ಆ್ಯಪ್ನಗರ

ಒಗ್ಗಟ್ಟಿನ ಹೋರಾಟದಿಂದ ಬಿಜೆಪಿಗೆ ಗೆಲುವು

ಜನರ ಪ್ರೀತಿ, ಕಾರ್ಯಕರ್ತರ ಶ್ರಮ, ರಾಷ್ಟ್ರೀಯ ನಾಯಕರ ಆಗಮನ ಕಾರಣದಿಂದಲೇ ಅಭೂತಪೂರ್ವ ಬೆಂಬಲ ದೊರಕಿದೆ ಎಂದು ಜಿಲ್ಲಾಧ್ಯಕ್ಷ ಎಸ್‌.ರುದ್ರೇಗೌಡ ಹೇಳಿದರು.

Vijaya Karnataka 17 May 2018, 5:00 am
ಶಿವಮೊಗ್ಗ : ಜನರ ಪ್ರೀತಿ, ಕಾರ್ಯಕರ್ತರ ಶ್ರಮ, ರಾಷ್ಟ್ರೀಯ ನಾಯಕರ ಆಗಮನ ಕಾರಣದಿಂದಲೇ ಅಭೂತಪೂರ್ವ ಬೆಂಬಲ ದೊರಕಿದೆ ಎಂದು ಜಿಲ್ಲಾಧ್ಯಕ್ಷ ಎಸ್‌.ರುದ್ರೇಗೌಡ ಹೇಳಿದರು.
Vijaya Karnataka Web bjp victory from unity struggle
ಒಗ್ಗಟ್ಟಿನ ಹೋರಾಟದಿಂದ ಬಿಜೆಪಿಗೆ ಗೆಲುವು


ಸುದ್ದಿಗೋಷ್ಠಿಯಲ್ಲಿ ಬುಧವಾರ ಅವರು ಮಾತನಾಡಿ, ಜಿಲ್ಲೆಯ ಏಳು ತಾಲೂಕುಗಳ ಪೈಕಿ ಬಿಜೆಪಿ 6 ಸ್ಥಾನ ಗೆದ್ದಿದೆ. ಅಭ್ಯರ್ಥಿಗಳ ಗೆಲುವಿನಲ್ಲಿ ಕಾರ್ಯಕರ್ತರ ಶ್ರಮ ಹೆಚ್ಚಿದೆ ಎಂದರು.

ಜಿಲ್ಲೆಯಲ್ಲಿ ಒಂದು ವರ್ಷದ ಮೊದಲೇ ಚುನಾವಣಾ ತಯಾರಿ ನಡೆಸಿತ್ತು. ಹೀಗಾಗಿ ಕಾರ್ಯಕರ್ತರಲ್ಲಿ ಹುಮ್ಮಸ್ಸು ತುಂಬಿತ್ತು. ಜತೆಗೆ ಎಲ್ಲೆಲ್ಲಿ ನ್ಯೂನ್ಯತೆಗಳು ಇವೆಯೋ ಅಲ್ಲೆಲ್ಲ ಸರಿಪಡಿಸಿಕೊಂಡು ಎಲ್ಲ ನಾಯಕರು ಹೊಂದಾಣಿಕೆಯಲ್ಲಿ ಚುನಾವಣೆ ಎದುರಿಸಿದ ಫಲವಾಗಿ ಗೆಲುವು ನಮಗೆ ದೊರಕಿದೆ ಎಂದರು.

ಗ್ರಾಮಾಂತರ ಕ್ಷೇತ್ರ ಹೊರತು ಪಡಿಸಿ ಉಳಿದೆಲ್ಲ ಕ್ಷೇತ್ರಗಳಲ್ಲಿ 20 ಸಾವಿರಕ್ಕೂ ಮತಗಳ ಅಂತರದಿಂದ ತಮ್ಮ ಅಭ್ಯರ್ಥಿಗಳು ವಿಜೇತರಾಗಿದ್ದಾರೆ. ಇದಕ್ಕೆ ರಾಷ್ಟ್ರೀಯ ಅಧ್ಯಕ್ಷ ರು ಕೊಟ್ಟ ಕಾರ್ಯಕ್ರಮಗಳು ಪೂರಕವಾಗಿವೆ. ಪ್ರಧಾನಿ ಮೋದಿ ಅವರು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರು ಕರ್ನಾಟಕಕ್ಕೆ ಬಂದು ಸ್ಥಳೀಯ ಸಮಸ್ಯೆಗಳನ್ನಿಟ್ಟುಕೊಂಡು ಮತದಾರರಿಗೆ ಮನದಟ್ಟು ಮಾಡಿದರು. ಅವರ ಕರೆಗಳು ಕಾರ್ಯಕರ್ತರನ್ನು ಒಟ್ಟುಗೂಡಿಸಿದವು. ಹಾಗಾಗಿ ಕರ್ನಾಟಕದಲ್ಲಿ ಬಿಜೆಪಿ ಅತಿ ದೊಡ್ಡ ಪಕ್ಷ ವಾಗಿ ಹೊರಹೊಮ್ಮಿದೆ ಎಂದರು.

ಗೋಷ್ಠಿಯಲ್ಲಿ ಪ್ರಮುಖರಾದ ದತ್ತಾತ್ರಿ, ಡಿ.ಎಸ್‌.ಅರುಣ್‌, ಬಿಳಕಿ ಕೃಷ್ಣಮೂರ್ತಿ, ಕೆ.ಜಿ.ಕುಮಾರಸ್ವಾಮಿ, ಎನ್‌.ಜೆ.ರಾಜಶೇಖರ್‌, ಮಧುಸೂದನ್‌, ಹಿರಣ್ಣಯ್ಯ, ಕೆ.ವಿ. ಅಣ್ಣಪ್ಪ ಮತ್ತಿತರರು ಇದ್ದರು.

ಕೆಬಿಪಿ ಆರೋಪ ಸುಳ್ಳು:

ಧರ್ಮದ ವಿಚಾರದಲ್ಲಿ ಬಿಜೆಪಿ ಅಪಪ್ರಚಾರ ಮಾಡಿದೆ. ಜತೆಗೆ 25 ಕೋಟಿಗೂ ಹೆಚ್ಚು ಹಣ ಹಂಚಿದ್ದಾರೆ ಎಂದು ಕಾಂಗ್ರೆಸ್‌ ಅಭ್ಯರ್ಥಿ ಕೆ.ಬಿ.ಪ್ರಸನ್ನಕುಮಾರ್‌ ಆರೋಪ ಮಾಡಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ರುದ್ರೇಗೌಡ, ಹಣ ಹಂಚಿ ಅಧಿಕಾರಕ್ಕೆ ಬರುವ ಅಗತ್ಯ ಬಿಜೆಪಿಗೆ ಇನ್ನೂ ಬಂದಿಲ್ಲ. 25 ಕೋಟಿ ಹಣ ಹಂಚಿದ್ದೇವೆ ಎನ್ನುವುದಕ್ಕೆ ಅವರ ಬಳಿ ದಾಖಲೆ ಏನಿದೆ. ನಾವು ಹಿಂದುತ್ವದ ಅಡಿಯಲ್ಲಿ ಮತ ಕೇಳಿದ್ದಂತೂ ನಿಜ. ಧರ್ಮಗಳ ವಿಚಾರದಲ್ಲಿ ಅಪಪ್ರಚಾರ ಮಾಡಿಲ್ಲ ಎಂದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ