಪ ಪ್ರತಿಯೊಬ್ಬ ಕಾರ‍್ಯಕರ್ತ ಕೈಗೊಳ್ಳಬೇಕೆಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.
Vijaya Karnataka Web SMR-6skp2


ಪಟ್ಟಣದಲ್ಲಿ ಶನಿವಾರ ಬಿಜೆಪಿ ಆಯೋಜಿಸಿದ್ದ ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ವಿಶ್ವದಲ್ಲಿ ಬಿಜೆಪಿ ಅತಿ ಹೆಚ್ಚು ಸದಸ್ಯರನ್ನು ಹೊಂದಿರುವ ರಾಜಕೀಯ ಪಕ್ಷ . ದೇಶದ ಜನರು ಲೋಕಸಭೆ ಚುನಾವಣೆಯಲ್ಲಿ ಶೇ62ರಷ್ಟು ಮತವನ್ನು ನೀಡುವ ಮೂಲಕ ಆಶೀರ್ವದಿಸಿದ್ದಾರೆ ಎಂದರು.

ಸಾಮಾನ್ಯ ಕಾರ‍್ಯಕರ್ತರಾಗಿದ್ದ ನರೇಂದ್ರಮೋದಿ ಪಕ್ಷ ದ ಸಂಘಟನೆಯಲ್ಲಿ ತೊಡಗಿಸಿಕೊಂಡು ಇಂದು ವಿಶ್ವದ ನಾಯಕರಾಗಿ ಬೆಳೆದಿದ್ದಾರೆ. ಅದು ತಾಲೂಕು ಕಾರ‍್ಯಕರ್ತರಿಗೆ ಮಾದರಿಯಾಗಬೇಕು. ಕೂಲಿ ಕಾರ್ಮಿಕರಿಂದ ಹಿಡಿದು ವೈದ್ಯರು, ಎಂಜಿನಿಯರ್‌, ರೈತರು ಎಲ್ಲ ವರ್ಗದ ಜನರು ಪಕ್ಷ ದ ಸದಸ್ಯರಾಗುವ ನಿಟ್ಟಿನಲ್ಲಿ ಕಾರ‍್ಯ ಪ್ರವೃತ್ತರಾಗಬೇಕೆಂದರು.

ಪಕ್ಷ ಇಂದು ಎಲ್ಲ ಜಾತಿ, ಜನಾಂಗದವರ ಮೆಚ್ಚುಗೆಗೆ ಪಾತ್ರವಾಗಿದೆ. ಸರ್ವವ್ಯಾಪ್ತಿಯಾಗಿ ದೇಶದ ಮೂಲೆ, ಮೂಲೆಗಳಲ್ಲಿ ಪಕ್ಷ ಬೆಳೆದಿದೆ. ಇದಕ್ಕೆ ಕಾರಣ ಕಾರ್ಯಕರ್ತರು ಎಂದರು. ಜಿಲ್ಲಾ ಪ್ರಧಾನ ಕಾರ‍್ಯದರ್ಶಿ ಕೆ.ಎಸ್‌. ಗುರುಮೂರ್ತಿ ಪ್ರಾಸ್ತಾವಿಕ ಮಾತನಾಡಿದರು. ತಾಲೂಕು ಪ್ರಧಾನ ಕಾರ‍್ಯದರ್ಶಿ ಎಂ. ಸಿದ್ದಲಿಂಗಪ್ಪ ಸದಸ್ಯತ್ವ ಅಭಿಯಾನದ ಬಗ್ಗೆ ಮಾಹಿತಿ ನೀಡಿದರು. ತಾಲೂಕು ಬಿಜೆಪಿ ಅಧ್ಯಕ್ಷ Ü ಕೆ.ರೇವಣಪ್ಪ, ಮುಖಂಡರಾದ ಕೆ.ಶೇಖರಪ್ಪ, ಕೆ.ಹಾಲಪ್ಪ, ಅಗಡಿ ಅಶೋಕ್‌, ಬಿ.ಡಿ.ಭೂಕಾಂತ್‌, ಜಿಪಂ ಸದಸ್ಯರಾದ ಅರುಧತಿ ರಾಜೇಶ್‌, ಮಮತಾ ಸಾಲಿ, ರೇಣುಕ ಹನುಮಂತಪ್ಪ ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ