ಆ್ಯಪ್ನಗರ

ದುರ್ಗಿಗುಡಿ ಶಾಲೆಯಲ್ಲಿ ವಿದ್ಯಾರ್ಥಿ ಮೂಳೆ ಮುರಿತ

ನಗರದ ದುರ್ಗಿಗುಡಿ ಸರಕಾರಿ ಶಾಲೆಯಲ್ಲಿ ವಿದ್ಯಾರ್ಥಿಗೆ ಬಸ್ಕಿ ಹೊಡೆಸಿದ ಪ್ರಕರಣ ವಿವಾದಕ್ಕೀಡಾದ ಬೆನ್ನ ಹಿಂದೆಯೆ ಮತ್ತೊಬ್ಬ ವಿದ್ಯಾರ್ಥಿಗೆ ಎಡಭುಜದ ಬೆನ್ನಿನ ಮೂಳೆ ಮುರಿದ ಘಟನೆ ಮೂರು ದಿನದ ಬಳಿಕ ಬೆಳಕಿಗೆ ಬಂದಿದೆ.

Vijaya Karnataka 13 Jan 2019, 5:00 am
ಶಿವಮೊಗ್ಗ : ನಗರದ ದುರ್ಗಿಗುಡಿ ಸರಕಾರಿ ಶಾಲೆಯಲ್ಲಿ ವಿದ್ಯಾರ್ಥಿಗೆ ಬಸ್ಕಿ ಹೊಡೆಸಿದ ಪ್ರಕರಣ ವಿವಾದಕ್ಕೀಡಾದ ಬೆನ್ನ ಹಿಂದೆಯೆ ಮತ್ತೊಬ್ಬ ವಿದ್ಯಾರ್ಥಿಗೆ ಎಡಭುಜದ ಬೆನ್ನಿನ ಮೂಳೆ ಮುರಿದ ಘಟನೆ ಮೂರು ದಿನದ ಬಳಿಕ ಬೆಳಕಿಗೆ ಬಂದಿದೆ.
Vijaya Karnataka Web bone fracture to durgigudi school student
ದುರ್ಗಿಗುಡಿ ಶಾಲೆಯಲ್ಲಿ ವಿದ್ಯಾರ್ಥಿ ಮೂಳೆ ಮುರಿತ


7ನೇ ತರಗತಿ ವಿದ್ಯಾರ್ಥಿ ಗೌತಮ್‌ ಎಡ ಭುಜದ ಬೆನ್ನಿನ ಮೂಳೆ ಮುರಿದಿದ್ದು ಇದಕ್ಕೆ ಸಂಬಂಧಿಸಿದಂತೆ ಆತನ ತಾಯಿ ಸುಮತಿ ಅವರು ಜಯನಗರ ಠಾಣೆಗೆ ಶನಿವಾರ ಸಂಜೆ ದೂರು ಸಲ್ಲಿಸಿದ್ದಾರೆ.

ಜ.9ರಂದು ಕನ್ನಡ ತರಗತಿಯಲ್ಲಿ ಗೌತಮ್‌ ರಫ್‌ನೋಟ್‌ನಲ್ಲಿ ಬರೆದುಕೊಳ್ಳದೆ ಪಠ್ಯಪುಸ್ತಕದಲ್ಲೇ ಬರೆದುಕೊಂಡಿದ್ದರಿಂದ ಕೋಪಗೊಂಡ ಶಿಕ್ಷಕ ಪರಮೇಶ್ವರಪ್ಪ ಅವರು ಕೆನ್ನೆಗೆ ಬಾರಿಸಿದ್ದಲ್ಲದೆ ಬೆನ್ನಿಗೆ ಗುದ್ದಿದ್ದಾರೆ. ಈ ಸಂದರ್ಭದಲ್ಲಿ ಮುಂದಕ್ಕೆ ಮುಗ್ಗರಿಸಿದಾಗ ಟೇಬಲ್‌ಗೆ ಗೌತಮ್‌ ಎಡಭುಜದ ಬೆನ್ನು ತಗುಲಿದೆ. ಬೆನ್ನು ಹಿಡಿದುಕೊಂಡು ನೋವಿನಿಂದ ಅಳುತ್ತಿದ್ದ ಆತನನ್ನು ಪರಮೇಶ್ವರಪ್ಪ ಅವರು ಮೆಗ್ಗಾನ್‌ ಆಸ್ಪತ್ರೆಯಲ್ಲಿ ನೋವು ನಿವಾರಕ ಮಾತ್ರೆಗಳನ್ನು ಕೊಡಿಸಿ ಕಳಿಸಿದ್ದರು.

ಆದರೆ, ಮನೆಗೆ ಬಂದ ಬಳಿಕವೂ ಗೌತಮನಿಗೆ ನೋವು ಕಡಿಮೆಯಾಗಿರಲಿಲ್ಲ. ಅವರ ತಾಯಿ ಖಾಸಗಿ ಅಸ್ಪತ್ರೆಯಲ್ಲಿ ಎಕ್ಸ್‌ ರೇ ತೆಗೆಸಿದಾಗ ಮೂಳೆ ಮುರಿದಿರುವುದು ಗೊತ್ತಾಗಿದೆ. ಇದು ಗೊತ್ತಾಗುತ್ತಿದ್ದಂತೆ ಶಿಕ್ಷಕರು ಮತ್ತು ಎಸ್‌ಡಿಎಂಸಿಯವರು ಮನೆಗೆ ತೆರಳಿ ಗೌತಮ್‌ ಮತ್ತು ಆತನ ತಾಯಿಗೆ ಸಮಾಧಾನ ಮಾಡಿ ಚಿಕಿತ್ಸೆ ವೆಚ್ಚ ಭರಿಸಲಾಗುವುದು ಎಂದು ಹೇಳಿ ದೂರು ನೀಡದಂತೆ ಒತ್ತಾಯಿಸಿದ್ದರೆಂದು ಹೇಳಲಾಗಿದೆ.

-------------------------


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ