ಆ್ಯಪ್ನಗರ

ಕರಾಟೆಯಿಂದ ದೇಹ, ಮನಸ್ಸು ಗಟ್ಟಿ

ಕರಾಟೆ ಆತ್ಮರಕ್ಷ ಣೆಯ ಏಕಾಗ್ರತೆ ಕ್ರೀಡೆಯಾಗಿದೆ. ದೇಹ ಮತ್ತು ಮನಸ್ಸನ್ನು ಗಟ್ಟಿಗೊಳಿಸುವಂತಹದ್ದಾಗಿದೆ ಎಂದು ಜಿಲ್ಲಾ ವರಿಷ್ಠಾಧಿಕಾರಿ ಕೆ.ಎಂ.ಶಾಂತರಾಜು ಹೇಳಿದರು.

Vijaya Karnataka 25 Aug 2019, 5:00 am
ಶಿವಮೊಗ್ಗ: ಕರಾಟೆ ಆತ್ಮರಕ್ಷ ಣೆಯ ಏಕಾಗ್ರತೆ ಕ್ರೀಡೆಯಾಗಿದೆ. ದೇಹ ಮತ್ತು ಮನಸ್ಸನ್ನು ಗಟ್ಟಿಗೊಳಿಸುವಂತಹದ್ದಾಗಿದೆ ಎಂದು ಜಿಲ್ಲಾ ವರಿಷ್ಠಾಧಿಕಾರಿ ಕೆ.ಎಂ.ಶಾಂತರಾಜು ಹೇಳಿದರು.
Vijaya Karnataka Web body and mind strong from karate
ಕರಾಟೆಯಿಂದ ದೇಹ, ಮನಸ್ಸು ಗಟ್ಟಿ


ನಗರದ ನೆಹರೂ ಒಳಾಂಗಣದಲ್ಲಿ ಶಿವಮೊಗ್ಗ ಸಿಟಿ ಕರಾಟೆ ಅಸೋಸಿಯೇಶನ್‌, ಮೌಲೆ ಶೋಟೊಕಾನ್‌ ಕರಾಟೆ ಡು ಅಸೋಸಿಯೇಶನ್‌ ವತಿಯಿಂದ ಹಮ್ಮಿಕೊಂಡಿರುವ ಎರಡು ದಿನಗಳ 2ನೇ ಅಂತಾರಾಷ್ಟ್ರಿಯ ಮಟ್ಟದ ಕರಾಟೆ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು.

ಕ್ರೀಡೆಯು ಸದೃಢತೆಯೊಂದಿಗೆ ಚಲನಶೀಲತೆ ನೀಡುತ್ತದೆ. ಮುಖ್ಯವಾಗಿ ನಮ್ಮ ಯುವ ಜನಾಂಗ ಅದರಲ್ಲೂ ಯುವತಿಯರು ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳಬೇಕಿದೆ. ಕರಾಟೆ ಆತ್ಮರಕ್ಷ ಣೆಯ ಜೊತೆಗೆ ಆತ್ಮಾಭಿಮಾನ ಬೆಳೆಸುತ್ತದೆ ಎಂದರು.

ಸ್ಪರ್ಧೆಯಲ್ಲಿ ಸೋಲು ಗೆಲುವು ಸಹಜ. ಎಲ್ಲವನ್ನು ಸಮಚಿತ್ತದಿಂದ ಸ್ವೀಕರಿಸಬೇಕು. ಸೋಲಿಗೆ ಕುಗ್ಗದೇ ಗೆಲುವಿಗೆ ಹಿಗ್ಗದೇ ಕ್ರೀಡಾ ಸ್ಫೂರ್ತಿ ಮೆರೆಯಬೇಕು. ನಿಯಮಗಳನ್ನು ಪಾಲಿಸಬೇಕು ಎಂದು ಸಲಹೆ ನೀಡಿದರು.

ನರೇಂದ್ರ ಮೋದಿ ವಿಚಾರ ಮಂಚ್‌ನ ಅಧ್ಯಕ್ಷ ಬಳ್ಳೆಕೆರೆ ಸಂತೋಷ್‌, ನೇಪಾಳ ಕರಾಟೆ ತರಬೇತುದಾರ ಸೆನ್ಸಾಯ್‌ ಅಚ್ಚುತ್‌ ರಾಜ್‌, ಬಾಂಗ್ಲಾದೇಶದ ಮುಖ್ಯ ತರಬೇತುದಾರ ಆರೀಫ್‌ ವುರ್‌ ರೆಹಮಾನ್‌, ಕರಾಟೆ ಫೆಡರೇಷನ್‌ ಸಂಚಾಲಕ ವಿನೋದ್‌, ಚಂದ್ರಕುಮಾರ್‌, ಕರ್ನಾಟಕ ಕರಾಟೆ ಅಸೋಸಿಯೇಷನ್‌ ಅಧ್ಯಕ್ಷ ಅಲ್ತಾಫ್‌ ಪಾಶಾ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ