ಆ್ಯಪ್ನಗರ

ದುಶ್ಚಟಗಳಿಂದ ದೇಹ, ಕುಟುಂಬ ಅವನತಿ: ಸ್ವಾಮೀಜಿ

ದುಶ್ಚಟಗಳನ್ನು ಅಳವಡಿಸಿಕೊಂಡರೆ ದೇಹ ಹಾಗೂ ಕುಟುಂಬ ಅವನತಿಯತ್ತ ಸಾಗುತ್ತದೆ ಎಂದು ಜಡೆ ಸಂಸ್ಥಾನ ಮಠದ ಡಾ.ಮಹಾಂತಸ್ವಾಮೀಜಿ ಹೇಳಿದರು.

Vijaya Karnataka 3 Jul 2019, 5:00 am
ಸೊರಬ: ದುಶ್ಚಟಗಳನ್ನು ಅಳವಡಿಸಿಕೊಂಡರೆ ದೇಹ ಹಾಗೂ ಕುಟುಂಬ ಅವನತಿಯತ್ತ ಸಾಗುತ್ತದೆ ಎಂದು ಜಡೆ ಸಂಸ್ಥಾನ ಮಠದ ಡಾ.ಮಹಾಂತಸ್ವಾಮೀಜಿ ಹೇಳಿದರು.
Vijaya Karnataka Web SMR-02SRBP1


ತಾಲೂಕಿನ ಹೊಳೆಕೊಪ್ಪದ ಶ್ರೀ ಧನಾಂಜನೇಯ ಸಭಾ ಮಂಟಪದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಸೋಮವಾರ ಹಮ್ಮಿಕೊಂಡಿದ್ದ ಮದ್ಯವರ್ಜನ ಶಿಬಿರ ಸಮಾರೋಪದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಸಮಸ್ಯೆಗಳಿಗೆ ಕುಡಿತವೇ ಪರಿಹಾರವೆಂದರೆ ಬದುಕು ಬೀದಿಪಾಲಾಗುತ್ತದೆ. ಮನುಷ್ಯ ದೇಹಕ್ಕೆ ಹಿತಕರವಾದ ಸಂಸ್ಕಾರಗಳನ್ನು ಕೊಟ್ಟಾಗ ಸಜ್ಜನರನ್ನಾಗಿ ಮಾಡುತ್ತದೆ. ಯಾವುದೋ ಸಮಸ್ಯೆಯಿಂದಾಗಿ ಅಥವಾ ಸಮಸ್ಯೆಗಳಿದಾವೆಂದು ಮದ್ಯಪಾನಕ್ಕೆ ದಾಸನಾಗುವುದು ಸರಿಯಾದುದಲ್ಲ. ವ್ಯಸನಿಗಳನ್ನು ಮದ್ಯದಿಂದ ಮುಕ್ತಗೊಳಿಸಿ ಸಮಾಜದಲ್ಲಿ ಸನ್ಮಾರ್ಗದತ್ತ ನಡೆಯುವಂತೆ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆ ಮಾಡುತ್ತಿರುವುದು ಶ್ಲಾಘನೀಯ ಎಂದರು.

ಅರ್ಚಕ ಶ್ರೀಪಾದ ಭಟ್ಟ ಮಲ್ಲಿಕ್‌ ಮಾತನಾಡಿ, ಎಲ್ಲ ಜನ್ಮಕ್ಕಿಂತ ಮನುಷ್ಯ ಜನ್ಮ ಶ್ರೇಷ್ಠ ಹಾಗೂ ಸಾರ್ಥಕ. ರೋಗಕ್ಕಿಂತ ಮಿಗಿಲಾದ ಶತ್ರು ಮತ್ತೊಂದಿಲ್ಲ. ಆದರೆ, ಸ್ವಯಂಕೃತನಾಗಿ ಮದ್ಯಪಾನಕ್ಕೆ ದಾಸನಾಗುವುದು ಮಹಾಪಾಪ ಎಂದರು.

ಧರ್ಮದರ್ಶಿ ರಾಮಪ್ಪ ಮಾತನಾಡಿದರು. ಉಳಿವಿ ಗ್ರಾ.ಪಂ. ಅಧ್ಯಕ್ಷ ಮಹಾದೇವಪ್ಪ ಅಧ್ಯಕ್ಷ ತೆ ವಹಿಸಿ ಮಾತನಾಡಿದರು.

ತಾ.ಪಂ. ಸದಸ್ಯ ನಾಗರಾಜ ಚಿಕ್ಕಸವಿ, ಉಳವಿ ಗ್ರಾ.ಪಂ. ಸದಸ್ಯ ಬೈರಪ್ಪ, ಕಾಳಿಂಗರಾಜ್‌, ಕೃಷ್ಣಪ್ಪ ದೂಗೂರು, ಗಜಾನನ ರಾವ್‌, ಯೋಜನಾಧಿಕಾರಿ ರಮೇಶ್‌, ರಾಜಶೇಖರ್‌, ಮೇಲ್ವಿಚಾರಕ ಸಂತೋಷ್‌ ಮತ್ತಿತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ