ಆ್ಯಪ್ನಗರ

BS Yediyurappa: ನಾವೇ ಸಿಎಂ ಎನ್ನುವವರ ಕನಸು ನನಸಾಗಲ್ಲ; ಇನ್ನೂ 10 ವರ್ಷ ರಾಜ್ಯ ಸಂಚಾರ: ಬಿಎಸ್‌ ಯಡಿಯೂರಪ್ಪ

ಇನ್ನೂ 10 ವರ್ಷ ರಾಜ್ಯ ಸಂಚರಿಸಿ ಪಕ್ಷ ಸಂಘಟಿಸುತ್ತೇನೆ. ನಾವೇ ಸಿಎಂ ಎನ್ನುವವರ ಕನಸು ನನಸಾಗುವುದಿರಲ್ಲ ಎಂದು ಮಾಜಿ ಸಿಎಂ ಬಿಎಸ್‌ ಯಡಿಯೂರಪ್ಪ ಹೇಳಿದ್ದಾರೆ. ಜೆಡಿಎಸ್‌ ಮುಖಂಡ ಎಚ್‌ಟಿ ಬಳಿಗಾರ್‌ ಬೆಂಬಲಿಗರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡ ಬಳಿಕ ಮಾತನಾಡಿದ ಅವರು, ಎಚ್‌ಟಿ ಬಳಿಗಾರ್‌ ಸೇರ್ಪಡೆಯಿಂದ ಶಿಕಾರಿಪುರದಲ್ಲಿ ಬಿಜೆಪಿಗೆ ಆನೆಬಲ ಬಂದಿದೆ ಎಂದರು.

Edited byಅವಿನಾಶ ವಗರನಾಳ | Vijaya Karnataka Web 29 Nov 2022, 8:09 pm

ಹೈಲೈಟ್ಸ್‌:


  • ನಾವೇ ಸಿಎಂ ಎನ್ನುವವರ ಕನಸು ನನಸಾಗಲ್ಲ ಎಂದ ಬಿಎಸ್‌ ಯಡಿಯೂರಪ್ಪ
  • ಇನ್ನೂ 10 ವರ್ಷ ರಾಜ್ಯ ಸಂಚಾರ ಮಾಡಿ ಪಕ್ಷ ಸಂಘಟಿಸ್ತೀನಿ ಎಂದ ಬಿಎಸ್‌ವೈ
  • ʼಜೆಡಿಎಸ್‌ ಮುಖಂಡ ಎಚ್‌ಡಿ ಬಳಿಗಾರ್‌ ಸೇರ್ಪಡೆಯಿಂದ ಪಕ್ಷಕ್ಕೆ ಆನೆಬಲʼ
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web BS Yediyurappa
ಶಿಕಾರಿಪುರ (ಶಿವಮೊಗ್ಗ): ನಾವೇ ಸಿಎಂ ಎನ್ನುವವರ ಕನಸು ನನಸಾಗುವುದಿಲ್ಲ, ಇನ್ನೂ 10 ವರ್ಷ ರಾಜ್ಯ ಸಂಚರಿಸಿ ಪಕ್ಷ ಸಂಘಟಿಸುತ್ತೇನೆ ಎಂದು ನಿಕಟಪೂರ್ವ ಮುಖ್ಯಮಂತ್ರಿ 79 ವರ್ಷದ ಬಿಎಸ್‌ ಯಡಿಯೂರಪ್ಪ ಹೇಳಿದ್ದಾರೆ.
ಪಟ್ಟಣದಲ್ಲಿ ಮಂಗಳವಾರ ಎಚ್‌ಟಿ ಬಳಿಗಾರ್‌ ಬೆಂಬಲಿಗರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡ ಬಳಿಕ ಮಾತನಾಡಿದ ಅವರು, ಜೆಡಿಎಸ್‌ ಮುಖಂಡ ಎಚ್‌ಟಿ ಬಳಿಗಾರ್‌ ಬಿಜೆಪಿ ಸೇರ್ಪಡೆಯಾಗಿರುವುದು ತಾಲೂಕಿನಲ್ಲಿ ಪಕ್ಷಕ್ಕೆ ಆನೆಬಲ ಬಂದಿದೆ. ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಿ ಅವರಿಗೆ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ನೀಡಲಾಗುವುದು ಎಂದರು.

ಹಿಂದೂ-ಮುಸ್ಲಿಂ ಒಂದೇ ತಾಯಿ ಮಕ್ಕಳಂತೆ ಕಾಣುತ್ತೇನೆ ಎನ್ನುವುದು ತಮಗೆ ಗೊತ್ತಿದೆ. ಬಳಿಗಾರ್‌ ಅವರೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಅಲ್ಪಸಂಖ್ಯಾತರು ಆಗಮಿಸಿದ್ದು, ಅವರೆಲ್ಲರನ್ನೂ ಗೌರವದಿಂದ ನಡೆಸಿಕೊಳ್ಳುತ್ತೇವೆ. ಮೋದಿ ಅವರ ಕಾರ‍್ಯವೈಖರಿ ಮೆಚ್ಚಿ, ಜಿಲ್ಲೆಯಲ್ಲಿಆಗಿರುವ ಅಭಿವೃದ್ಧಿ ಕೆಲಸ ಮೆಚ್ಚಿ ಪಕ್ಷಕ್ಕೆ ಆಗಮಿಸಿದ್ದಾರೆ. ಪಕ್ಷ ಬಲಪಡಿಸುವುದಕ್ಕೆ ರಾಜ್ಯದ ಉದ್ದಗಲಕ್ಕೆ ಬಳಿಗಾರ್‌ ಸಂಚಾರ ಮಾಡುತ್ತಾರೆ. ಅದಕ್ಕೆ ಅಗತ್ಯವಿರುವ ಸ್ಥಾನಮಾನ ನೀಡುತ್ತೇವೆ ಎಂದರು.

ಎಚ್‌ಟಿ ಬಳಿಗಾರ್‌ ಮಾತನಾಡಿ, ಹೋರಾಟದ ಮೂಲಕ ಬಿಎಸ್‌ವೈ ರಾಜಕೀಯ ಪ್ರವೇಶ ಮಾಡಿದ್ದು ಅವರ ಹೋರಾಟದ ದಿನ ಇಂದಿಗೂ ರೋಚಕತೆ ಮೂಡಿಸುತ್ತದೆ. ವಿಧಾನಸಭೆಯಲ್ಲೂ ವಿನಾಕಾರಣ ಕಾಲಕಳೆಯದೆ ನಾಡಿನ ಸಮಸ್ಯೆ ಪರಿಹಾರಕ್ಕೆ ಒತ್ತು ನೀಡುತ್ತಾರೆ. ಜಿಲ್ಲೆಯ ಅಭಿವೃದ್ಧಿ ಕಾರ‍್ಯ ಮೆಚ್ಚಿದ್ದೇನೆ. ವಿಶ್ವವೇ ಮೋದಿಗೆ ಗೌರವ ನೀಡುವಂತ ಆಡಳಿತ ದೇಶಕ್ಕೆ ಹೆಮ್ಮೆ. ಅದಕ್ಕಾಗಿ ನಾನು ಬಿಜೆಪಿ ಸೇರ್ಪಡೆಗೊಂಡಿದ್ದೇನೆ ಎಂದು ಹೇಳಿದರು.

Induvalu Sachidananda: ಬಿಜೆಪಿ ಸೇರಿದ ಸುಮಲತಾ ಆಪ್ತ ಇಂಡುವಾಳು ಸಚ್ಚಿದಾನಂದ; ನಾಗಮಂಗಲದ ಫೈಟರ್‌ ರವಿ ಕೂಡ ಕಮಲ ತೆಕ್ಕೆಗೆ!
ಸಂಸದ ಬಿವೈ ರಾಘವೇಂದ್ರ ಮಾತನಾಡಿ, ಎಚ್‌ಟಿ ಬಳಿಗಾರ್‌ ಒಂದು ಸಮಾಜಕ್ಕೆ ಸೀಮಿತವಲ್ಲ. ಅವರು ಎಲ್ಲ ವರ್ಗದ ಜನರ ಹಿತಕ್ಕಾಗಿ ಹಲವು ಹೋರಾಟ ನಡೆಸಿದ್ದಾರೆ. ಅವರೊಂದಿಗೆ ಬಂದಿರುವ ಎಲ್ಲರಿಗೂ ಗೌರವದಿಂದ ನಡೆಸಿಕೊಳ್ಳುತ್ತೇವೆ. ಬಳಿಗಾರ್‌ ಚಿಂತನೆ ಪರಿಶ್ರಮ ಮೌಲ್ಯಯುತವಾಗಿದೆ. ಆದರೆ, ಅವರಿದ್ದ ಸ್ಥಾನ ಸರಿಯಿಲ್ಲ. ನಮ್ಮೊಂದಿಗೆ ಆಗಮಿಸಿ ಎಂದು ಕೇಳಿದ್ದಕ್ಕೆ ಗೌರವ ನೀಡಿ ಆಗಮಿಸಿದ್ದಾರೆ ಎಂದರು. ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿವೈ ವಿಜಯೇಂದ್ರ, ಎಂಎಡಿಬಿ ಅಧ್ಯಕ್ಷ ಕೆಎಸ್‌ ಗುರುಮೂರ್ತಿ, ಮುಖಂಡರಾದ ರೇವಣಪ್ಪ, ಕೆ.ಹಾಲಪ್ಪ, ಟಿ.ಎಸ್‌.ಮೋಹನ್‌, ರುದ್ರಪ್ಪಯ್ಯ, ವೀರೇಂದ್ರ ಪಾಟೀಲ್‌ ಸೇರಿದಂತೆ ಹಲವು ಮುಖಂಡರು, ನೂರಾರು ಕಾರ‍್ಯಕರ್ತರು ಇದ್ದರು.

Karnataka assembly election 2023 - ಶಿವಮೊಗ್ಗ ಕಾಂಗ್ರೆಸ್ ಪಡೆಯಲ್ಲಿ ಡಜನ್‌ ಆಕಾಂಕ್ಷಿಗಳು
ಜೆಡಿಎಸ್‌ನಿಂದ 2 ಬಾರಿ ವಿಧಾನಸಭಾ ಚುನಾವಣೆಗೆ ಸ್ಪರ್ಧೆ!
ವಾಲ್ಮೀಕಿ ಸಮುದಾಯದ ಮುಖಂಡರಾದ ಬಳಿಗಾರ್, ಶಿಕಾರಿಪುರ ತಾಲೂಕಿನ ಮತ್ತಿಕೋಟೆ ಗ್ರಾಮದವರಾಗಿದ್ದಾರೆ. ಕೆಎಎಸ್ ಅಧಿಕಾರಿಯಾಗಿದ್ದ ಅವರು ಹುದ್ದೆಗೆ ರಾಜೀನಾಮೆ ನೀಡಿ ತಾಲೂಕಿಗೆ ಬಂದು ರಾಜಕೀಯ ಕ್ಷೇತ್ರದಲ್ಲಿ ತೊಡಗಿಕೊಂಡಿದ್ದರು. ಮಾಜಿ ಮುಖ್ಯಮಂತ್ರಿ ಎಸ್‌ ಬಂಗಾರಪ್ಪ ಹಾಗೂ ಮಾಜಿ ಶಾಸಕ ಮಧು ಬಂಗಾರಪ್ಪ ಅವರಿಗೆ ಆಪ್ತರಾಗಿದ್ದ ಅವರು, ಜೆಡಿಎಸ್‌ನಿಂದ ಎರಡು ಬಾರಿ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲು ಅನುಭವಿಸಿದ್ದರು. ಈ ಬಾರಿಯೂ ಸಹ ಎಚ್‌ಟಿ ಬಳಿಗಾರ್‌ಗೆ ಜೆಡಿಎಸ್‌ನಿಂದ ಟಿಕೆಟ್‌ ನೀಡಲಾಗಿತ್ತು. ಆದರೆ, ಕೊನೆ ಕ್ಷಣದಲ್ಲಿ ಎಚ್‌ಟಿ ಬಳಿಗಾರ್‌ ಬಿಜೆಪಿಗೆ ಸೇರಿರುವುದು ಜೆಡಿಎಸ್‌ಗೆ ಹಿನ್ನಡೆಯಾಗಿದೆ.
ಲೇಖಕರ ಬಗ್ಗೆ
ಅವಿನಾಶ ವಗರನಾಳ
ವಿಜಯ ಕರ್ನಾಟಕ ಡಿಜಿಟಲ್‌ ವಿಭಾಗದಲ್ಲಿ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿರುವ ಇವರು ಕಳೆದ 6 ವರ್ಷಗಳಿಂದ ವಿವಿಧ ಪತ್ರಿಕೆ, ವಿದ್ಯುನ್ಮಾನ ಮಾಧ್ಯಮದಲ್ಲಿ ಕಾರ್ಯನಿರ್ವಹಿಸಿದ್ದಾರೆ. ಸದ್ಯ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಒಂದಿಷ್ಟು ದಿನ ಕೆಲ ಸಂಸ್ಥೆಗಳಲ್ಲಿ ಸಾರ್ವಜನಿಕ ಸಂಪರ್ಕವನ್ನು ನಿಭಾಯಿಸಿದ್ದಾರೆ. ಇವರು ಹುಟ್ಟಿ ಬೆಳೆದಿದ್ದು ಭತ್ತದ ನಾಡು, ಹನುಮ ಹುಟ್ಟಿದ ನಾಡು ಗಂಗಾವತಿಯಲ್ಲಿ. ಕುವೆಂಪು ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ರಾಜಕೀಯ ವಿಷಯಗಳು, ಪ್ರಚಲಿತ ವಿದ್ಯಮಾನಗಳ ಮೇಲೆ ಆಸಕ್ತಿ. ತಂತ್ರಜ್ಞಾನದ ವಿಷಯಗಳು ಇವರಿಗೆ ಹೆಚ್ಚು ಆಪ್ತ. ಇವರಿಗೆ ಊರೂರು ಸುತ್ತೋದು.. ಕ್ರಿಕೆಟ್‌ ಆಡೋದು.. ಅದಿದು ಹುಡುಕೋದು ಇಷ್ಟ. ಅಂತೆ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ